No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
  • Advertise With Us
  • Grievances
  • About Us
  • Contact Us
Tuesday, September 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ಶರೀರ ಭಗವಂತ ನೀಡಿದ ಅನರ್ಘ್ಯ ರತ್ನ: ರಾಘವೇಶ್ವರ ಶ್ರೀ

kalpa News by kalpa News
August 29, 2024
in ಉತ್ತರ ಕನ್ನಡ
0
ಮಾತಾಪಿತೃಗಳನ್ನು ದೈವಸಮಾನರಾಗಿ ಕಾಣಬೇಕು: ರಾಘವೇಶ್ವರ ಶ್ರೀ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಶರೀರವೆಂಬುದು ಭಗವಂತ ನೀಡಿದ ಅನರ್ಘ್ಯ ರತ್ನ. ಇದರ ರಚನೆಗೆ ಹೋಲಿಕೆ ಇಲ್ಲ. ಜೀವನ ಮಾರ್ಗದಲ್ಲಿ ನಮ್ಮನ್ನು ಒಯ್ಯುವ ಸಾಧನ ಅದು. ಪರಮಾರ್ಥದ ಸಾಧನೆ ಕೂಡಾ ಇದರ ಮೂಲಕವೇ ಆಗಬೇಕು. ಇದನ್ನು ಚೆನ್ನಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 39ನೇ ದಿನ ಮೈಸೂರು, ಹುಬ್ಬಳ್ಳಿ-ಧಾರವಾಡ, ಹಾವೇರಿ, ದಾವಣಗೆರೆ ವಲಯಗಳ ಸರ್ವ ಸೇವೆ ಸ್ವೀಕರಿಸಿ, ಕಾಲ ಸರಣಿಯ ಪ್ರವಚನ ಅನುಗ್ರಹಿಸಿದರು. ಎಲ್ಲ ಸಾಧನೆಗೂ ಕಾರಣವಾಗುವ ಶರೀರಕ್ಕೆ ಇರುವ ದೊಡ್ಡ ಅಪಾಯ ರೋಗದಿಂದ. ಇಂಥ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಜ್ಯೋತಿಷ ಈ ನಿಟ್ಟಿನಲ್ಲಿ ನೆರವಾಗುತ್ತದೆ ಎಂದು ಹೇಳಿದರು.
ಜ್ಯೋತಿಷ ಒಂಬತ್ತು ಗ್ರಹಗಳ ಮೂಲಕ ನಮ್ಮ ಶರೀರಕ್ಕೆ ಬರುವ ರೋಗಗಳನ್ನು ತೋರಿಸಿಕೊಡುತ್ತದೆ. ಆದರೆ ಆಯುರ್ವೇದ ವಾತ, ಪಿತ್ತ, ಕಫದಿಂದ ಎಲ್ಲ ರೋಗವನ್ನೂ ಅಂದಾಜಿಸುತ್ತದೆ. ದೇಹಕ್ಕೆ ಬಲವಿದ್ದಾಗ, ರೋಗಕ್ಕೆ ಬಲ ಕಡಿಮೆ. ದೇಹದ ಬಲ ಕಡಿಮೆಯಾದಾಗ ರೋಗದ ಬಲ ಹೆಚ್ಚುತ್ತದೆ. ಹೀಗೆ ಅನಂತ ರೋಗಗಳು ಇವೆ. ಇವೆಲ್ಲವನ್ನೂ ಗ್ರಹಗತಿಗಳಿಂದ ತಿಳಿದುಕೊಳ್ಳಬಹುದು ಎಂದು ವಿವರಿಸಿದರು.

