ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-28 |
ಪ್ರಕೃತಿ, ಭಗವಂತ, ಆಧ್ಯಾತ್ಮ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಹಿಂದಿನ ತಲೆಮಾರುಗಳಿಂದ ಪಾಲಿಸಿಕೊಂಡು ಬಂದಿರುವ ನಿಯಮಗಳು, ಕಟ್ಟುಪಾಡುಗಳು ಹಾಗೂ ಆಚರಣೆಗಳೇ ಪರಂಪರೆ.
ನಮ್ಮ ಸನಾತನ ಪರಂಪರೆ ಅತ್ಯಂತ ವಿಶಾಲವೂ, ವೈಜ್ಞಾನಿಕವೂ, ಶ್ರೀಮಂತವೂ, ಧರ್ಮಿಕವೂ ಆದ ದೃಢ ಪರಂಪರೆಯಾಗಿದೆ. ಆ ಕಾರಣದಿಂದಲೇ ಅನೇಕರಿಂದ ಎಷ್ಟೋ ಬಾರಿ ದಾಳಿಗೊಳಗಾದರೂ ನಶಿಸದೆ ಸ್ಥಿರವಾಗಿ ಉಳಿದ ಪರಂಪರೆ ನಮ್ಮದಾಗಿದೆ. ಇಂತಹ ಶ್ರೇಷ್ಠ ಪರಂಪರೆಯ ವಾಹಕರೇ ನಮ್ಮ ಹಿರಿಯರು. ಕುಟುಂಬದಲ್ಲಿ ಬೇರಿನ ರೂಪದಲ್ಲಿ ನಿಂತು ಹೊಸ ಚಿಗುರುಗಳಿಗೆ ಪರಂಪರೆಯ ಗುಟುಕೆರೆಯುವ ಹಿರಿಯರು ಪರಂಪರಾ ಬೀಜರಕ್ಷೆಯ ಕೊಂಡಿಗಳಾಗಿದ್ದಾರೆ.
ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಮಕ್ಕಳು ಇವರೆಲ್ಲರೂ ಸೇರಿ ಬಾಳಿದರೆ ಅದು ಒಂದು ಒಟ್ಟು ಕುಟುಂಬ ಎನಿಸಿಕೊಳ್ಳುತ್ತದೆ. ಕುಟುಂಬದಲ್ಲಿ ಅಪ್ಪ-ಅಮ್ಮಂದಿರು ಗೃಹಸ್ಥಿಯನ್ನು ಸಂಭಾಳಿಸುವ ಜವಾಬ್ದಾರಿಯನ್ನು ಹೊತ್ತರೆ, ಗೃಹಸ್ಥಿಯ ಜವಾಬ್ದಾರಿಯಿಂದ ಮುಕ್ತರಾದ ಹಿರಿಯರು ಮಕ್ಕಳನ್ನು ನೋಡಿಕೊಳ್ಳುವರು. ಅಜ್ಜಿ-ತಾತ ಮತ್ತು ಮೊಮ್ಮಕ್ಕಳ ಪ್ರೀತಿ ಹೇಳತೀರದ್ದು. ಅವರು ಮಕ್ಕಳ ಪರ ನಿಂತು, ಅವರಿಗೆ ಬೆಂಬಲ ನೀಡುತ್ತಾರೆ. ಕಥೆಗಳನ್ನು ಹೇಳುವ ಮೂಲಕ ಅವರಲ್ಲಿ ಒಂದು ವ್ಯಕ್ತಿತ್ವವನ್ನು ಸೃಷ್ಟಿಸುತ್ತಾರೆ.
ತಾವು ಕಲಿತ ರಂಗೋಲಿ, ಕಲೆ, ಹಾಡುಗಳು, ವಾದ್ಯಗಳು ಇತರ ಕಲೆಗಳನ್ನು ಹೇಳಿಕೊಡುತ್ತಾರೆ. ಹಿರಿಯರಿದ್ದ ಮನೆಯಲ್ಲಿ ,ಅವರ ಆಶರ್ವಾದವನ್ನು ಪಡೆಯಲು ಹಲವಾರು ಮಂದಿ ಬರುತ್ತಿರುತ್ತಾರೆ ಅವರಿಂದ ಮನೆಯ ಮಕ್ಕಳಿಗೆ ಬಾಂಧವ್ಯ ನರ್ವಹಣೆಯು ಹಾಸುಹೊಕ್ಕಾಗಿರುತ್ತದೆ. ನಿಜಕ್ಕೂ ಹಿರಿಯರಿದ್ದ ಮನೆಯು ಭದ್ರವಾದ ಸೂರಿರುವ ಮನೆಯಂತೆ. ಅಜ್ಜಿ ನೀಡುವ ಊಟ ಹೆಚ್ಚನಿಸಿದರು ಸುಖಕರವೇ. ಅಜ್ಜನೊಡನೆಯ ಸಂಜೆಯ ವಿಹಾರ ಜೀವನದ ಮರೆಯಲಾಗದ ಘಳಿಗೆ.
