ಕಲ್ಪ ಮೀಡಿಯಾ ಹೌಸ್ | ಸೊರಬ |
ನಮೋ ಬ್ರಿಗೇಡ್ ವತಿಯಿಂದ ಫೆ.19ರ ನಾಳೆ ತಾಲೂಕಿನ ಆನವಟ್ಟಿಯಲ್ಲಿ #Anavatti ಬೃಹತ್ ಸಾರ್ವಜನಿಕ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಪ್ರಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ #ChakravarthiSulibele ಮುಖ್ಯ ಭಾಷಣ ಮಾಡಲಿದ್ದಾರೆ.
ನಾಳೆ ಸಂಜೆ 7 ಗಂಟೆಗೆ ಹೊಸ ಬಸ್ ನಿಲ್ದಾಣ ಬಳಿಯ ಕೋಟೆ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜೈಶ್ರೀರಾಮ್, ಈಗ ಶುರುವಾಗಿದೆ ಭಾರತದ ಕಾಲ ಎಂಬ ಘೋಷಣೆಯೊಂದಿಗೆ ಇದು ಮುನ್ನಡೆಯಲಿದೆ.
ಈ ಕುರಿತಂತೆ ಮಾತನಾಡಿದ ನಮೋ ಬ್ರಿಗೇಡ್ ಆನವಟ್ಟಿ ಪ್ರಮುಖರು, ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಇಡಿಯ ದೇಶವನ್ನು ಏಕ ಸೂತ್ರದಲ್ಲಿ ಬಂಧಿಸಿಬಿಟ್ಟಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತ್’ನಿಂದ ಅಸ್ಸಾಂವರೆಗೆ ಇಡಿ ದೇಶ ಏಕರಸವಾಗಿ `ಜೈಶ್ರೀರಾಮ್’ ಮಂತ್ರ ಘೋಷವನ್ನು ಜಪಿಸುತ್ತಿರುವ ಈ ಹೊತ್ತಿನಲ್ಲಿ, ನರೇಂದ್ರ ಮೋದಿಯವರ ಹತ್ತು ವರ್ಷಗಳ ಕಾಲದ ಅಭಿವೃದ್ಧಿಯ ಶ್ರಮ ಭಾರತವನ್ನು ಮತ್ತೆ ರಾಮ ರಾಜ್ಯದತ್ತ ಕೊಂಡೊಯ್ಯುತ್ತಿದೆ ಎಂದಿದ್ದಾರೆ.
ರಾಮ ಮಂದಿರ ನಿರ್ಮಾಣದ ಜೊತೆಗೆ ರಾಮ ರಾಜ್ಯದತ್ತ ಸಾಗುತ್ತಿರುವ ಈ ಹೊತ್ತಿನಲ್ಲಿ ಮತ್ತೆ ಚುನಾವಣೆ ಬರುತ್ತಿದೆ. ರಾವಣನ ಹತ್ತು ತಲೆಗಳಂತೆ ಹತ್ತಾರು ಪಾರ್ಟಿಗಳು ಒಟ್ಟು ಸೇರಿ ರಾಮ ರಾಜ್ಯ ನಿರ್ನಾಮ ಮಾಡಲು ಮೋದಿಯನ್ನು ಸೋಲಿಸಲು ಸಜ್ಜಾಗಿವೆ. ಈ ಕದನದಲ್ಲಿ ರಾಮನ ಜೊತೆ ಹನುಮನ ಸೇನೆ ನಿಂತಂತೆ ನಾವೆಲ್ಲರೂ ರಾಮ ರಾಜ್ಯ ಪೂರ್ಣಗೊಳಿಸಲು ಮೋದಿಯ ಜೊತೆಯಾಗಿ ನಿಲ್ಲಬೇಕಾದದ್ದು ಅವಶ್ಯಕವಾಗಿದೆ. ಇದಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.8904525771ಗೆ ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post