No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
  • Advertise With Us
  • Grievances
  • About Us
  • Contact Us
Thursday, August 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಫಸ್ಟ್ ಬೌಲ್’ನಲ್ಲೇ ಸಿಕ್ಸರ್ ಹೊಡೆದ ಡಾ.ಧನಂಜಯ ಸರ್ಜಿ | ಅಂಕಿಅಂಶ ಸಹಿತ ಚರ್ಚೆಗೆ ಸದನದ ಪ್ರಶಂಸೆ

ಸಾಮಾಜಿಕ ಕಳಕಳಿ ಮೆರೆದ ಸರ್ಜಿ ಏನೆಲ್ಲಾ ವಿಷಯ ಪ್ರಸ್ತಾಪಿಸಿದ್ದಾರೆ? ಇಲ್ಲಿದೆ ವಿವರ

kalpa News by kalpa News
July 18, 2024
in ಬೆಂಗಳೂರು ನಗರ
0
ಫಸ್ಟ್ ಬೌಲ್’ನಲ್ಲೇ ಸಿಕ್ಸರ್ ಹೊಡೆದ ಡಾ.ಧನಂಜಯ ಸರ್ಜಿ | ಅಂಕಿಅಂಶ ಸಹಿತ ಚರ್ಚೆಗೆ ಸದನದ ಪ್ರಶಂಸೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ರಾಜ್ಯದಲ್ಲಿ ಪೊಲೀಸ್ ಇಲಾಖೆ ಸಕ್ರಿಯವಾಗಿದ್ದರೂ ಕೂಡ ಡ್ರಗ್ಸ್ ವ್ಯಸನಿಗಳ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ, ಇದನ್ನು ಗೃಹ ಇಲಾಖೆ ಗಂಭೀರವಾಗಿ ತೆಗೆದುಕೊಂಡು ಅಮಲು ಮುಕ್ತ ಕರ್ನಾಟಕವನ್ನಾಗಿ ಮಾಡಬೇಕು ಎಂದು ಗೃಹ ಸಚಿವರಾದ ಜಿ. ಪರಮೇಶ್ವರ್ ಅವರನ್ನು ಶಾಸಕ ಡಾ .ಧನಂಜಯ ಸರ್ಜಿ #Dr. Dhananjaya Sarji ಅವರು ಆಗ್ರಹಿಸಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ 153ನೇ ವಿಧಾನ ಮಂಡಲ ಅಧಿವೇಶನದಲ್ಲಿ ಗುರುವಾರ ಅವರು ಸದನಲ್ಲಿ ಮಾತನಾಡಿ, ಇಡೀ ಭಾರತದಲ್ಲೆ ನಮ್ಮ ರಾಜ್ಯವೂ ಮಾದಕ ವಸ್ತು ವ್ಯಸನ ಮತ್ತು ಸಾವಿನ ಸಂಖ್ಯೆಯಲ್ಲಿ 2 ನೇ ಸ್ಥಾನದಲ್ಲಿದ್ದು, ಗಾಂಜಾ, ಡ್ರಗ್ಸ್ ಹಾಗೂ ಅಪೀಮುಗಳ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು,

