ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-31 |
ಜೀವೋ ಜೀವಸ್ಯ ಜೀವನಂ ಎಂಬುದು ಕೇವಲ ನುಡಿಗಟ್ಟಲ್ಲ ಇದು ಸೃಷ್ಟಿಯ ಅಡಿಗಲ್ಲು. ಒಂದು ಜೀವಿ ಮತ್ತೊಂದು ಜೀವಿಯ ಬದುಕಿಗೆ ಆಧಾರವಾಗಿರುವುದು ನಿಸರ್ಗದ ಸಹಜ ನಿಯಮ. ಹುಲ್ಲು ಸಸ್ಯಹಾರಿ ಪ್ರಾಣಿಗಳಿಗೆ ಆಹಾರ, ಆ ಪ್ರಾಣಿಗಳು ಮಾಂಸಭಕ್ಷಕ ಪ್ರಾಣಿಗಳಿಗೆ ಆಹಾರ, ಆ ಪ್ರಾಣಿ ಸತ್ತ ನಂತರ ಮಣ್ಣನ್ನು ಸೇರಿ ಮತ್ತೊಂದು ಜೀವಿಗೆ ಪೋಷಕವಾಗುತ್ತದೆ. ಈ ಚಕ್ರದಲ್ಲಿ ಒಂದರ ಅಂತ್ಯ ಇನ್ನೊಂದರ ಆರಂಭವಾಗಿದೆ.
ಸಸ್ಯಗಳು ಸೂರ್ಯನ ಬೆಳಕಿನಿಂದ ಆಹಾರವನ್ನು ತಯಾರಿಸುತ್ತವೆ, ಪಕ್ಷಿಗಳು ಕೀಟಗಳನ್ನು ತಿಂದು ಬೆಳೆಗಳನ್ನು ಕಾಪಾಡುತ್ತವೆ, ಜೇನು ಹುಳಗಳು ಹೂವಿನ ರಸದಿಂದ ಜೇನು ತಯಾರಿಸುತ್ತವೆ. ಹೀಗೆ ಪ್ರತಿಯೊಂದು ಜೀವಿ, ನದಿ, ಪರ್ವತ ಎಲ್ಲವೂ ಪರಸ್ಪರ ಬಿಗಿದ ಜಾಲದಂತಿದೆ. ಈ ಜಾಗದಲ್ಲಿ ಒಂದು ಕೊಂಡಿ ಕತ್ತರಿಸಿದರೂ ಇಡೀ ಜಾಲವೇ ಹಾಳಾಗುತ್ತದೆ.


ಅದೇ ಮನುಷ್ಯ ಪ್ರಕೃತಿಯೊಂದಿಗೆ ಸಹಜವಾಗಿ ಬದುಕಿದರೆ ಒಂದು ಸುಂದರ ಸಮತೋಲನ ನಿರ್ಮಾಣವಾಗುತ್ತದೆ. ಗಿಡ ನೆಡುವುದು, ಪ್ರಾಣಿಗಳನ್ನು ಕಾಪಾಡುವುದು, ನದಿಗಳನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವುದು – ಇವು ಸಣ್ಣ ಸಣ್ಣ ಕಾರ್ಯಗಳಂತೆ ಕಂಡರೂ, ನಮ್ಮ ಮುಂದಿನ ಪೀಳಿಗೆಗೆ ನಾವು ನೀಡುವ ಮಹತ್ವದ ನಿಧಿಯಾಗಿರುತ್ತದೆ.
ಕೊನೆಯದಾಗಿ ಪ್ರಕೃತಿ ನಮಗೆ ತಿಳಿಸುವುದೇನೆಂದರೆ ‘ನೀನು ಬೇರೆಯವರಿಗೆ ಸಹಾಯಕನಾಗಿದ್ದರೆ ಬೇರೆಯವರು ನಿನಗೆ ಸಹಾಯಕರಾಗಿರುತ್ತಾರೆ.’ ಇದನ್ನು ಅರಿತಾಗ ಮಾತ್ರ ಮನುಷ್ಯ ನಿಜವಾದ ಅರ್ಥದಲ್ಲಿ ಬದುಕಿದ್ದಾನೆ ಎಂದು ಹೇಳಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















Discussion about this post