No Result
View All Result
Naija Hegde’s Inspiring Rise to Success
English Articles

From Coast to Glory: Naija Hegde’s Inspiring Rise to Success

by ಕಲ್ಪ ನ್ಯೂಸ್
June 21, 2026
0

Kalpa Media House  |  Special Article by Satish Shetty Cherkady  | Certain achievements do not merely bring happiness; they move...

Read moreDetails
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

Periodicity of Bhubaneswar–Yesvantpur Special Train Extended

June 19, 2026
Blood Donation Camp Successfully Organised at Mysuru Division

Blood Donation Camp Successfully Organised at Mysuru Division

June 16, 2026
yoga | Participate online

India Launches Worldwide Campaign for International Day of Yoga 2026

June 13, 2026
  • Advertise With Us
  • Grievances
  • About Us
  • Contact Us
Sunday, June 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆನಂದ ಕಂದ

ನಮ್ಮ ಭಾರತದ ಕುಲಕಸುಬುಗಳ ಮೇಲೆ ಜಾಗತೀಕರಣದ ದುಷ್ಪರಿಣಾಮ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 6, 2025
in ಆನಂದ ಕಂದ
0
ನಮ್ಮ ಭಾರತದ ಕುಲಕಸುಬುಗಳ ಮೇಲೆ ಜಾಗತೀಕರಣದ ದುಷ್ಪರಿಣಾಮ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-23  |
ನಮ್ಮ ಭಾರತದಲ್ಲಿ ಪ್ರತಿಯೊಬ್ಬರೂ ಪ್ರತಿಭಾವಂತರು. ಪ್ರತಿ ಕುಲದಲ್ಲೂ ಒಂದೊಂದು ಕೆಲಸ ಇರುತ್ತಿತ್ತು. ಒಬ್ಬರಿಗಿಂತ ಇನ್ನೊಬ್ಬರು ಪ್ರತಿಭೆಯಲ್ಲಿ ಏನೂ ಕಮ್ಮಿ ಇರಲಿಲ್ಲ. ಕುಲಗಳಿಗೆ ಸಂಬಂಧಪಟ್ಟಂತೆ ಇರುವ ಕಸುಬುಗಳಿಗೆ #Occupation ಕುಲ ಕಸುಬುಗಳೆಂದು ಕರೆಯುತ್ತಾರೆ.

ಉದಾಹರಣೆಗೆ: ಅಗಸ, ಅಕ್ಕಸಾಲಿಗ, ಕಮ್ಮಾರ, ಚಮ್ಮಾರ, ದರ್ಜಿ, ಜ್ಯೋತಿಷ್ಯ, ಪೌರೋಹಿತ್ಯ, ಅಗ್ನಿಹೋತ್ರ, ಕುಂಬಾರ, ಬಳೆಗಾರ, ನೇಕಾರರು, ಮುಂತಾದವರು.

ವಂಶಪಾರಂಪರ್ಯವಾಗಿ ಬರುತ್ತಿದ್ದ ಕಾರಣ ಆ ಕುಲಸುಬುಗಳು ಮುಂದುವರೆಯುತ್ತಿದ್ದವು. ಆ ಕೆಲಸ ಮಾಡ್ದಿದ್ದರೆ ಅವರಿಗೆ ಆ ಜಾತಿಯಿಂದ ಬಹಿಷ್ಕಾರ ಹಾಕುತ್ತಿದ್ದರು. ಹಾಗಾಗಿ ಆ ಹೆದರಿಕೆಯಿಂದಲೂ ಈ ಕೆಲಸ ಮುಂದುವರೆಯುತ್ತಿತ್ತು.

Also Read>> ಗಮನಿಸಿ ! ಫೆ.7ರಂದು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ

ಹಿಂದೆ ಒಂದು ಹಳ್ಳಿ ಎಂದರೆ ಅಲ್ಲಿ ವಾಸ ಮಾಡುವ ಜನರ ಜೊತೆಗೆ ಕುಂಬಾರ, ಅಗಸ, ಬುಟ್ಟಿ ಮಾಡುವವರು, ಕಮ್ಮಾರ, ಅಕ್ಕಸಾಲಿಗ, ನೇಕಾರ ಮತ್ತು ಮುಂತಾದವರು ವಾಸಿಸುತ್ತಿದ್ದರು.
ಅವರಿಗೆ ಏನಾದರು ವ್ಯಾಪಾರವಾಗುತ್ತಿರಲಿಲ್ಲ ಎಂದರೆ ಅವರು ಬೇರೆ ಹಳ್ಳಿ ಅಥವಾ ಊರಿಗೆ ಹೋಗುತ್ತಿರಲಿಲ್ಲ. ಏಕೆಂದರೆ ಆ ಹಳ್ಳಿಯಲ್ಲಿ ಒಂದು ಶುಭ ಅಥವಾ ಅಶುಭ ಕಾರ್ಯಕ್ರಮ ನಡೆದರೆ ಇವರೆಲ್ಲರೂ ಸಹಾಯಕ್ಕೆ ಬೇಕು.