ದುಶ್ಚಟಗಳಲ್ಲಿ ಬೀಡಿ, ಸಿಗರೇಟು, ಮನುಷ್ಯನನ್ನು ಬಲಿಪಡೆದರೆ, ಮದ್ಯ ವ್ಯಸನ ಕುಟುಂಬವನ್ನು ಬಲಿ ಪಡೆಯುತ್ತದೆ, ಡ್ರಗ್ಸ್ #drugs ಸಮಾಜವನ್ನು ಬಲಿ ತೆಗೆದುಕೊಳ್ಳುತ್ತದೆ, ಭಾರತದಲ್ಲಿ 16 ಕೋಟಿ ಮದ್ಯವ್ಯಸನಿಗಳಿದ್ದು, 5.7 ಕೋಟಿ ಪ್ರಾಬ್ಲಮ್ ಯೂಸರ್ಸ್ ಇದ್ದಾರೆ, 2.9 ಕೋಟಿ ಜನ ಡಿಪೆಂಡೆಂಟ್ ಮದ್ಯ ವ್ಯಸನಿಗಳಾಗಿದ್ದು, ಭಾರತದಲ್ಲಿ ಕ್ಯಾನಿಬಿಸನ್ನು 3.1 ಕೋಟಿ ಜನ ಸೇವಿಸಿದರೆ, 2.3 ಕೋಟಿ ಜನ ಓಪಿಯಾಡ್ ವ್ಯಸನಿಗಳಿದ್ದಾರೆ, ಈ ಪೈಕಿ 25 ರಿಂದ 28 ಲಕ್ಷ ಡಿಪೆಂಡೆಂಟ್ ವ್ಯಸನಿಗಳಿದ್ದಾರೆ, ದೇಶದಲ್ಲಿ 3 ಕೋಟಿ ಗೂ ಹೆಚ್ಚುಜನ ಮಾದಕ ವಸ್ತು ವ್ಯಸನಿಗಳಿದ್ದು, ಭಾರತದಲ್ಲಿ ಡ್ರಗ್ಸ್ ಓರ್ವ ಡೋಸ್ ನಿಂದ 8 ಸಾವಿರ ಜನ ಬಲಿಯಾಗಿದ್ದಾರೆ. ಈ ಪೈಕಿ 2017 ರಲ್ಲಿ ಕರ್ನಾಟಕದಲ್ಲಿ 81, 2018 ರಲ್ಲಿ 91 ಜನ, 2019 ರಲ್ಲಿ 67 ಜನ, ಇವುಗಳ ಪ್ರಕಾರ ಡ್ರಗ್ಸ್ ವ್ಯಸನಕ್ಕೆ ಬಲಿಯಾಗಿರುವ ಸಂಖ್ಯೆಯಲ್ಲಿ ರಾಜ್ಯವು ಭಾರತದಲ್ಲಿ 2ನೇ ಸ್ಥಾನದಲ್ಲಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಈ ನಿಟ್ಟಿನಲ್ಲಿ ನಿಯಂತ್ರಣಕ್ಕೆ ಕ್ರಮ ಯಾವುದು? ಹಾಗೂ 2020 ರಿಂದ 2024 ರವರೆಗೆ ಮಾಹಿತಿಯನ್ನು ನೀಡಬೇಕೆಂದು ಗೃಹ ಸಚಿವರನ್ನು ವಿನಂತಿಸಿಕೊಂಡರು.

ಗೃಹ ಸಚಿವರು, #Home Minister ಪೋಲೀಸ್ ಇಲಾಖೆ #Police department ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಉತ್ತರ ನೀಡಿದ್ದಾರೆ, ಆದರೆ, ಕಳೆದ ತಿಂಗಳ 27 ರಂದು ಡ್ರಗ್ಸ್ ಸೇವಿಸಿ ಹಣಕ್ಕಾಗಿ ಇಬ್ಬರ ಕೊಲೆ ಹಾಗೂ ಮೇ 22 ರಂದು ರೇವ್ ಪಾರ್ಟಿಯಲ್ಲಿ 50 ಲಕ್ಷ ರೂ ಖರ್ಚು ಮಾಡಿ 500 ರೂ. ನೋಟಿನಲ್ಲಿ ಕೆನಬಿಸ್ ನ್ನು ಇಂಜೆಕ್ಟ್ ಮಾಡಿ ಡ್ರಗ್ಸ್ ಸೇವನೆ ಮಾಡಿದ ಕುರಿತು ಪತ್ರಿಕಾ ವರದಿಗಳ ದಾಖಲೆಗಳನ್ನು ಪ್ರದರ್ಶಿಸಿ ಪೊಲೀಸ್ ಇಲಾಖೆ ವೈಫಲ್ಯವನ್ನು ಪ್ರಶ್ನಿಸಿದರು.

