ಕಲ್ಪ ಮೀಡಿಯಾ ಹೌಸ್ | ಕಲಬುರಗಿ/ಬೆಂಗಳೂರು |
ಚಿಂತಕ ಚಕ್ರವರ್ತಿ ಸೂಲಿಬೆಲೆ Chakravarthy Sulibele ಅವರಿಗೆ ಕಲಬುರಗಿ ಪ್ರವೇಶಕ್ಕೆ ತಹಶೀಲ್ದಾರ್, ಪೊಲೀಸರು ಹೇರಿದ್ದ ನಿರ್ಬಂಧದ ಆದೇಶವನ್ನು ರಾಜ್ಯ ಹೈಕೋರ್ಟ್ High Court ತೆರವುಗೊಳಿಸಿದ್ದು, ಈ ಮೂಲಕ ವಿರೋಧಿಗಳಿಗೆ ಭಾರೀ ಮುಖಭಂಗ ಆದಂತಾಗಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆಯೋಜಿಸಲಾಗಿದ್ದ ನಮೋ ಭಾರತ್ ಕಾಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಬೇಕಿತ್ತು. ಆದರೆ, ನಿನ್ನೆ ರಾತ್ರಿ ಅವರನ್ನು ಬಾಲ್ಕಿ ಬಳಿಯಲ್ಲಿ ತಡೆಯಲಾಗಿತ್ತು. ಸೂಲಿಬೆಲೆ ಅವರು ಕಲಬುರಗಿ ಪ್ರವೇಶಿಸದಂತೆ ತಡರಾತ್ರಿ 11 ಗಂಟೆಗೆ ಆದೇಶವನ್ನು ಹೊರಡಿಸಲಾಗಿತ್ತು.
ಈ ನಿರ್ಬಂಧವನ್ನು ಪ್ರಶ್ನಿಸಿ ಚಕ್ರವರ್ತಿ ಸೂಲಿಬೆಲೆ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿ ಪರಿಶೀಲನೆ ನಡೆಸಿ, ವಾದ ಆಲಿಸಿದ ನ್ಯಾಯಾಲಯ ತಹಶೀಲ್ದಾರ್ ಹಾಗೂ ಪೊಲೀಸರು ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ. ನ್ಯಾಯಾಲಯದ ಈ ಆದೇಶದಿಂದಾಗಿ ನಮೋ ಭಾರತ್ ಕಾರ್ಯಕ್ರಮದಲ್ಲಿ ಸೂಲಿಬೆಲೆ ಅವರು ಪಾಲ್ಗೊಳ್ಳಲಿದ್ದಾರೆ.
Also read: ಸೂಲಿಬೆಲೆಗೆ ಸಾಂವಿಧಾನಿಕ ಜಯ | ಚಿತ್ತಾಪುರ ಕಾರ್ಯಕ್ರಮಕ್ಕೆ ಹೇರಿದ್ದ ನಿರ್ಬಂಧ ಕೋರ್ಟ್’ನಿಂದ ರದ್ದು
ಇನ್ನು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಚಕ್ರವರ್ತಿ ಸೂಲಿಬೆಲೆ ಅವರು, ಚಿತ್ತಾಪುರದಲ್ಲಿ ಕಾರ್ಯಕ್ರಮ ತಡೆಯುವ ಖರ್ಗೆ Kharge ಸಾಹೇಬರ ಪ್ರಯತ್ನಕ್ಕೆ ಕೋರ್ಟ್ ಮಂಗಳಾರತಿ ಎತ್ತಿದೆ ಎಂದು ಕಟಕಿಯಾಡಿದ್ದಾರೆ.
ಇಂದು ಸಂಜೆ ಚಿತ್ತಾಪುರದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮ ನಡೆಯಲಿದೆ. ಇದು ಬಾಬಾ ಸಾಹೇಬರು ನಮಗೆ ನೀಡಿರುವ ಸಂವಿಧಾನದ ಹಕ್ಕಿಗೆ ಜಯ. ಲಾಯರ್’ಗಳು – 1, ಖರ್ಗೆ – 0 ಎಂದಿರುವ ಅವರು, ಬನ್ನಿ ನಾವೆಲ್ಲರು ಸೇರಿ ಭಾರತಮಾತೆಗೆ ಜೈಕಾರದ ಉದ್ಘೋಷವನ್ನು ಮೊಳಗಿಸೋಣ ಎಂದು ಕರೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post