ವಾತ-ಪಿತ್ತ-ಕಫ, ಸಪ್ತಧಾತು, ದೇವತೆಗಳ ಮೂಲಕ ಜ್ಯೋತಿಷ ರೋಗಗಳನ್ನು ನಿರೂಪಿಸುತ್ತವೆ. ಜತೆಗೆ ಇವುಗಳ ಪರಿಹಾರವನ್ನೂ ನಿರೂಪಿಸುತ್ತದೆ. ಜ್ಯೋತಿಷ, ಆಯುರ್ವೇದ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದಕ್ಕೊಂದು ಪೂರಕ ಎಂದು ಬಣ್ಣಿಸಿದರು. ಜ್ಯೋತಿಷ ಮತ್ತು ಆಯುರ್ವೇದವನ್ನು ಬಲ್ಲವನು ಅತ್ಯುತ್ತಮ ವೈದ್ಯನಾಗಬಲ್ಲ. ರೋಗನಿರ್ಣಯದಲ್ಲಿ ಇವೆರಡೂ ಜತೆಜತೆಗೆ ಸಾಗಬೇಕು ಎಂದು ಅಭಿಪ್ರಾಯಪಟ್ಟರು.
ಜಾತಕದಲ್ಲಿ ಶನಿ ದುರ್ಬಲ ಅಥವಾ ದುಸ್ತನಾದರೆ, ರೋಗಕಾರಕ ಸ್ಥಾನದಲ್ಲಿದ್ದರೆ ವಾತಸಂಬಂಧಿ ರೋಗಗಳು ಬರುತ್ತವೆ. ಪಿತ್ತಸಂಬಂಧಿ ರೋಗಗಳು ರವಿ ಹಾಗೂ ಕುಜನ ಕಾರಣದಿಂದ ಬರುತ್ತದೆ. ಕಫದಿಂದ ಬರುವ ಕಾಯಿಲೆಗಳು ಗುರುವಿನಿಂದ ಬರುತ್ತವೆ. ಚಂದ್ರ-ಶುಕ್ರ ಗ್ರಹಗಳಿಂದ ಸಂಸರ್ಗಜ ರೋಗಗಳು ಬರುತ್ತವೆ. ಬುಧನಿಂದ ಸಂನಿಪಾತಕ ರೋಗಗಳು ಬರುತ್ತವೆ. ಇದಕ್ಕೆ ಚಿಕಿತ್ಸೆ ಕೂಡಾ ಕಷ್ಟಕರ ಎಂದು ವಿಶ್ಲೇಷಿಸಿದರು.

ವಾತ-ಪಿತ್ತ-ಕಫಗಳು ತತ್ವಾತ್ಮಕವಾಗಿ ಸಂಯೋಜನೆಯಾಗುವುದರಿಂದ ಸಪ್ತಧಾತುಗಳು ನಿರ್ಮಾಣವಾಗುತ್ತವೆ. ಆಧುನಿಕ ವೈದ್ಯವಿಜ್ಞಾನವನ್ನು ಜ್ಯೋತಿಷದ ಮೂಲಕವೂ ಅರ್ಥ ಮಾಡಿಕೊಳ್ಳಬಹುದು. ಕಾಲ ಹಿತೈಷಿಯಾಗಿ ನಮ್ಮೊಂದಿಗೆ ಪ್ರತಿ ಕ್ಷಣವೂ ಮಾತನಾಡುತ್ತದೆ. ಅನವರತವಾಗಿ ನಮ್ಮ ಹಿತಕ್ಕಾಗಿ ನಮ್ಮೊಂದಿಗೆ ಮಾತನಾಡುತ್ತಿರುತ್ತದೆ. ಸೃಷ್ಟಿಚಕ್ರದಲ್ಲಿ ಒಂದು ನಕ್ಷೆಯನ್ನು ಕೊಟ್ಟು ನಮ್ಮ ಇರುವಿಕೆಯನ್ನು ತೋರಿಸಿಕೊಡುತ್ತದೆ. ಗ್ರಹ- ರಾಶಿಗಳ ಪರಿಭಾಷೆಯಲ್ಲಿ ನಮ್ಮ ಇರುವಿಕೆ, ಮುಂದಿನ ದಾರಿಯ ಬಗ್ಗೆಯೂ ತಿಳಿಸಿಕೊಡುತ್ತದೆ. ಭವಿಷ್ಯದ ಸಂಪತ್ತು- ಆಪತ್ತುಗಳನ್ನು ಹಾಗೂ ಅದರ ಮೂಲವನ್ನು ತೋರಿಸಿಕೊಡುತ್ತದೆ. ಆ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ನಮಗಿರಬೇಕು ಎಂದು ವಿಶ್ಲೇಷಿಸಿದರು.

https://kalpa.news/wp-content/uploads/2024/04/VID-20240426-WA0008.mp4

ಶರೀರದ ಪ್ರತಿ ಅವಯವಗಳಿಗೂ ಒಬ್ಬೊಬ್ಬ ದೇವರು ಇದ್ದಾರೆ. ಪ್ರತಿ ಕ್ರಿಯೆಗೂ ದೇವತೆ ಇದೆ. ಅವುಗಳಿಗೆ ಕೋಪ ಬಂದಾಗ ನಮ್ಮ ಆರೋಗ್ಯದಲ್ಲಿ ಏರು ಪೇರು ಆಗಬಹುದು. ಶರೀರವನ್ನು ಅದು ಬಂದ ಕಾರಣಕ್ಕೆ ಬಳಸದಿದ್ದರೆ, ಆಯಾ ದೇವತೆಗಳಿಗೆ ಕೋಪ ಬರುತ್ತದೆ. ಇದು ರೋಗಕ್ಕೆ ಕಾರಣವಾಗುತ್ತದೆ ಎಂದರು.

