ಕಲ್ಪ ಮೀಡಿಯಾ ಹೌಸ್ | ಕಡೂರು/ಯಶವಂತಪುರ |
ರೈಲ್ವೆ ರಕ್ಷಣಾ ಪಡೆ #Railway Protection Force ನಡೆಸಿದ ನಡೆಸಿದ ಕಾರ್ಯಾಚರಣೆಯಲ್ಲಿ ಟಾಟಾನಗರ – ಯಶವಂತಪುರ ಎಕ್ಸ್’ಪ್ರೆಸ್ ರೈಲಿನಲ್ಲಿ 5.050 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.
ಆಪರೇಷನ್ ನಾರ್ಕೋಸ್ ಆಧೀನದಲ್ಲಿ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಈ ರೈಲಿನಲ್ಲಿ ಮಾದಕ ವಸ್ತುವನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ಮೈಸೂರು ಆರ್’ಪಿಎಫ್ ಹಿರಿಯ ವಿಭಾಗೀಯ ಭದ್ರತಾ ಆಯುಕ್ತರಾದ ಜೆ.ಆರ್. ಸ್ಯಾಮ್ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಕಾರ್ಯಾಚರಣೆಯ ಪರಿಶೀಲನೆ ವೇಳೆ ಪರಿಶೀಲನೆ ವೇಳೆ ಮಹೇಂದ್ರ ದಾಸ್ (57), ಧನು ರವಿ ದಾಸ್ ಅವರ ಪುತ್ರ, ಬಿಹಾರದ ಜಮುಯ್ ಜಿಲ್ಲೆಯ ಸೋನಾ ಗ್ರಾಮದ ನಿವಾಸಿಯಾಗಿರುವ ಹಾಗೂ ಈ ರೈಲಿನಲ್ಲಿ ನಲ್ಲಿ ಬೆಡ್ರೋಲ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ. ಈ ವ್ಯಕ್ತಿಯು 5.050 ಕೆಜಿ ಗಾಂಜಾ ಹೊಂದಿರುವ ಚೀಲವನ್ನು ಕೈಯಲ್ಲಿ ಇಟ್ಟುಕೊಂಡಿರುವುದು ಪತ್ತೆಯಾಗಿದೆ.
ಈ ಮಾದಕ ವಸ್ತುವನ್ನು ಕಡೂರು ರೈಲು ನಿಲ್ದಾಣದಲ್ಲಿ ವಶಪಡಿಸಲಾಗಿದ್ದು, ಈ ಪ್ರಕರಣವನ್ನು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಯಿತು. ಅಬಕಾರಿ ಇಲಾಖೆಯ ಇನ್ಸ್’ಪೆಕ್ಟರ್ ಸಂದೀಪ್ ಅವರು ಜಪ್ತಿ ಮಾಡಿದರು. ವಶಪಡಿಸಿದ ವಸ್ತುಗಳು ಗಾಂಜಾ 5.050 ಕೆಜಿ ರೂ.3,03,000, ಮತ್ತು ಒಂದು ಮೊಬೈಲ್ ಸೇರಿ ಒಟ್ಟು 3,10,000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆ ಮೂಲಕ ರೈಲ್ವೆ ರಕ್ಷಣಾ ಪಡೆ ನಿಷಿದ್ಧ ಮಾದಕ ವಸ್ತು ಸಾಗಣೆಯ ವಿರುದ್ಧದ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದು, ಸಾರ್ವಜನಿಕ ಸುರಕ್ಷತೆ ಹಾಗೂ ಭಾರತೀಯ ರೈಲ್ವೆಯ ಸಮಗ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ರೈಲ್ವೆ ಭದ್ರತಾ ಪಡೆ ನಡೆಸಿದ ಈ ಕಾರ್ಯಾಚರಣೆಯಲ್ಲಿ ಮೈಸೂರು ಸಿಬಿಐ ಸಹಾಯಕ ಉಪನಿರೀಕ್ಷಕ ಬಿ. ಆನಂದ್, ಸಿಬ್ಬಂದಿಗಳಾದ ಟಿ. ಶಿವಾನಂದ, ಮುಜಮ್ಮಿಲ್ ಖಾನ್, ಜಿ. ಶಿವಮೂರ್ತಿ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post