Tuesday, June 24, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಆನಂದ ಕಂದ

ನಮ್ಮ ಭಾರತದ ಕುಲಕಸುಬುಗಳ ಮೇಲೆ ಜಾಗತೀಕರಣದ ದುಷ್ಪರಿಣಾಮ

February 6, 2025
in ಆನಂದ ಕಂದ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-23  |
ನಮ್ಮ ಭಾರತದಲ್ಲಿ ಪ್ರತಿಯೊಬ್ಬರೂ ಪ್ರತಿಭಾವಂತರು. ಪ್ರತಿ ಕುಲದಲ್ಲೂ ಒಂದೊಂದು ಕೆಲಸ ಇರುತ್ತಿತ್ತು. ಒಬ್ಬರಿಗಿಂತ ಇನ್ನೊಬ್ಬರು ಪ್ರತಿಭೆಯಲ್ಲಿ ಏನೂ ಕಮ್ಮಿ ಇರಲಿಲ್ಲ. ಕುಲಗಳಿಗೆ ಸಂಬಂಧಪಟ್ಟಂತೆ ಇರುವ ಕಸುಬುಗಳಿಗೆ #Occupation ಕುಲ ಕಸುಬುಗಳೆಂದು ಕರೆಯುತ್ತಾರೆ.

ಉದಾಹರಣೆಗೆ: ಅಗಸ, ಅಕ್ಕಸಾಲಿಗ, ಕಮ್ಮಾರ, ಚಮ್ಮಾರ, ದರ್ಜಿ, ಜ್ಯೋತಿಷ್ಯ, ಪೌರೋಹಿತ್ಯ, ಅಗ್ನಿಹೋತ್ರ, ಕುಂಬಾರ, ಬಳೆಗಾರ, ನೇಕಾರರು, ಮುಂತಾದವರು.

ವಂಶಪಾರಂಪರ್ಯವಾಗಿ ಬರುತ್ತಿದ್ದ ಕಾರಣ ಆ ಕುಲಸುಬುಗಳು ಮುಂದುವರೆಯುತ್ತಿದ್ದವು. ಆ ಕೆಲಸ ಮಾಡ್ದಿದ್ದರೆ ಅವರಿಗೆ ಆ ಜಾತಿಯಿಂದ ಬಹಿಷ್ಕಾರ ಹಾಕುತ್ತಿದ್ದರು. ಹಾಗಾಗಿ ಆ ಹೆದರಿಕೆಯಿಂದಲೂ ಈ ಕೆಲಸ ಮುಂದುವರೆಯುತ್ತಿತ್ತು.

Also Read>> ಗಮನಿಸಿ ! ಫೆ.7ರಂದು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ

ಹಿಂದೆ ಒಂದು ಹಳ್ಳಿ ಎಂದರೆ ಅಲ್ಲಿ ವಾಸ ಮಾಡುವ ಜನರ ಜೊತೆಗೆ ಕುಂಬಾರ, ಅಗಸ, ಬುಟ್ಟಿ ಮಾಡುವವರು, ಕಮ್ಮಾರ, ಅಕ್ಕಸಾಲಿಗ, ನೇಕಾರ ಮತ್ತು ಮುಂತಾದವರು ವಾಸಿಸುತ್ತಿದ್ದರು.
ಅವರಿಗೆ ಏನಾದರು ವ್ಯಾಪಾರವಾಗುತ್ತಿರಲಿಲ್ಲ ಎಂದರೆ ಅವರು ಬೇರೆ ಹಳ್ಳಿ ಅಥವಾ ಊರಿಗೆ ಹೋಗುತ್ತಿರಲಿಲ್ಲ. ಏಕೆಂದರೆ ಆ ಹಳ್ಳಿಯಲ್ಲಿ ಒಂದು ಶುಭ ಅಥವಾ ಅಶುಭ ಕಾರ್ಯಕ್ರಮ ನಡೆದರೆ ಇವರೆಲ್ಲರೂ ಸಹಾಯಕ್ಕೆ ಬೇಕು.

