ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಕಿತ್ತೂರು ರಾಣಿ ಚೆನ್ನಮ್ಮ, #Kittu Rani Chennamma ಕಿತ್ತೂರಿನ ವೀರ ರಾಣಿ ಮತ್ತು ಭಾರತದ ಮೊದಲ ಮಹಿಳಾ ಸ್ವಾತಂತ್ರö್ಯ ಹೋರಾಟಗಾರ್ತಿ, ಅವರ ಜನ್ಮ ದಿನಾಚರಣೆಯನ್ನು ಇಂದು ನೈಋತ್ಯ ರೈಲ್ವೆಯ ಪ್ರಧಾನ ಕಛೇರಿಯಾದ ರೈಲ್ ಸೌಧದಲ್ಲಿ ಗೌರವಪೂರ್ವಕವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ, ನೈಋತ್ಯ ರೈಲ್ವೆಯ #Southwestern Railway ಮಹಾ ಪ್ರಬಂಧಕರಾದ ಮುಕುಲ್ ಶರಣ್ ಮಾಥುರ್ ಅವರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಹೆಚ್ಚುವರಿ ಮಹಾ ಪ್ರಬಂಧಕರಾದ ಪಿ. ಅನಂತ್, ವಿವಿಧ ಪ್ರಧಾನ ವಿಭಾಗದ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಆ ಮಹಾನ್ ಸ್ವಾತಂತ್ರ ಹೋರಾಟಗಾರ್ತಿಗೆ ಗೌರವ ಸಲ್ಲಿಸಿದರು.
ತಮ್ಮ ನಾಡು ಮತ್ತು ಜನರ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ರಾಣಿ ಚೆನ್ನಮ್ಮ ನಡೆಸಿದ ಅಸಾಧಾರಣ ಶಕ್ತಿ ಮತ್ತು ಶೌರ್ಯದ ಹೋರಾಟವನ್ನು ಸಭಿಕರು ಹೆಮ್ಮೆಯಿಂದ ಸ್ಮರಿಸಿದರು.
ರಾಣಿ ಚೆನ್ನಮ್ಮ ಅವರ ವೀರ ಪ್ರತಿರೋಧದ ಇತಿಹಾಸ ಮತ್ತು ಅವರ ಪ್ರಸಿದ್ಧ ನುಡಿಯಾದ ಕಪ್ಪ ಕೊಡಬೇಕೆ ಕಪ್ಪ? ಅನ್ನು ನೆನಪಿಸಿಕೊಳ್ಳಲಾಯಿತು. ಇದು ಬ್ರಿಟಿಷರಿಗೆ ಅವರ ಧೈರ್ಯಶಾಲಿ ಸವಾಲು ಮತ್ತು ತಮ್ಮ ಸಾಮ್ರಾಜ್ಯದ ಸಾರ್ವಭೌಮತ್ವವನ್ನು ರಕ್ಷಿಸುವ ಅವರ ಅಚಲ ನಿರ್ಧಾರವನ್ನು ಸಂಕೇತಿಸುತ್ತದೆ. ಅವರ ನಿರ್ಭೀತ ಪ್ರತಿರೋಧವು ಧೈರ್ಯ, ಘನತೆ ಮತ್ತು ದೇಶಭಕ್ತಿಯ ಶಾಶ್ವತ ಸಂದೇಶವಾಗಿ ಇಂದಿಗೂ ನಿಂತಿದೆ.
ಈ ಕಾರ್ಯಕ್ರಮವು ರಾಣಿ ಚೆನ್ನಮ್ಮ ಅವರ ಮಾತೃಭೂಮಿಗೆ ನೀಡಿದ ಅಚಲ ಭಕ್ತಿ ಮತ್ತು ಅವರ ಶಾಶ್ವತ ಪರಂಪರೆಯನ್ನು ನೆನಪಿಸಿತು. ಇದು ಸತ್ಯ, ನ್ಯಾಯ ಮತ್ತು ಸ್ವಾತಂತ್ರಕ್ಕಾಗಿ ದೃಢವಾಗಿ ನಿಲ್ಲಲು ಮುಂದಿನ ಪೀಳಿಗೆಗಳಿಗೆ ಪ್ರೇರಣೆಯಾಗಿ ಮುಂದುವರೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