ಈಗ ಆ ಹಳ್ಳಿಯಲ್ಲಿ ಒಂದು ಮದುವೆ ನಡೆಯುತ್ತಿದ್ದರೆ, ಚಪ್ಪರ ಹಾಕಲು ಬುಟ್ಟಿ ಹೆಣೆಯುವವರು, ಅಡಿಗೆಯ ಪಾತ್ರೆಗಳನ್ನು ತಯಾರಿಸಲು ಕಮ್ಮಾರ ಅಥವಾ ಕುಂಬಾರ, ಹೊಸ ಬಟ್ಟೆಗಳನ್ನು ನೇಯಲು ನೇಕಾರ, ಬಂಗಾರದ ಒಡವೆ ಮಾಡಿಸಲು ಅಕ್ಕಸಾಲಿಗ ಮತ್ತು ಮುಂತಾದವರು ಸಹಾಯಕ್ಕೆ ಬಂದು ಅವರ ವ್ಯಾಪಾರವನ್ನು ಮಾಡುತ್ತಿದ್ದರು.

ಇದರ ಪ್ರತಿಯಾಗಿ ಆ ಮನೆಯ/ಹಳ್ಳಿಯ ಹಿರಿಯರೆಲ್ಲರು ಈಗಿನ ತರಹ ಆ ವಸ್ತುವಿಗೆ ಪ್ರತಿಯಾಗಿ ದುಡ್ಡನ್ನು ಕೊಡುತ್ತಿರಲಿಲ್ಲ. ಅವರ ಮನೆಗಳಲ್ಲಿ ಇರುವಂತಹ ಧಾನ್ಯಗಳನ್ನು ಕೊಟ್ಟು ಅವರನ್ನು ಸಂತೋಷ ಪಡಿಸುತ್ತಿದ್ದರು. ನಂತರ ಎರಡು-ಮೂರು ತಿಂಗಳಿಗೊಮ್ಮೆ ಬರುವ ಬಳೆಗಾರರು, ಕರಡಿ ಕುಣಿಸುವವರು, ಗಂಗೆ ಎತ್ತು, ದೊಂಬರಾಟ, ಪಾತ್ರದವರು, ಜೋಕುಮಾರ ಹೇಳಿಕೆ, ಕಣಿ ಹೇಳುವವರಿಗೂ ಇದೇ ರೀತಿ ಸತ್ಕಾರ ಮಾಡಿತ್ತಿದ್ದರು. ಒಟ್ಟಿನಲ್ಲಿ ಸಹಕಾರ ಸಹಬಾಳ್ವೆಯ ಜೀವನ ಅಂದು ಸಹಜವಾಗಿತ್ತು.ನಂತರ ಪಟ್ಟಣಗಳು ಬೆಳೆಯಲು ಪ್ರಾರಂಭವಾಯಿತು. ನಗರೀಕರಣವಾದಂತೆಲ್ಲ ಓದಲೆಂದು ಬರುತ್ತಿದ್ದವರು, ದುಡಿಯಲು, ಹಣ ಸಂಪಾದನೆಗಾಗಿ ಬರಲು ಶುರು ಮಾಡಿದರು.

ಹೀಗೆ ಹಳ್ಳಿಗಳಲ್ಲಿರುವವರು ಪಟ್ಟಣಗಳಿಗೆ ಬರಲು ಶುರು ಮಾಡಿದರು ಇದು ಬೆಳೆಯುತ್ತಲೇ ಹೋಯ್ತು. ಇಲ್ಲಿ ಅವರ ಕಸುಬುಗಳಿಗೆ ಕಷ್ಟವಾದರೂ ತಮ್ಮ ಕಸುಬುಗಳನ್ನು ಬಿಡದೆ ಕುಲಕಸುಬುಗಳನ್ನು ನಡೆಸುವವರು ಹಳ್ಳಿಯಿಂದ ಪಟ್ಟಣ ಪಟ್ಟಣ ಸುತ್ತುತ್ತಿದ್ದರು.

