ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-33 |

ಮನವನ್ನು ಶುದ್ಧಿಗೊಳಿಸುವುದು ಎಂದರೆ ಕೇವಲ ಪುಸ್ತಕದ ಓದು ಅಥವಾ ಪಾಠ ಕಲಿಯುವುದು ಅಷ್ಟೇ ಅಲ್ಲ. ಆ ಮೂಲಕ ನಮ್ಮ ಬದಲಾಗುತ್ತಿರುವ ಭಾವನೆಗಳನ್ನು, ನಡವಳಿಕೆಯನ್ನೂ ಅರಿತುಕೊಳ್ಳುವುದು. ಸರಿ ತಪ್ಪುಗಳನ್ನು ಗುರುತಿಸಿ, ಜೀವನದಲ್ಲಿ ಸರಿಯಾದ ದಾರಿಯನ್ನು ಕಂಡುಕೊಳ್ಳುವಲ್ಲಿ ಅವಶ್ಯಕ ಜ್ಞಾನವನ್ನು ಪಡೆದುಕೊಳ್ಳುವುದಾಗಿದೆ. ಒಟ್ಟಾರೆಯಾಗಿ ನಮ್ಮ ಆತ್ಮಾವಲೋಕನ ಮಾಡಿಕೊಂಡು ವ್ಯಷ್ಟಿ, ಸಮಷ್ಟಿಗಳಿಗೆ ಅಹಿತವಾದುದನ್ನು ತ್ಯಜಿಸಿ, ಹಿತವಾದುದನ್ನು ಪ್ರಯತ್ನಪೂರ್ವಕವಾಗಿ ರೂಢಿಸಿಕೊಂಡು, ವೃದ್ಧಿಯಾಗುವತ್ತ ಗಮನಹರಿಸುವುದೇ ಮನಸಿನ ಶುದ್ಧಿಯ ಮುಖ್ಯ ತಾತ್ಪರ್ಯವಾಗಿದೆ.
ಮನಃಶುದ್ಧಿಯಿಂದ ಸಮಾಜವೂ ಶುದ್ಧವಾಗಿ ಮುನ್ನಡೆಗೆ ಕಾರಣವಾಗುತ್ತದೆ. ಲೋಕಾ ಸಮಸ್ತಾ ಸುಖಿನೋ ಭವಂತು ಎಂಬ ಮಾತಿಗೆ ಪುಷ್ಠಿ ದೊರೆಯಬೇಕಾದರೆ, ಆ ಮಾತು ಸತ್ಯವಾಗಬೇಕಾದರೆ ಪ್ಋಇಯೊಬ್ಬರ ಆತ್ಮಾವಲೋಕನ, ತನ್ಮೂಲಕ ಮನಸಿನ ಶುದ್ಧಿ ಬಹು ಅವಶ್ಯಕವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post