ಇಂದಿನ ಅನಾವರಣದ ಬಗ್ಗೆ ಪ್ರಸ್ತಾವಿಸಿ, ಶ್ರೇಷ್ಠ ಕಾರ್ಯಕರ್ತನ ವ್ಯಕ್ತಿತ್ವದ ಅನಾವರಣ ಇಂದು ನಡೆದಿದೆ. ಅವರ ಭಕ್ತಿ ಹಾಗೂ ಕಾರ್ಯಗಳಿಂದಾಗಿ ಅವರು ಶಾಶ್ವತವಾಗಿ ಉಳಿದಿದ್ದಾರೆ. ಭೌತಿಕತೆಗಿಂತ ಹೆಚ್ಚಿನ ಭಾವನಾತ್ಮಕತೆ ಕೆಲವು ಕಡೆ ಇರುತ್ತದೆ. ಆದರೆ ಅವರು ಭಾವವನ್ನು ತುಂಬಿ ಕೊಟ್ಟವರು. ಯಾವುದೋ ಶುಭಗಳಿಗೆಯಲ್ಲಿ ಸಂಪರ್ಕಕ್ಕೆ ಬಂದಿದ್ದು, ಜನ್ಮಜನ್ಮಾಂತರದ ಬಂಧ ಎನ್ನುವ ರೀತಿಯಲ್ಲಿ ಬೆಳೆಯಿತು. ಅಂಥ ಬಾಂಧವ್ಯ ಪ್ರಮೋದ್ ರಾವ್‍ನದ್ದು. ಮೈಸೂರಿನ ಮಠ ಎನ್ನುವ ಮಟ್ಟಕ್ಕೆ ಆ ಮನೆ ಇತ್ತು. ಎಷ್ಟೋ ಸಭೆ, ಸಮಾಲೋಚನೆಗಳು, ಮಹತ್ವದ ನಿರ್ಣಯಗಳು ಅಲ್ಲಿ ನಡೆದಿವೆ. ಅನೇಕರು ಬೆಳಕಿಗೆ ಬಂದದ್ದು ಅಲ್ಲಿಂದ ಎಂದು ಬಣ್ಣಿಸಿದರು.

ಆ ಚೇತನಕ್ಕೆ ಶಾಶ್ವತ ಶಾಂತಿ ದೊರಕಬೇಕು. ಇಡೀ ಕಾರ್ಯಕರ್ತರ ಸಮೂಹದ ಪರವಾಗಿ ಅವರನ್ನು ನೆನೆಯೋಣ. ನಿಜ ಗುರುವಿನಲ್ಲಿ ಮನಸ್ಸು ಸ್ಥಿರವಾಗಿ ಬರಲು ಪ್ರಮೋದ್ ಸ್ಫೂರ್ತಿಯಾಗಲಿ ಎಂದು ಆಶಿಸಿದರು.

ಮೈಸೂರಿನ ಅಪೂರ್ವ ಕಾರ್ಯಕರ್ತ ಕೀರ್ತಿಶೇಷ ಪ್ರಮೋದ್ ಹೆಗಡೆಯವರ ವ್ಯಕ್ತಿತ್ವದ ಅನಾವರಣವನ್ನು ಅವರ ಪತ್ನಿ ವಿಜಯಾ ಪ್ರಮೋದ್ ರಾವ್ ನೆರವೇರಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಅರವಿಂದ ಬಂಗಲಗಲ್ಲು, ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು, ಮೋಹನ ಹರಿಹರ, ವಿಶ್ವನಾಥ ಸಾರಂಗ, ಡಾ.ಎಸ್.ಆರ್.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news                                                      

Tags: GokarnaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaUttara Kannadaಗೋಕರ್ಣ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಉನ್ನತ ಶಿಕ್ಷಣಕ್ಕಾಗಿ ಅಣ್ಣಾಮಲೈ ವಿದೇಶಕ್ಕೆ | ತಮಿಳುನಾಡು ಬಿಜೆಪಿ ಅಧ್ಯಕ್ಷರ ಬದಲಾವಣೆಗೆ ಚಿಂತನೆ?

Next Post

ಸಾವಿರ ಆನೆ ಬಲದ ನಿಜವಾದ ಹೀರೋ `ಅಪ್ಪ’

kalpa News

kalpa News

Next Post
ಸಾವಿರ ಆನೆ ಬಲದ ನಿಜವಾದ ಹೀರೋ `ಅಪ್ಪ’

ಸಾವಿರ ಆನೆ ಬಲದ ನಿಜವಾದ ಹೀರೋ `ಅಪ್ಪ'

Leave a Reply Cancel reply

Your email address will not be published. Required fields are marked *

No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL