ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಯಾವ ಮನೆಯಲ್ಲಿ ಸಂಸ್ಕೃತ ಮತ್ತು ಸಂಸ್ಕೃತಿ ಇರುವುದೋ ಅಲ್ಲಿ ಬೆಳೆಯುವ ಮಕ್ಕಳು ಸಮಾಜಕ್ಕೆ ಬೆಳಕಾಗುತ್ತಾರೆ ಎಂದು ಹಿರಿಯ ಸಂಸ್ಕೃತ -ವೇದ ವಿದ್ವಾಂಸ ಮತ್ತೂರು ಚಂದ್ರಶೇಖರ ಅವಧಾನಿ ಹೇಳಿದರು.
ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಸಾಯಿ ಆಟ್ಸ್ ಇಂಟರ್ ನ್ಯಾಷನಲ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಯುವ ಕಲಾವಿದೆ ರಾಧಾ ಶ್ರೀವತ್ಸ ಅವರ ರಂಗಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಚಿತ್ರನಟಿ ಮಾಳವಿಕಾ ಅವಿನಾಶ್ ಮಾತನಾಡಿ, ಕಲಾಭಿವ್ಯಕ್ತಿಯಲ್ಲಿ ಅಚ್ಚುಕಟ್ಟುತನ, ನಾಜೂಕುತನಗಳು ಬಹಳ ಮುಖ್ಯ. ಎಲ್ಲ ಸೌಲಭ್ಯಗಳೂ ಲಭ್ಯವಿರುವ ಕಾಲದಲ್ಲಿ ಅಂತರಂಗದ ಆಸಕ್ತಿಯೇ ಬಹು ಪ್ರಧಾನ. ಈ ದಿಸೆಯಲ್ಲಿ ರಾಧಾ ತೋರಿದ ಅಭಿನಯ ಅಭ್ಯುದಯದ ಸೂಚಕವಾಗಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post