ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಅಯೋಧ್ಯೆ ಶ್ರೀ ರಾಮ ಮಂದಿರ Ayodhya Shri Ramamandira ಉದ್ಘಾಟನೆ ಮತ್ತು ರಾಮ ಪ್ರಾಣ ಪ್ರತಿಷ್ಥಾಪನೆಯ ಐತಿಹಾಸಿಕ ಸಮಾರಂಭವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ Prahlad Joshi ನೇರ ಪ್ರಸಾರ ವೀಕ್ಷಿಸುವ ಮೂಲಕ ಕಣ್ತುಂಬಿಕೊಂಡರು.
ಹುಬ್ಬಳ್ಳಿ ಕರ್ಕಿ ಬಸವೇಶ್ವರ ನಗರದ ಗೊಲ್ಲರ ಓಣಿಯಲ್ಲಿ ರಾಮ ಮಂದಿರ ಉದ್ಘಾಟನೆ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಸಚಿವ ಜೋಶಿ ಅವರು ಸಮಾರಂಭ ವೀಕ್ಷಿಸಿ ಅತಿವಪಾಸಿ ಸಂತಸ ವ್ಯಕ್ತಪಡಿಸಿದರು.
ಕೋಟ್ಯಂತರ ಭಾರತೀಯರ ಶತಮಾನಗಳ ತಪಸ್ಸಿಗೆ ಶ್ರೀರಾಮ ಇಂದು ಒಲಿದಿದ್ದಾನೆ ಎಂದು ಜೋಶಿ ಸ್ಮರಿಸಿದರು.
Also read: ಆಂಜನೇಯ ಜನ್ಮಭೂಮಿ ಅಭಿವೃದ್ಧಿ ಪಡಿಸುವುದು ನಮ್ಮ ಮುಂದಿನ ಗುರಿ: ಬಸವರಾಜ ಬೊಮ್ಮಾಯಿ
ಲಕ್ಷಾಂತರ ಕರಸೇವರಕರ ಬಲಿದಾನ ಮತ್ತು ಕೋಟ್ಯಂತರ ಹಿಂದೂ ಮನಗಳ ಪ್ರಾರ್ಥನೆಯ ಫಲವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಇಂದು ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಯಶಸ್ವಿಯಾಗಿ ನೇರವೇರಿದೆ ಬಣ್ಣಿಸಿದರು. ಈ ಐತಿಹಾಸಿಕ ಕ್ಷಣದ ಕನಸನ್ನು ನನಸು ಮಾಡಲು ಕಾರಣರಾದ ಎಲ್ಲಾ ರಾಮಭಕ್ತರಿಗೂ ವಂದನೆ ಸಲ್ಲಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post