ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಚುನಾವಣೆಯಲ್ಲಿ ಗೀತಾ ಶಿವರಾಜಕುಮಾರ್ #Geetha Shivarajkumar ಗೆದ್ದೇ ಗೆಲ್ತಾರೆ, ಬೇಕಾದರೆ ಟ್ರಾಕ್ಟರ್ ಪಣಕ್ಕಿಡ್ತೀನಿ… ಇದು ಶಿವಮೊಗ್ಗ ಜಿಲ್ಲೆಯ ರೈತನೊಬ್ಬರ ಹಾಕಿರುವ ಓಪನ್ ಚಾಲೆಂಜ್…
ಹೌದು… ಲೋಕಸಭಾ ಚುನಾವಣೆಗೆ #Lok Sabha Election ಮತದಾನ ಮುಕ್ತಾಯವಾಗಿದ್ದು, ಎಲ್ಲರ ಚಿತ್ತ ಫಲಿತಾಂಶ ಪ್ರಕಟವಾಗುವ ಜೂನ್ 4ರ ದಿನಾಂಕದತ್ತ ನೆಟ್ಟಿದೆ. ಈ ನಡುವೆಯೇ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಲೆಕ್ಕಾಚಾರ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಈ ನಡುವೆ ಜಿಲ್ಲೆಯ ರೈತನೊಬ್ಬರ ಗೀತಾ ಶಿವರಾಜಕುಮಾರ್ ಗೆದ್ದೇ ಗೆಲ್ಲುತ್ತಾರೆ ಎಂದು ಓಪನ್ ಚಾಲೆಂಜ್ ಹಾಕಿದ್ದಾನೆ. ಶಿಕಾರಿಪುರ ತಾಲೂಕಿನ ರೈತನೊಬ್ಬ ಈ ರೀತಿಯ ಚಾಲೆಂಜ್ ಹಾಕಿದ್ದು, ಸವಾಲು ಸ್ವೀಕರಿಸುವಂತೆ ಹೇಳಿದ್ದಾರೆ.
Also read: ಶಿವಮೊಗ್ಗ | ದುಮ್ಮಳ್ಳಿಯಲ್ಲಿ ವ್ಯಕ್ತಿ ಭೀಕರ ಮರ್ಡರ್ | ಕಾರಣವೇನು?
ಗೀತಾ ಶಿವರಾಜಕುಮಾರ್ ಗೆಲ್ಲುತ್ತಾರೆ ಎಂದು ನಾನು ನನ್ನ ಟ್ರಾಕ್ಟರನ್ನು ಪಣಕ್ಕೆ ಇಡುತ್ತೇನೆ. ನೀವು ಗೆಲ್ಲುವುದೇ ಆದರೆ ಬಿಜೆಪಿಯವರು ಚಾಲೆಂಜ್ ಸ್ವೀಕರಿಸಿ ಎಂದು ಸವಾಲು ಹಾಕಿದ್ದಾನೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post