Also Read>> ಫೆ.8 | ಸುವರ್ಣ ಸಂಸ್ಕೃತಿ ಭವನದಲ್ಲಿ ಮಕ್ಕಳಿಂದ ಯಕ್ಷಗಾನ ಪ್ರಸಂಗ

ಸುಮಾರು 1991ರ ವರೆಗೂ ಹೀಗೆ ನಡೆಯುತ್ತಿತ್ತು. ಯಾವಾಗ 1991ರಲ್ಲಿ ಸರ್ಕಾರ ಜಾಗತೀಕರಣವನ್ನು ಜಾರಿಗೆ ತಂದಿತೋ ಆಗ ಈ ಕುಲಕಸುಬುನ್ನು ನಡೆಸುವವರಿಗೆ ಕೆಲಸ ಹೋಯಿತು.(ಜಾಗತೀಕರಣ ಎಂದರೆ ನಾವು ಬೇರೆ ದೇಶಕ್ಕೆ ಹೋಗಿ ಅಥವಾ ಬೇರೆಯವರು ನಮ್ಮ ದೇಶಕ್ಕೆ ಬಂದು ಮಾರುವುದು). ಏಕೆಂದರೆ ಬೇರೆ ದೇಶಗಳಿಂದ ವ್ಯಾಪಾರ ಮಾಡಲು ಬೇರೆ ಜನರು ಬರುತ್ತರೆ. ಆದರೆ ನಾವು ಬೇರೆ ದೇಶಕ್ಕೆ ಹೋಗಿ ಮಾರುವುದಿಲ್ಲ. ಅವರು ಹಲವಾರು ದೇಶಗಳಲ್ಲಿ ಅದೇ ವಸ್ತುಗಳನ್ನು ಮಾರುತ್ತಿರುತ್ತಾರೆ. ಹಾಗಾಗಿ ಅವರು ಇಲ್ಲಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ಆದರೆ ನಮ್ಮ ದೇಶದ ಸಂಸ್ಥೆಗಳು ಬೇರೆ ದೇಶಕ್ಕೆ ಹೋಗಿ ಮಾರುವುದು ಕಡಿಮೆ. ಆದ್ದರಿಂದ ಅವರು ಹೆಚ್ಚು ಬೆಲೆಯಲ್ಲಿ ವ್ಯಾಪಾರ ಮಾಡುತ್ತಾರೆ.ಉದಾಹರಣೆಗೆ ಬಾಟಾ `ಸಂಸ್ಥೆ ನಮ್ಮ ದೇಶದ್ದಲ್ಲ. ಅದು 70 ದೇಶಗಳಲ್ಲಿ ಮಾರುತ್ತಿದ್ದರು. ಆದರೆ ಖಾದಿಮ್’ ಸಂಸ್ಥೆ ನಮ್ಮ ದೇಶದ್ದಾಗಿದ್ದು, ಕೇವಲ ಭಾರತದ 23 ಜಿಲ್ಲೆ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮಾತ್ರ ಮಾರಿತ್ತಿದೆ. ಹಾಗಾಗಿ ಬಾಟಾ’ದವರು ಕಡಿಮೆ ಬೆಲೆಯಲ್ಲಿ ಮಾರುತ್ತಾರೆ. ಆದ್ದರಿಂದ ಎಲ್ಲರೂ ಬಾಟಾ’ ಸಂಸ್ಥೆಯ ಬೂಟು ಮತ್ತು ಚಪ್ಪಲಿಗಳನ್ನು ಖರೀದಿಸಲು ಅಪೇಕ್ಷಿಸುತ್ತಾರೆ. ಈ ರೀತಿ ಆದಾಗ ನಮ್ಮ ದೇಶದವರಿಗೆ ಮತ್ತು ಕುಲಕಸುಬುಗಳನ್ನು ನಡೆಸುವವರಿಗೆ ಲಾಭವೂ ಇಲ್ಲ ಕೆಲಸವೂ ಇಲ್ಲದ ಹಾಗಾಗುತ್ತದೆ. ನಮ್ಮವರು ತಯಾರಿಸುವುದನ್ನು ಪಾಶ್ಚಾತ್ಯರ ವಸ್ತುಗಳಿಗೆ ಮೊರೆ ಹೋಗಿ ನಮ್ಮತನವನ್ನೇ ಮಾರಿಕೊಂಡಂತಾಗಿದೆ.

ನಾವೇನು ಮಾಡಬಹುದು ಎಂದು ಯೋಚಿಸಿದಾಗ ವಿದೇಶಿ ವಸ್ತುಗಳನ್ನು ತ್ಯಜಿಸಿ ಸ್ವದೇಶಿ ವಸ್ತುಗಳನ್ನು ಖರೀದಿಸಿ, ಅವರಿಗೆ ಬೆಂಬಲಿಸುವುದು ನಮ್ಮ ಕರ್ತವ್ಯ.