ಡಾರ್ಕ್ ವೆಬ್’ಸೈಟ್ ಮೂಲಕ ಸಂಪರ್ಕ ಸಾಧಿಸಿ ಕೊರಿಯರ್ ಮೂಲಕ ಡ್ರಗ್ಸ್ ಪಡೆದುಕೊಳ್ಳುತ್ತಿರುವುದು ಇದು ನಿಜಕ್ಕೂ ಆಶ್ಚರ್ಯ ಮತ್ತು ಆತಂಕಕಾರಿ ಬೆಳವಣಿಗೆ, ಈ ಡಾರ್ಕ್ ವೆಬ್’ಸೈಟ್’ನಲ್ಲಿ ಯಾರು ಆರ್ಡರ್ ಮಾಡಿದ್ದಾರೆ? ಎಲ್ಲಿಂದ ಬಂತು? ಎಂಬ ಮಾಹಿತಿ ಎಲ್ಲಿಯೂ ದೊರಕುವುದಿಲ್ಲ. ಕೊರಿಯರ್ ಮೂಲಕ ಮನೆಗೆ ಬಾಗಿಲಿಗೆ ಬರುತ್ತಿದೆ, ಡೆಲಿವರಿ ಸಮಯದಲ್ಲಿ ಸಿಕ್ಕಿ ಬೀಳುತ್ತಾರೆ. ಈ ಬಗ್ಗೆಯೂ ಸಚಿವರು ಕ್ರಮ ಕೈಗೊಳ್ಳಬೇಕು ಹಾಗೂ ಪ್ಲಾಸ್ಟಿಕ್ ಬಳಕೆ ಮಾಡಬೇಡಿ ಎನ್ನುತ್ತಾ ಉತ್ಪಾದನೆ ನಿಲ್ಲುತ್ತಿಲ್ಲ, ಉತ್ಪಾದನೆ ನಿಲ್ಲಿಸದೇ ಅದನ್ನು ತಡೆಯಲು ಸಾಧ್ಯವಿಲ್ಲ, ಹಾಗೆಯೇ ಡ್ರಗ್ಸನ್ನು ಉತ್ಪಾದನೆಯಲ್ಲೇ ಚಿವುಟಿ ಹಾಕಬೇಕಿದೆ, ರಾಜ್ಯದ ಪಿಎಚ್’ಸಿ ಮತ್ತು ಸಿಎಚ್’ಸಿ ಸೆಂಟರ್’ಗಳಲ್ಲಿ ಗಾಂಜಾ ಟೆಸ್ಟಿಂಗ್ ಕಿಟ್ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

Also read: ಸೌತ್ ಝೋನ್ ಹಾಕಿ ಚಾಂಪಿಯನ್’ಶಿಪ್ | ಕರ್ನಾಟಕ ತಂಡದಲ್ಲಿ 7 ಆಟಗಾರರು ಕೊಡಗಿನ ವೀರರು

ಹಾಗೆಯೇ ಮಹಿಳೆಯರ ಮಾದಕ ವಸ್ತು ಪುನರ್ವಸತಿ ಕೇಂದ್ರಗಳಿಲ್ಲ, ಆ ಕೇಂದ್ರಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬುದುರ ಬಗ್ಗೆ ಅನುಮಾನ ಬರುತ್ತಿದೆ. ಅಲ್ಲದೇ ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿ ತೂರಾಡುವಂತಹ ಘಟನೆಗಳು, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕೇಂದ್ರ ಸರ್ಕಾರದ ನಶಾ ಮುಕ್ತ ಭಾರತ ಅಭಿಯಾನದಡಿ ರಾಜ್ಯದಲ್ಲಿ ಮಾದಕ ವಸ್ತು ವ್ಯಸನ ಮುಕ್ತ ಕೇಂದ್ರಗಳನ್ನು ಮಾಡಬೇಕು. ಇದರಡಿಯಲ್ಲಿ ಸುಮಾರು 8 ಸಾವಿರ ಮಾಸ್ಟರ್ ಸ್ವಯಂ ಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದ 272 ಜಿಲ್ಲಗಳಲ್ಲಿ ಈ ಅಭಿಯಾನ ನಡೆಯುತ್ತಿದೆ, ವಿಶ್ವ ವಿದ್ಯಾಲಯಗಳು, ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿಯೂ ಇದು ಶುರುವಾಗಬೇಕು ಎಂದು ಆಗ್ರಹಿಸಿದರು.

ಗೃಹ ಸಚಿವ ಜಿ. ಪರಮೇಶ್ವರ್ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಮಾದಕ ವ್ಯಸನ ಇಡೀ ದೇಶದಲ್ಲಿ ಇದೆ, ನಮ್ಮ ರಾಜ್ಯದಲ್ಲೂ ಇದೆ. ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ಮೇಲೆ ಮಾದಕ ವಸ್ತು ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಗುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕರ್ನಾಟಕವನ್ನು ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದಾಗಿ ಘೋಷಣೆ ಮಾಡಿದ್ದರು. ಈಗಾಗಲೇ 268 ಮಾದಕ ವಸ್ತು ಮುಕ್ತ ಸೆಂಟರ್ ತೆರೆಲಾಗಿದೆ. ಅದರಲ್ಲೆ ಮಹಿಳೆಯರಿಗೂ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಎನ್’ಜಿಒಗಳು ಕೈ ಜೋಡಿಸಿವೆ ಎಂದರು. ಅಲ್ಲದೇ ಅಂಚೆ ಅಥವಾ ಕೊರಿಯರ್ ಮೂಲಕ ರವಾನೆ ಆಗುವಂತ ಡ್ರಗ್ಸ್ ಬಗ್ಗೆ ಗೃಹ ಇಲಾಖೆ ಕಣ್ಣಿಟ್ಟಿದೆ. ನಿರ್ಲಕ್ಯ ಮಾಡಿಲ್ಲ, ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.

