ಕಲ್ಪ ಮೀಡಿಯಾ ಹೌಸ್ | ಗದಗ |
ರಾಮಭಕ್ತರು ತೆರಳುತ್ತಿದ್ದ ಅಯೋಧ್ಯೆಧಾಮ ರೈಲಿಗೆ #AyodhyadhamaTrain ಬೆಂಕಿ ಹಚ್ಚುತ್ತೇನೆ ಎಂದು ಬೆದರಿಕೆ ಹಾಕಿದ ಪ್ರಕರಣದಲ್ಲಿ ಶೇಖ್ ಸಾಬ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ನಾಲ್ವರ ಪತ್ತೆಗೆ ಬಲೆ ಬೀಸಲಾಗಿದೆ.
ವಿಜಯನಗರ #Vijayanagar ಜಿಲ್ಲೆಯ ಹೊಸಪೇಟೆಯಲ್ಲಿ #Hospet ಅನ್ಯಕೋಮಿನ ಯುವಕನೊಬ್ಬರ ರೈಲಿಗೆ ಬೆಂಕಿ ಹಚ್ಚುತ್ತೇನೆ ಎಂದು ಬೆದರಿಕೆ ಹಾಕಿ ಅಯೋಧ್ಯೆ ಧಾಮ ರೈಲಿನ ಚೈನ್ ಪದೇ ಪದೇ ಎಳೆದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ನಾಲ್ವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಸುಮಾರು 1500 ರಾಮಭಕ್ತರು #Mysore ಮೈಸೂರು-ಅಯೋಧ್ಯೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಯಾತ್ರೆ ಹೊರಟಿದ್ದ ಭಕ್ತರು ರೈಲಿನಲ್ಲಿ ಭಜನೆ ಹಾಗೂ ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಇದಕ್ಕೆ ನಾಲ್ವರು ಅನ್ಯಕೋಮಿನ ಯುವಕರು ಆಕ್ಷೇಪ ವ್ಯಕ್ತಪಡಿಸಿ, ವಾಗ್ವಾದ ನಡೆಸಿದ್ದಾರೆ.
ಈ ವೇಳೆ ಕಿಡಿಗೇಡಿ ಯುವಕರು ರೈಲಿಗೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆ ಹಾಕಿ ಪದೇ ಪದೇ ಚೈನ್ ಎಳೆದಿದ್ದಾರೆ. ಇದರಿಂದಾಗಿ ರೈಲು ಸಂಚಾರಕ್ಕೂ ಸಹ ತೊಂದರೆ ಉಂಟಾಗಿದೆ.
ಈ ಘಟನೆಯಿಂದಾಗಿ ರಾಮಭಕ್ತ ಪ್ರಯಾಣಿಕರು ನಿಲ್ದಾಣ ಬರುತ್ತಿದ್ದಂತೆಯೇ ಪ್ರತಿಭಟನೆ ಆರಂಭಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಎಸ್’ಪಿ ಶ್ರೀಹರಿಬಾಬು, ಪ್ರತಿಭಟನಾಕಾರರ ಮನವೊಲಿಸಿ, ರೈಲು ಪ್ರಯಾಣ ಮುಂದುವರೆಸುವಂತೆ ಅನುಕೂಲ ಮಾಡಿಕೊಟ್ಟರು.
ಈ ನಡುವೆ ರಾಮಭಕ್ತರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ನಾಲ್ವರು ಕಿಡಿಗೇಡಿ ಯುವಕರು ಪರಾರಿಯಾಗಿದ್ದು, ಇದರಲ್ಲಿ ಓರ್ವನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಬಂಧಿತ ವ್ಯಕ್ತಿ ರೈಲ್ವೆ ಇಲಾಖೆಯಲ್ಲಿ ಸಿ ದರ್ಜೆ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಲಾಗಿದ್ದರೂ, ಖಚಿತಗೊಂಡಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post