ನಾವು ನಮ್ಮ ದೇಶದಲ್ಲಿ ತಯಾರಾದಂತಹ ವಸ್ತುಗಳನ್ನೇ ಖರೀದಿಸಬೇಕು. ಕುಲಕಸುಬುಗಳನ್ನು ನಡೆಸುವವರಿಗೆ ಅಥವಾ ನಡೆಸಿಕೊಂಡು ಬಂದವರು ಆ ವಿದ್ಯೆಯನ್ನು ತಪ್ಪದೇ ತಮ್ಮ ಮಕ್ಕಳಿಗೆ ಹೇಳಿಕೊಡಬೇಕು.(ಇದು ಸಹ ನಾಶವಾಗಲು ಒಂದು ಕಾರಣ). ತಮ್ಮ ಮಕ್ಕಳನ್ನು ಬೇರೆ ವಿದ್ಯೆಯನ್ನು ಓದಲು ಕಳಿಸಿ, ಇದನ್ನು ಕಲಿಸಲು ಮರೆತುಬಿಡುತ್ತಾರೆ. ಹೀಗೆ ಖಂಡಿತ ಆಗಬಾರದು ಆಗ ಕುಲಕಸುಬುಗಳು ಸ್ವಲ್ಪ ಮಟ್ಟಿಗೆ ಬೆಳೆಯುತ್ತದೆ.
ನಮ್ಮತನ, ನಮ್ಮ ದೇಸೀ ಸಂಸ್ಕೃತಿ, ಕುಲಕಸುಬುಗಳನ್ನು ಹಾಗೂ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದೇ ನಮ್ಮ ಜವಾಬ್ದಾರಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: AnandakandaFlaxGoldsmithIndiaKannada News WebsiteKula Kasubu of IndiaKulakasubuLatest News KannadaOccupationಅಕ್ಕಸಾಲಿಗಅಗಸಆನಂದಕಂದಕಸುಬುಪೌರೋಹಿತ್ಯ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಗಮನಿಸಿ ! ಫೆ.7ರಂದು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ

Next Post

ಶಿವಮೊಗ್ಗ ಕಂಬಳ | ಟ್ರ್ಯಾಕ್ ನಿರ್ಮಾಣ ಭೂಮಿಪೂಜೆ, ಲೋಗೋ, ವೆಬ್ ಸೈಟ್ ಆರಂಭಕ್ಕೆ ಡೇಟ್ ಫಿಕ್ಸ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿವಮೊಗ್ಗ | ತುಂಗಾ ತಟದಲ್ಲಿ ಕರಾವಳಿಯ ಕಂಬಳ | ಎಲ್ಲಿ, ಯಾವಾಗ ನಡೆಯಲಿದೆ? ಇಲ್ಲಿದೆ ವಿವರ

ಶಿವಮೊಗ್ಗ ಕಂಬಳ | ಟ್ರ್ಯಾಕ್ ನಿರ್ಮಾಣ ಭೂಮಿಪೂಜೆ, ಲೋಗೋ, ವೆಬ್ ಸೈಟ್ ಆರಂಭಕ್ಕೆ ಡೇಟ್ ಫಿಕ್ಸ್

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಪಶು ವೈದ್ಯಕೀಯ ಕಾಲೇಜುಗಳಿಗೆ ಖಾಸಗಿ ಪ್ರವೇಶ ವಿರೋಧ: ಶಾಸಕರಿಗೆ ವಿದ್ಯಾರ್ಥಿಗಳ ಮನವಿ

ಪಶು ವೈದ್ಯಕೀಯ ಕಾಲೇಜುಗಳಿಗೆ ಖಾಸಗಿ ಪ್ರವೇಶ ವಿರೋಧ: ಶಾಸಕರಿಗೆ ವಿದ್ಯಾರ್ಥಿಗಳ ಮನವಿ

June 20, 2026
ಶಿವಮೊಗ್ಗ | ವಿವೇಕಾನಂದ ಬಡಾವಣೆಯಲ್ಲಿ ಪೊಲೀಸ್ ಚೌಕಿ ನಿರ್ಮಾಣಕ್ಕೆ ಆಗ್ರಹ | ಕಾರಣವೇನು?

ಭದ್ರಾವತಿ | ತಂದೆ ವಿರುದ್ಧ 112 ಪೊಲೀಸರಿಗೆ ಕರೆ ಮಾಡಿದ ಮಗ | ಏನಾಯ್ತು?

June 20, 2026
Cymatic Carnatic

Cymatic Carnatic-see the sound of music, a program with a novel vision

June 20, 2026
ಇನ್‌ಸ್ಟಾಗ್ರಾಮ್–ಟೆಲಿಗ್ರಾಂ ಟ್ರೇಡಿಂಗ್ ಮೋಸ: ರೈತ ಯುವಕನಿಂದ ₹2.05 ಕೋಟಿ ವಂಚನೆ

ಇನ್‌ಸ್ಟಾಗ್ರಾಮ್–ಟೆಲಿಗ್ರಾಂ ಟ್ರೇಡಿಂಗ್ ಮೋಸ: ರೈತ ಯುವಕನಿಂದ ₹2.05 ಕೋಟಿ ವಂಚನೆ

June 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL