ಕಲ್ಪ ಮೀಡಿಯಾ ಹೌಸ್ | ಸಾಗರ |
ಸಾಗರ ತಾಲೂಕಿನ ಹಿರೇಬೆಲಗುಂಜಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ #Keladi Shivappanayaka VV ಶಿವಮೊಗ್ಗ, ಇರುವಕ್ಕಿಯ ಅಂತಿಮ ವರ್ಷದ ಬಿಎಸ್ಸಿ (ಆನರ್ಸ್)ಅರಣ್ಯ ವಿದ್ಯಾರ್ಥಿಗಳು ಅಡಿಕೆ ತಿಪ್ಪೆ ಗೊಬ್ಬರ #Areca nut shell fertilizer ತಯಾರಿಸುವ ಪದ್ಧತಿಯ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಆವರಣ, ಹಿರೇಬೆಲಗುಂಜಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ರೈತ ಗೀತೆ ಹಾಡುವ ಮೂಲಕ ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಮಾರುತಿ ಎಸ್ ಎನ್, ಅಂಕಿತದೇವರಾಯ , ಶರತ್ ಕುಮಾರ್ ಟಿ, ರಾಕೇಶ್ ಸಂಕ್ಷಿಪ್ತವಾಗಿ ವಿವರಿಸಿದ್ದರು. ಕಾರ್ಯಕ್ರಮದಲ್ಲಿ ಅಡಿಕೆ ಸಿಪ್ಪೆ ಗೊಬ್ಬರದ ಉದ್ದೇಶ ಮತ್ತು ಅದರ ಮಹತ್ವ , ಅದರ ತಯಾರಿಕೆ ವಿಧಾನವನ್ನು , ಅದರಲ್ಲಿರುವ ಪೋಷಕಾಂಶದ ಗುಣಮಟ್ಟವನ್ನು ಮತ್ತು ಅಡಿಕೆ ಸಿಪ್ಪೆ ಗೊಬ್ಬರ ಹಾಗೂ ಇತರೆ ಗೊಬ್ಬರಕ್ಕಿರುವ ವ್ಯತ್ಯಾಸವನ್ನು ತಿಳಿಸಿಕೊಟ್ಟರು.
ಅಡಿಕೆ ಸಿಪ್ಪೆ ಗೊಬ್ಬರದಿಂದ ರೈತರಿಗಾಗುವ ಉಪಯೋಗಗಳು ಮತ್ತು ಸುಮಾರು ಒಂದು ಎಕರೆ ಅಡಿಕೆ ತೋಟದಿಂದ ಸರಾಸರಿ 350 ಕೆಜಿಯಸ್ಟು ಗೊಬ್ಬರ ತಯಾರಿಸಬಹುದು ಮತ್ತು ಅದರ ಖರ್ಚು ವೆಚ್ಚವನ್ನು , ಲಾಭ ಮತ್ತು ಅದರಿಂದ ನಿವಾರಿಸಬಹುದಾದ ತೊಂದರೆಗಳನ್ನು ವಿವರಿಸಿದರು.
ಈ ಕಾರ್ಯಕ್ರಮಕ್ಕೆ ಸುಮಾರು 80ಕ್ಕೂ ಹೆಚ್ಚಿನ ಗ್ರಾಮಸ್ಥರು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಅಡಿಕೆ ಸಿಪ್ಪೆ ಗೊಬ್ಬರ ತಯಾರಿಕೆಯಲ್ಲಿ ಬೇಕಾಗಿರುವ ಮುಖ್ಯ ಕಚ್ಚಾ ವಸ್ತುವಾದ ಅರ್ಕ ಮೈಕ್ರೋಬಿಯಲ್ ಎಕ್ಟೋಫೈಟೋಕೇರ್ ಇಂಡಿಯಾ ಪಿವಿಟಿ . ಲೇಟ್ ( ಫೋನ್ ನಂಬರ್: 9686588750).
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















