ಕಲ್ಪ ಮೀಡಿಯಾ ಹೌಸ್ | ಪಾಟ್ನಾ |
ಇಲ್ಲಿರುವ ಗುರುದ್ವಾರ ಪಾಟ್ನಾ ಸಾಹಿಬ್’ಗೆ ಇಂದು ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ #PM Narendra Modi ಅವರು ಸ್ವತಃ ತಾವೇ ದಾಲ್ ಹಾಗೂ ಅಡುಗೆ ತಯಾರಿಸಿ, ಭಕ್ತರಿಗೆ ಬಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಚುನಾವಣಾ ಪ್ರಚಾರದ ಎರಡನೇ ದಿನವಾದ ಇಂದು ಪ್ರಧಾನಿಯವರು ಇಲ್ಲಿನ ಗುರುದ್ವಾರಕ್ಕೆ ಭೇಟಿ ನೀಡಿದರು.
ಈ ವೇಳೆ ಸಾಂಪ್ರದಾಯಿಕ ಕುರ್ತಾ, ಕೇಸರಿ ಸಿಖ್ ಪೇಟ ಧರಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಆನಂತರ ಅಡುಗೆ ಕೋಣೆಗೆ ತೆರಳಿದ ಪ್ರಧಾನಿಯವರು ತಾವೇ ಸ್ವತಃ ದಾಲ್ ಸೇರಿದಂತೆ ಕೆಲವು ಪದಾರ್ಥಗಳನ್ನು ತಯಾರಿಸಿದರು. ತಾವು ತಯಾರಿಸಿದ ಪ್ರಸಾದವನ್ನು ಭಕ್ತರಿಗೆ ತಾವೇ ಬಡಿಸಿ ಸಂಭ್ರಮಿಸಿದರು.
Also read: ಸ್ಯಾಂಡಲ್’ವುಡ್ ನಟ ಚೇತನ್ ಮೇಲೆ ಮಾರಣಾಂತಿಕ ಹಲ್ಲೆ | ದೂರು ದಾಖಲು
ಸ್ವತಃ ಪ್ರಧಾನಿಯವರೇ ತಯಾರಿಸಿ, ಅವರೇ ಬಡಿಸಿದ ಪ್ರಸಾದವನ್ನು ಸ್ವೀಕರಿಸಿದ ಭಕ್ತರು ಸಂತಸ ವ್ಯಕ್ತಪಡಿಸಿದರು.
ನಂತರ ಗುರುದ್ವಾರದಲ್ಲಿ #Gurudwara ಪ್ರಧಾನಿಯವರು, ಕರಃ ಪ್ರಸಾದವನ್ನು ತೆಗೆದುಕೊಂಡರು. ಈ ವೇಳೆ ಡಿಜಿಟಲ್ ಪಾವತಿ ವಿಧಾನ ಬಳಸಿ ಹಣ ಸಂದಾಯ ಮಾಡಿದರು.
ತಖತ್ ಶ್ರೀಪಾಟ್ನಾ ಸಾಹಿಬ್’ನ ತಖತ್ ಶ್ರೀಹರಿಮಂದಿರ್ ಜಿ, ಪಾಟ್ನಾ ಸಾಹಿಬ್ ಎಂದು ಸಹ ಕರೆಯುತ್ತಾರೆ. ಇದು ಪಾಟ್ನಾದಲ್ಲಿರುವ ಸಿಖ್ಖರ ಐದು ತಖಟ್’ಗಳಲ್ಲಿ ಒಂದಾಗಿದೆ.
ಗುರು ಗೋಬಿಂದ್ ಸಿಂಗ್ ಅವರ ಜನ್ಮಸ್ಥಳವನ್ನು ಗುರುತಿಸಲು 18 ನೇ ಶತಮಾನದಲ್ಲಿ ಮಹಾರಾಜ ರಂಜಿತ್ ಸಿಂಗ್ ಈ ತಖತ್ ನಿರ್ಮಿಸಿದ. ಹತ್ತನೇ ಸಿಖ್ ಗುರುವಾದ ಗುರು ಗೋಬಿಂದ್ ಸಿಂಗ್ ಅವರು 1666 ರಲ್ಲಿ ಪಾಟ್ನಾದಲ್ಲಿ ಜನಿಸಿದರು. ಅವರು ಆನಂದಪುರ ಸಾಹಿಬ್’ಗೆ ತೆರಳುವ ಮೊದಲು ಕೆಲವು ವರ್ಷಗಳ ಕಾಲ ಇಲ್ಲಿಯೇ ಕಳೆದಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post