ಪ್ರತಿ ವರ್ಷ 10 ಟನ್ ಗಾಂಜಾ ಸುಟ್ಟು ಹಾಕಲಾಗುತ್ತಿದೆ. 250 ರಿಂದ 400 ಸಿಂಥೆಟಿಕ್ ಎಂಡಿಎಂಎ ಡ್ರಗ್ಸ್ ಸುಡಲಾಗಿದೆ. 150 ಕೋಟಿ ರೂ. ಮೌಲ್ಯದ ಮಾದಕ ವಸ್ತು ಸುಟ್ಟು ಹಾಕಲಾಗಿದೆ ಎಂದು ಉತ್ತರಿಸಿದರು.
ಪ್ರಶಂಸಿಸಿದ ಗೃಹ ಸಚಿವ ಜಿ. ಪರಮೇಶ್ವರ್
ಡಾ. ಧನಂಜಯ ಸರ್ಜಿ ಅವರು ಮೆಡಿಕಲ್ ಡಾಕ್ಟ್ರು, ನಾನು ಪಿಎಚ್’ಡಿ ಡಾಕ್ಟ್ರು, ಮಣಿಪಾಲ್’ನಲ್ಲಿ ಅಭ್ಯಾಸ ಮಾಡಿದವರು, ಸದನಕ್ಕೆ ಹೊಸದಾಗಿ ಬಂದಿದ್ದಾರೆ, ಬಹಳ ಒಳ್ಳೆಯದು, ಸರ್ಜಿ ಅವರಿಗೆ ಈ ಬಗ್ಗೆ ಅವರಿಗೆ ನನಗಿಂತ ಚೆನ್ನಾಗಿಯೇ ಈ ದುಷ್ಪರಿಣಾಮದಿಂದ ಬಗ್ಗ ಗೊತ್ತಿದೆ ಎಂದು ಈ ವೇಳೆ ಪ್ರಶಂಸಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: BangaloreDr. Dhananjaya SarjiDrugsHome MinisterKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaPolice Departmentಗೃಹ ಸಚಿವರುಡಾ. ಧನಂಜಯ ಸರ್ಜಿಡ್ರಗ್ಸ್‌ಪೋಲೀಸ್ ಇಲಾಖೆಬೆಂಗಳೂರು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸೌತ್ ಝೋನ್ ಹಾಕಿ ಚಾಂಪಿಯನ್’ಶಿಪ್ | ಕರ್ನಾಟಕ ತಂಡದಲ್ಲಿ 7 ಆಟಗಾರರು ಕೊಡಗಿನ ವೀರರು

Next Post

ಡಿಸಿಎಂ ಶಿವಕುಮಾರ್ ಭೇಟಿಯಾಗಿ ಚರ್ಚಿಸಿದ ಶಾಸಕ ಚನ್ನಬಸಪ್ಪ | ಏನೆಲ್ಲಾ ಮನವಿ ಮಾಡಿದ್ದಾರೆ?

kalpa News

kalpa News

Next Post
ಡಿಸಿಎಂ ಶಿವಕುಮಾರ್ ಭೇಟಿಯಾಗಿ ಚರ್ಚಿಸಿದ ಶಾಸಕ ಚನ್ನಬಸಪ್ಪ | ಏನೆಲ್ಲಾ ಮನವಿ ಮಾಡಿದ್ದಾರೆ?

ಡಿಸಿಎಂ ಶಿವಕುಮಾರ್ ಭೇಟಿಯಾಗಿ ಚರ್ಚಿಸಿದ ಶಾಸಕ ಚನ್ನಬಸಪ್ಪ | ಏನೆಲ್ಲಾ ಮನವಿ ಮಾಡಿದ್ದಾರೆ?

Leave a Reply Cancel reply

Your email address will not be published. Required fields are marked *

No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL