ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನೌಕರರು, ಪಾಲುದಾರರು ಹಾಗೂ ನಾಗರಿಕರು ದಿನನಿತ್ಯ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಅಳವಡಿಸಿಕೊಳ್ಳಿ ಎಂದು ನೈಋತ್ಯ ರೈಲ್ವೆಯ #Southwestern Railway ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರನ್ ಮಾಥುರ್ ಕರೆ ನೀಡಿದರು.
2025ರ ವಿಜಿಲೆನ್ಸ್ ಜಾಗೃತಿ ಸಪ್ತಾಹದ #Vigilance Awareness Week ಅಂಗವಾಗಿ ವಲಯದಾದ್ಯಂತ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಕುರಿತು ಸಭೆಗೆ ಮಾಹಿತಿ ನೀಡಿ, ಅವರು ಮಾತನಾಡಿದರು.
ನೈತಿಕ ಮೌಲ್ಯಗಳನ್ನು ಕಾಪಾಡುವಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವz್ದೆಂದು ಅವರು ತಿಳಿಸಿ, ಭ್ರಷ್ಟಾಚಾರದ ದುಷ್ಪರಿಣಾಮಗಳು ಆರ್ಥಿಕ ಬೆಳವಣಿಗೆ, ಸಾಮಾಜಿಕ ನ್ಯಾಯ ಮತ್ತು ಸಾರ್ವಜನಿಕ ನಂಬಿಕೆಗೆ ಹಾನಿ ಉಂಟುಮಾಡುತ್ತವೆ ಎಂದು ಒತ್ತಿಹೇಳಿದರು. ನೌಕರರು, ಪಾಲುದಾರರು ಹಾಗೂ ನಾಗರಿಕರು ದಿನನಿತ್ಯ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರನ್ ಮಾರ್ಥು ಅವರು ಪ್ರಧಾನ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಮಗ್ರತಾ ಪ್ರತಿಜ್ಞೆ ಬೋಧಿಸಿದರು.
ಹಿರಿಯ ಉಪ ಮಹಾಪ್ರಬಂಧಕ ಹಾಗೂ ಮುಖ್ಯ ಜಾಗೃತ ಅಧಿಕಾರಿ ಎ. ಅಣ್ಣಾದುರೈ ಮಾತನಾಡಿದರು.
ದೇಶದಾದ್ಯಂತ ಅಕ್ಟೋಬರ್27ರಿಂದ ನವೆಂಬರ್ 2ರವರೆಗೆ ನಡೆಯುತ್ತಿರುವ ಈ ವಾರದ ಆಚರಣೆಯ ಥೀಮ್ ವಿಜಿಲೆನ್ಸ್: ನಮ್ಮ ಹಂಚಿಕೆಯ ಜವಾಬ್ದಾರಿ ಎಂದು ನಿಗದಿಯಾಗಿದೆ.
ಇದೇ ಸಂದರ್ಭದಲ್ಲಿ ಅವರು ವಿಜಿಲೆನ್ಸ್ ಜಾಗೃತಿ ವಿಷಯಾಧಾರಿತ ಪೋಸ್ಟರ್’ಗಳನ್ನು ಅನಾವರಣಗೊಳಿಸಿದರು.
ಪ್ರಧಾನ ವ್ಯವಸ್ಥಾಪಕರು ಹಾಗೂ ಹಿರಿಯ ಅಧಿಕಾರಿಗಳು ರೈಲ್ ಸೌಧದ ಇಂಟೆಗ್ರಿಟಿ ಗಾರ್ಡರ್’ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಸಸಿಯನ್ನು ನೆಟ್ಟರು. ನೈಋತ್ಯ ರೈಲ್ವೆಯ ಎ¯್ಲÁ ವಿಭಾಗಗಳು, ಘಟಕಗಳು ಹಾಗೂ ಕಚೇರಿಗಳಲ್ಲಿಯೂ ಸಮಗ್ರತಾ ಪ್ರತಿಜ್ಞೆಯನ್ನು ಬೋಧಿಸಲಾಯಿತು.
ವಾರದ ಕಾರ್ಯಕ್ರಮಗಳ ಅಂಗವಾಗಿ, ರೈಲ್ವೆ ಕ್ರಿಕೆಟ್ ಮೈದಾನದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದವರೆಗೆ ವಿಜಿಲೆನ್ಸ್ ಜಾಗೃತಿ ವಾಕಥಾನ್ ಅನ್ನು ಆಯೋಜಿಸಲಾಯಿತು.
ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾದ ಪಿ. ಅನಂತ್, ಇಲಾಖೆಗಳ ಪ್ರಧಾನ ಮುಖ್ಯಸ್ಥರು ಹಾಗೂ ಇತರ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















