ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ನಮ್ಮ ಕೆಲಸವನ್ನು ನಾವು ಮಾಡಿ ಬಿಡಬೇಕು. ಯಾವುದೇ ಕೆಲಸ ಕಾರ್ಯ ಮಾಡುವಾಗ ಲಾಭ ನಷ್ಟಗಳನ್ನು ಯೋಚಿಸಿ ಮಾಡಬೇಕು ಎಂಬುದು ಸಾಮಾನ್ಯ ಅಭ್ಯಾಸ ಆದರೆ ಎಲ್ಲ ಕೆಲಸ ಕಾರ್ಯಗಳು ಲಾಭಕ್ಕಾಗಿ ಮಾಡುವುದು ಅಥವಾ ನಷ್ಟವಾಗುವುದು ಎಂದು ಬಿಡಬೇಕು ಎಂಬ ನಿಯಮ ಇರುವುದಿಲ್ಲ. ಕೆಲವು ಮಾನವೀಯತೆಯ ಅವಶ್ಯಕತೆಯ ಕೆಲಸಗಳನ್ನು ಲಾಭ ಅಥವಾ ಮತ್ತೇ ಯಾವುದೇ ಉದ್ದೇಶವಿರದೇ ಮಾಡಬೇಕು.
ಲಾಭ ನಷ್ಟ ನೋಡುವುದು ವ್ಯವಹಾರ ಮತ್ತೊಬ್ಬರ ಪ್ರಯೋಜನ ಹಾಗೂ ಸಹಾಯಕ್ಕೆ ಮಾಡುವುದು ಸೇವೆ ಎನಿಸುತ್ತದೆ. ಹೀಗಾಗಿ ಜೀವನದಲ್ಲಿ ವ್ಯಾಪಾರ ವ್ಯವಹಾರದ ಜೊತೆಗೆ ಸ್ವಲ್ಪ ಮಟ್ಟಿಗೆ ಸೇವೆಯನ್ನು ಕೂಡ ಮಾಡಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