ನಾಲ್ಕು ಆಶ್ರಮಗಳಲ್ಲಿ ‘ವಾನಪ್ರಸ್ಥ’ವೂ ಒಂದು. ಅದು ಮನುಷ್ಯನ ಬೆಳವಣಿಗೆಯ ಒಂದು ಹಂತವೇ ಆಗಿದೆ. ಜೀವನದ ಎಲ್ಲ ದಾಯಿತ್ವಗಳನ್ನು ನಿಭಾಯಿಸಿ, ತನ್ನ ಆಧ್ಯಾತ್ಮ ಸಾಧನೆಯತ್ತ ತೆರಳುವ ಅತಿ ಮುಖ್ಯವಾದ ಜೀವನಾವಧಿ. ಇಲ್ಲಿ ಆಸೆ ಆಕಾಂಕ್ಷೆಗಳನ್ನು ಮೀರಿ, ಮಾನಸಿಕ ಸಿದ್ಧತೆಯನ್ನು ಮಾಡಿಕೊಂಡು, ದಾನ ರ್ಮಗಳನ್ನಾಚರಿಸುತ್ತಾ, ವಿಶೇಷವಾಗಿ ಸೇವೆಯಲ್ಲಿ ತೊಡಗಿ ಆ ಮೂಲಕ ಸಮಾಜದ ಭದ್ರ ಬುನಾದಿಗೆ ಕೊಡುಗೆ ನೀಡುವ ಹಂತವೇ ಇದಾಗಿದೆ. ಅನುಭವಿಗಳಾದ ಇವರು ಅನನುಭವಿಗಳಾದ ತಮ್ಮ ನಂತರದ ಪೀಳಿಗೆಗೆ ಮರ್ಗ ರ್ಶನವನ್ನು ಮಾಡುತ್ತಾರೆ. ತಮ್ಮ ಕುಲ ಪರಂಪರೆ, ನಾಡಿನ ಪರಂಪರೆ, ದೇಶದ ಪರಂಪರೆಗಳನ್ನೊಳಗೊಂಡಂತೆ ಇವರ ಅನುಭವ ಸೇತುವೆಯಾಗಿ ಯುವಪೀಳಿಗೆಯನ್ನು ಬೆಸೆಯುತ್ತದೆ ಎಂದರೆ ತಪ್ಪಾಗಲಾರದು. ಈಗಿನ ಸಮಾಜದಲ್ಲಿ ಅಂತಹ ವೃದ್ಧರನ್ನು ದುಡಿಮೆಗಾಗಿಯೋ, ಇನ್ನೇನೋ ಕಾರಣಗಳಿಗಾಗಿಯೋ, ಹಳೆಯ ಪೀಠೋಪಕರಣಗಳೆಂದು ನಾಮಕರಣ ಮಾಡಿ ದೂರ ವಿಡಲಾಗುತ್ತಿದೆ. ಹಣವನ್ನು ಗಳಿಸುವ ಗೊಡವೆಯಲ್ಲಿ ಮಕ್ಕಳನ್ನು ‘ಡೇ ಕೇರ್’ ಗಳಿಗೆ ನೂಕುತ್ತಿದ್ದೇವೆ .ಹಿರಿಯರಿಗೂ ಮೊಮ್ಮಕ್ಕಳಿಗೂ ಮಧ್ಯೆ ಇದ್ದ ಕೊಂಡಿಯನ್ನು ಕತ್ತರಿಸುವ ಮೂಲಕ ಪರಂಪರೆಯ ಕೊಂಡಿಯನ್ನೂ ಕತ್ತರಿಸಲಾಗುತ್ತಿದೆ. ಭೋಗ ಜೀವನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಸದಾ ಸಂಪತ್ತಿನ ಹಿಂದೆಯೇ ಓಡುತ್ತಿದ್ದೇವೆ. ಹಿರಿಯರಿಂದ ನಮಗೆ ಆಗಿರುವ ಉಪಕಾರಗಳನ್ನು ಮರೆತು, ಅವರನ್ನು ನರ್ದಯಯಿಂದ ಮೂಲೆಗುಂಪಾಗಿಸುತ್ತಿದ್ದೇದೆ. ಕೇವಲ ಕ್ಷಣಿಕ ಸುಖಕ್ಕಾಗಿ ಇಂದು ಹಿರಿಯರನ್ನು ದೂರವಿರಿಸಿ, ನಮ್ಮ ಸಂಸ್ಕೃತಿಯ ನಾಶಕ್ಕೆ ಕಾರಣವಾಗುತ್ತಿರುವ ನಮಗೂ ಮುಂದೊಂದು ದಿನ ಇದೇ ಪರಿಸ್ಥಿತಿ ಕಟ್ಟಿಟ್ಟಬುತ್ತಿ ಎಂಬುದನ್ನು ನಾವು ನೆನಪಿನಲ್ಲಿಡಲೇ ಬೇಕು. ಇದು ನಮ್ಮ ಸಂಸೃತಿಯಲ್ಲ. ಮೊದಲಿನಿಂದಲೂ ಹಿರಿಯರೆಂಬ ಹೆಮ್ಮರದ ಕೆಳಗೆ ಆಶ್ರಯ ಪಡೆದ ಹಕ್ಕಿಗಳು ನಾವು; ಆದ್ದರಿಂದ ಹಿರಿಯರ ಸಲಹೆಗಳನ್ನು ತಲೆಬಿಸಿ ಎಂದುಕೊಳ್ಳದೆಯೇ, ಮನೆಯನ್ನು ಬೆಳಗುವ ಆಶಾ ಕಿರಣ ಎಂದು ಭಾವಿಸಿ, ಪೂಜಿಸಿ,ಸೇವೆಗೈದು ಜೀವನದಲ್ಲಿ ಅಭಿವೃದ್ಧಿಯನ್ನು ಕಾಣೋಣ. ಹೃದಯದಲ್ಲಿಟ್ಟುಕೊಂಡು ಪೂಜಿಸಬೇಕಾದವರನ್ನು ಕತ್ತಲೆ ಕೋಣೆ ಸೇರುವಂತೆ ಮಾಡದಿರೋಣ.
ಜೇನಿನ ಗೂಡಿನಂತೆ ಒಟ್ಟಿಗೆ ಬಾಳಿ ಜೀವನವನ್ನು ಸಂತೋಷದಿಂದ ಸಂಭ್ರಮಿಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post