ಈಗ ಆ ಹಳ್ಳಿಯಲ್ಲಿ ಒಂದು ಮದುವೆ ನಡೆಯುತ್ತಿದ್ದರೆ, ಚಪ್ಪರ ಹಾಕಲು ಬುಟ್ಟಿ ಹೆಣೆಯುವವರು, ಅಡಿಗೆಯ ಪಾತ್ರೆಗಳನ್ನು ತಯಾರಿಸಲು ಕಮ್ಮಾರ ಅಥವಾ ಕುಂಬಾರ, ಹೊಸ ಬಟ್ಟೆಗಳನ್ನು ನೇಯಲು ನೇಕಾರ, ಬಂಗಾರದ ಒಡವೆ ಮಾಡಿಸಲು ಅಕ್ಕಸಾಲಿಗ ಮತ್ತು ಮುಂತಾದವರು ಸಹಾಯಕ್ಕೆ ಬಂದು ಅವರ ವ್ಯಾಪಾರವನ್ನು ಮಾಡುತ್ತಿದ್ದರು.

ಇದರ ಪ್ರತಿಯಾಗಿ ಆ ಮನೆಯ/ಹಳ್ಳಿಯ ಹಿರಿಯರೆಲ್ಲರು ಈಗಿನ ತರಹ ಆ ವಸ್ತುವಿಗೆ ಪ್ರತಿಯಾಗಿ ದುಡ್ಡನ್ನು ಕೊಡುತ್ತಿರಲಿಲ್ಲ. ಅವರ ಮನೆಗಳಲ್ಲಿ ಇರುವಂತಹ ಧಾನ್ಯಗಳನ್ನು ಕೊಟ್ಟು ಅವರನ್ನು ಸಂತೋಷ ಪಡಿಸುತ್ತಿದ್ದರು. ನಂತರ ಎರಡು-ಮೂರು ತಿಂಗಳಿಗೊಮ್ಮೆ ಬರುವ ಬಳೆಗಾರರು, ಕರಡಿ ಕುಣಿಸುವವರು, ಗಂಗೆ ಎತ್ತು, ದೊಂಬರಾಟ, ಪಾತ್ರದವರು, ಜೋಕುಮಾರ ಹೇಳಿಕೆ, ಕಣಿ ಹೇಳುವವರಿಗೂ ಇದೇ ರೀತಿ ಸತ್ಕಾರ ಮಾಡಿತ್ತಿದ್ದರು. ಒಟ್ಟಿನಲ್ಲಿ ಸಹಕಾರ ಸಹಬಾಳ್ವೆಯ ಜೀವನ ಅಂದು ಸಹಜವಾಗಿತ್ತು.ನಂತರ ಪಟ್ಟಣಗಳು ಬೆಳೆಯಲು ಪ್ರಾರಂಭವಾಯಿತು. ನಗರೀಕರಣವಾದಂತೆಲ್ಲ ಓದಲೆಂದು ಬರುತ್ತಿದ್ದವರು, ದುಡಿಯಲು, ಹಣ ಸಂಪಾದನೆಗಾಗಿ ಬರಲು ಶುರು ಮಾಡಿದರು.

ಹೀಗೆ ಹಳ್ಳಿಗಳಲ್ಲಿರುವವರು ಪಟ್ಟಣಗಳಿಗೆ ಬರಲು ಶುರು ಮಾಡಿದರು ಇದು ಬೆಳೆಯುತ್ತಲೇ ಹೋಯ್ತು. ಇಲ್ಲಿ ಅವರ ಕಸುಬುಗಳಿಗೆ ಕಷ್ಟವಾದರೂ ತಮ್ಮ ಕಸುಬುಗಳನ್ನು ಬಿಡದೆ ಕುಲಕಸುಬುಗಳನ್ನು ನಡೆಸುವವರು ಹಳ್ಳಿಯಿಂದ ಪಟ್ಟಣ ಪಟ್ಟಣ ಸುತ್ತುತ್ತಿದ್ದರು.

