ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಗರದ ಶಂಕರ ಮಠದ #ShankarMutt ಶಂಕರಾಲಯದ ಶತಮಾನೋತ್ಸವದ ಸಂಭ್ರಮಾಚರಣೆ ಅಂಗವಾಗಿ ಗುರುವಾರ ದೇಗುಲದ ಅವರಣದಲ್ಲಿ ನವಗ್ರಹ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ, ಕುಂಭಾಭಿಷೇಕ, ಜಗದ್ಗುರುಗಳ ಪಾದಪೂಜೆ, ಭಿಕ್ಷಾ ವಂದನೆ, ಸಾರ್ವಜನಿಕ ದರ್ಶನ ಸೇರಿದಂತೆ ವಿವಿಧ ಹೋಮಗಳು ವಿಧಿವತ್ತಾಗಿ ನೆರವೇರಿದವು.
ಬೆಳಗ್ಗೆ 8.30ಕ್ಕೆ ಮಠದ ಶ್ರೀ ಮಹಾಗಣಪತಿ, ಶ್ರೀ ಸತ್ಯನಾರಾಯಣ ಮತ್ತು ಶ್ರೀ ಶಂಕರಾಚಾರ್ಯರ #SriShankaracharya ಸನ್ನಿಧಿಗಳಲ್ಲಿ ಕುಂಭಾಭಿಷೇಕ, ನವಗ್ರಹ ಮೂರ್ತಿಗಳ ಪುನರ್ ಪ್ರತಿಷ್ಠಾಪನೆಯನ್ನು ಜಗದ್ಗುರುಗಳು ನೆರವೇರಿಸಿದರು.
ಶತಮಾನೋತ್ಸವ ಅಂಗವಾಗಿ ನಿರ್ಮಿಸಿರುವ ‘ಶ್ರೀ ಸಚ್ಚಿದಾನಂದ ವಿಲಾಸ’ ಗುರುಭವನದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ #VidhushekharaBharatiSwamiji ಪಾದಪೂಜೆ ಸ್ವೀಕಾರ ಮಾಡಿ ಭಕ್ತರಿಗೆ ಫಲ, ಮಂತ್ರಾಕ್ಷತೆ ಅನುಗ್ರಹಿಸಿದರು.
ಸಂಜೆ 4.30 ರಿಂದ 7ರವರೆಗೆ ನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಗುರುಗಳು ಪೂಜೆ ಸಮರ್ಪಿಸಿದರು.
Also read: ಜಪಾನ್: ತೈವಾನ್ನಲ್ಲಿ ಪ್ರಬಲ ಭೂಕಂಪ | ನಾಲ್ವರು ಸಾವು
ರಂಜಿಸಿದ ಗಾಯನ
ಸಂಜೆ ಪೃಥ್ವಿ- ಅಮೋಘ ಅವರ ಶಾಸ್ತ್ರೀಯ ಗಾಯನ ರಂಜಿಸಿತು. ಆನಂದ ಕಶ್ಯಪ್ ಮೃದಂಗ ಮತ್ತು ಸುಬ್ರಹ್ಮಣ್ಯ ಕುಮಾರ್ ಘಟ ಪಕ್ಕವಾದ್ಯ ಸಾಥ್ ನೀಡಿದರು. ರಾತ್ರಿ 8. 30ಕ್ಕೆ ಶ್ರೀ ಮಠದಲ್ಲಿ ಗುರುಗಳು ಚಂದ್ರಮೌಳೇಶ್ವರ ಪೂಜೆ ನೆರವೇರಿಸಿದರು. ಹಲವು ಜೆಸಿಬಿ, ಹಿಟ್ಯಾಚಿ ವಾಹನಗಳ ಮೂಲಕ ಪರ್ಯಾಯವಾಗಿ ರಂಧ್ರ ಕೊರೆಯಲಾಗುತ್ತಿದ್ದು, ಬೃಹತ್ ಗಾತ್ರದ ಬಂಡೆ ಅಡ್ಡ ಬಂದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಕೊಂಚ ತಡವಾಗಿದೆ ಎಂದು ಹೇಳಲಾಗಿದೆ.

ಬಂಗಾರ ಲೇಪಿತ ಕಂಚಿನ ಕಳಸ ಇಂದು ಪ್ರತಿಷ್ಠಾಪನೆ
ಏ. 5ರ ಬೆಳಗ್ಗೆ 8:30ಕ್ಕೆ ಶಂಕರ ಮಠದ ಆವರಣದಲ್ಲಿ ಶ್ರೀ ಶಾರದಾಂಬಾ ಹಾಗೂ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಜಗದ್ಗುರುಗಳ ಸನ್ನಿಧಿಯಲ್ಲಿ ಕುಂಭಾಭಿಷೇಕ ಮತ್ತು ಶಿಖರ ಕುಂಭಾಭಿಷೇಕ ನೆರವೇರಲಿವೆ. ಇದೇ ಸಂದರ್ಭ ದೇಗುಲಕ್ಕೆ 7 ಅಡಿ ಎತ್ತರದ ಬಂಗಾರ ಲೇಪಿತ ಕಂಚಿನ ಕಳಸ ಪ್ರತಿಷ್ಠಾಪನೆ ನೆರವೇರಲಿದೆ.
ಸಮಾರೋಪ ಇಂದು
ಏ. 5ರಂದು ಸಂಜೆ 5.30ಕ್ಕೆ ಮಠದ ಆವರಣದಲ್ಲಿ ‘ಗುರುವಂದನಾ’ ಕಾರ್ಯಕ್ರಮ, ಸಮಾರೋಪ ಸಮಾರಂಭ ಆಯೋಜನೆಗೊಂಡಿದೆ. ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರದ ಅಡಿಷನಲ್ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ಆಗಮಿಸಲಿದ್ದಾರೆ. ವಿವಿಧ ಸಂಘ ಸಂಸ್ಥೆ ಪ್ರಮುಖರು, ನಗರದ ಗಣ್ಯರು, ಸಾರ್ವಜನಿಕರು ಗುರುಗಳಿಗೆ ಭಕ್ತಿ ಸಮರ್ಪಣೆ ಮಾಡಲಿದ್ದಾರೆ.
ಇಂದು ಸಂಜೆ ಸಂಗೀತ ಕಛೇರಿ
5ರಂದು ಸಂಜೆ ಅದಿತಿ- ಕೀರ್ತನಾ ಅವರ ದ್ವಂದ್ವ ಗಾಯನ ಸುಧೆಗೆ ರೂಪನಗುಡಿ ರತ್ನತೇಜ (ಪಿಟೀಲು) ಮತ್ತು ಪ್ರಣವ ಸುಬ್ರಹ್ಮಣ್ಯ (ಮೃದಂಗ) ಸಹಕಾರ ಮೆರುಗು ನೀಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















