ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ಪ್ರತಿಯೊಂದು ಜೀವವನ್ನು ಗೌರವ ಕೊಡುವದು ಮಾನವನ ಕರ್ತವ್ಯ. ಮನುಷ್ಯರು ಪ್ರಾಣಿಗಳು ಯಾವುದೇ ಜೀವ ಇರಲಿ ಗೌರವ ಕೊಡಬೇಕು.
ವಯಸ್ಸು ಎಷ್ಟೇ ಇರಲಿ, ಬಣ್ಣ ರೂಪ, ವಿದ್ಯೆ, ಅಂತಸ್ತು ಏನೇ ಇರಲಿ ಎಲ್ಲರಿಗೂ ಅವರದ್ದೇ ಆದ ಬೆಲೆ ಇದ್ದೇ ಇರುತ್ತದೆ. ಅಹಂಕಾರ ಪ್ರತಿಷ್ಠೆಯಿಂದ ನಮಗಿಂತ ಸಣ್ಣವರನ್ನು ಆರ್ಥಿಕವಾಗಿ ದುರ್ಬಲರನ್ನು, ಅಶಕ್ತರನ್ನು ಕೀಳಾಗಿ ನೋಡುವುದು ಮನುಷ್ಯ ಗುಣವಾಗಿ ಮಾರ್ಪಟ್ಟಿದೆ ಆದರೆ ಪ್ರತಿಯೊಂದು ಜೀವಕ್ಕೂ ಗೌರವ ಕೊಡಬೇಕು ಎಲ್ಲರಲ್ಲೂ ತಾನು ಇದ್ದೇನೆ ಎಂದು ಭಗವಂತ ಭಗವದ್ಗೀತೆಯಲ್ಲಿ ಹೇಳಿದ್ದಾನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