Also Read>> ಫೆ.8 | ಸುವರ್ಣ ಸಂಸ್ಕೃತಿ ಭವನದಲ್ಲಿ ಮಕ್ಕಳಿಂದ ಯಕ್ಷಗಾನ ಪ್ರಸಂಗ

ಸುಮಾರು 1991ರ ವರೆಗೂ ಹೀಗೆ ನಡೆಯುತ್ತಿತ್ತು. ಯಾವಾಗ 1991ರಲ್ಲಿ ಸರ್ಕಾರ ಜಾಗತೀಕರಣವನ್ನು ಜಾರಿಗೆ ತಂದಿತೋ ಆಗ ಈ ಕುಲಕಸುಬುನ್ನು ನಡೆಸುವವರಿಗೆ ಕೆಲಸ ಹೋಯಿತು.(ಜಾಗತೀಕರಣ ಎಂದರೆ ನಾವು ಬೇರೆ ದೇಶಕ್ಕೆ ಹೋಗಿ ಅಥವಾ ಬೇರೆಯವರು ನಮ್ಮ ದೇಶಕ್ಕೆ ಬಂದು ಮಾರುವುದು). ಏಕೆಂದರೆ ಬೇರೆ ದೇಶಗಳಿಂದ ವ್ಯಾಪಾರ ಮಾಡಲು ಬೇರೆ ಜನರು ಬರುತ್ತರೆ. ಆದರೆ ನಾವು ಬೇರೆ ದೇಶಕ್ಕೆ ಹೋಗಿ ಮಾರುವುದಿಲ್ಲ. ಅವರು ಹಲವಾರು ದೇಶಗಳಲ್ಲಿ ಅದೇ ವಸ್ತುಗಳನ್ನು ಮಾರುತ್ತಿರುತ್ತಾರೆ. ಹಾಗಾಗಿ ಅವರು ಇಲ್ಲಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ಆದರೆ ನಮ್ಮ ದೇಶದ ಸಂಸ್ಥೆಗಳು ಬೇರೆ ದೇಶಕ್ಕೆ ಹೋಗಿ ಮಾರುವುದು ಕಡಿಮೆ. ಆದ್ದರಿಂದ ಅವರು ಹೆಚ್ಚು ಬೆಲೆಯಲ್ಲಿ ವ್ಯಾಪಾರ ಮಾಡುತ್ತಾರೆ.ಉದಾಹರಣೆಗೆ ಬಾಟಾ `ಸಂಸ್ಥೆ ನಮ್ಮ ದೇಶದ್ದಲ್ಲ. ಅದು 70 ದೇಶಗಳಲ್ಲಿ ಮಾರುತ್ತಿದ್ದರು. ಆದರೆ ಖಾದಿಮ್’ ಸಂಸ್ಥೆ ನಮ್ಮ ದೇಶದ್ದಾಗಿದ್ದು, ಕೇವಲ ಭಾರತದ 23 ಜಿಲ್ಲೆ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮಾತ್ರ ಮಾರಿತ್ತಿದೆ. ಹಾಗಾಗಿ ಬಾಟಾ’ದವರು ಕಡಿಮೆ ಬೆಲೆಯಲ್ಲಿ ಮಾರುತ್ತಾರೆ. ಆದ್ದರಿಂದ ಎಲ್ಲರೂ ಬಾಟಾ’ ಸಂಸ್ಥೆಯ ಬೂಟು ಮತ್ತು ಚಪ್ಪಲಿಗಳನ್ನು ಖರೀದಿಸಲು ಅಪೇಕ್ಷಿಸುತ್ತಾರೆ. ಈ ರೀತಿ ಆದಾಗ ನಮ್ಮ ದೇಶದವರಿಗೆ ಮತ್ತು ಕುಲಕಸುಬುಗಳನ್ನು ನಡೆಸುವವರಿಗೆ ಲಾಭವೂ ಇಲ್ಲ ಕೆಲಸವೂ ಇಲ್ಲದ ಹಾಗಾಗುತ್ತದೆ. ನಮ್ಮವರು ತಯಾರಿಸುವುದನ್ನು ಪಾಶ್ಚಾತ್ಯರ ವಸ್ತುಗಳಿಗೆ ಮೊರೆ ಹೋಗಿ ನಮ್ಮತನವನ್ನೇ ಮಾರಿಕೊಂಡಂತಾಗಿದೆ.

ನಾವೇನು ಮಾಡಬಹುದು ಎಂದು ಯೋಚಿಸಿದಾಗ ವಿದೇಶಿ ವಸ್ತುಗಳನ್ನು ತ್ಯಜಿಸಿ ಸ್ವದೇಶಿ ವಸ್ತುಗಳನ್ನು ಖರೀದಿಸಿ, ಅವರಿಗೆ ಬೆಂಬಲಿಸುವುದು ನಮ್ಮ ಕರ್ತವ್ಯ.

ನಾವು ನಮ್ಮ ದೇಶದಲ್ಲಿ ತಯಾರಾದಂತಹ ವಸ್ತುಗಳನ್ನೇ ಖರೀದಿಸಬೇಕು. ಕುಲಕಸುಬುಗಳನ್ನು ನಡೆಸುವವರಿಗೆ ಅಥವಾ ನಡೆಸಿಕೊಂಡು ಬಂದವರು ಆ ವಿದ್ಯೆಯನ್ನು ತಪ್ಪದೇ ತಮ್ಮ ಮಕ್ಕಳಿಗೆ ಹೇಳಿಕೊಡಬೇಕು.(ಇದು ಸಹ ನಾಶವಾಗಲು ಒಂದು ಕಾರಣ). ತಮ್ಮ ಮಕ್ಕಳನ್ನು ಬೇರೆ ವಿದ್ಯೆಯನ್ನು ಓದಲು ಕಳಿಸಿ, ಇದನ್ನು ಕಲಿಸಲು ಮರೆತುಬಿಡುತ್ತಾರೆ. ಹೀಗೆ ಖಂಡಿತ ಆಗಬಾರದು ಆಗ ಕುಲಕಸುಬುಗಳು ಸ್ವಲ್ಪ ಮಟ್ಟಿಗೆ ಬೆಳೆಯುತ್ತದೆ.
ನಮ್ಮತನ, ನಮ್ಮ ದೇಸೀ ಸಂಸ್ಕೃತಿ, ಕುಲಕಸುಬುಗಳನ್ನು ಹಾಗೂ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದೇ ನಮ್ಮ ಜವಾಬ್ದಾರಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: AnandakandaFlaxGoldsmithIndiaKannada News WebsiteKula Kasubu of IndiaKulakasubuLatest News KannadaOccupationಅಕ್ಕಸಾಲಿಗಅಗಸಆನಂದಕಂದಕಸುಬುಪೌರೋಹಿತ್ಯ
Previous Post

ಗಮನಿಸಿ ! ಫೆ.7ರಂದು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ

Next Post

ಶಿವಮೊಗ್ಗ ಕಂಬಳ | ಟ್ರ್ಯಾಕ್ ನಿರ್ಮಾಣ ಭೂಮಿಪೂಜೆ, ಲೋಗೋ, ವೆಬ್ ಸೈಟ್ ಆರಂಭಕ್ಕೆ ಡೇಟ್ ಫಿಕ್ಸ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶಿವಮೊಗ್ಗ ಕಂಬಳ | ಟ್ರ್ಯಾಕ್ ನಿರ್ಮಾಣ ಭೂಮಿಪೂಜೆ, ಲೋಗೋ, ವೆಬ್ ಸೈಟ್ ಆರಂಭಕ್ಕೆ ಡೇಟ್ ಫಿಕ್ಸ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಕುರಿತಾಗಿ ಮಹತ್ವದ ಮಾಹಿತಿ ಇಲ್ಲಿದೆ

June 24, 2025

ಯೋಗವು ಆರೋಗ್ಯಕರ ಜೀವನಶೈಲಿಯ ಅವಿಭಾಜ್ಯ ಅಂಗ: ಶ್ರೀ ಮ ನಿ ಪ್ರ ಮಹಾಂತ ಸ್ವಾಮೀಜಿ

June 24, 2025

ಕಾರ್ಯಕರ್ತರು ಜವಾಬ್ದಾರಿ ತೆಗೆದುಕೊಂಡು ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಬಲ ನೀಡಿ

June 24, 2025

ಜುಲೈ 6ರಂದು ವಿಪ್ರ ಯುವ ಮಹೋತ್ಸವ: ಅಭಿನವ ವಿದ್ಯಾಶಂಕರ ಭಾರತೀ ಶ್ರೀಗಳಿಂದ ಕಾರ್ಯಕ್ರಮಕ್ಕೆ ಚಾಲನೆ

June 24, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಕುರಿತಾಗಿ ಮಹತ್ವದ ಮಾಹಿತಿ ಇಲ್ಲಿದೆ

June 24, 2025

ಯೋಗವು ಆರೋಗ್ಯಕರ ಜೀವನಶೈಲಿಯ ಅವಿಭಾಜ್ಯ ಅಂಗ: ಶ್ರೀ ಮ ನಿ ಪ್ರ ಮಹಾಂತ ಸ್ವಾಮೀಜಿ

June 24, 2025

ಕಾರ್ಯಕರ್ತರು ಜವಾಬ್ದಾರಿ ತೆಗೆದುಕೊಂಡು ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಬಲ ನೀಡಿ

June 24, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!