ಕಲ್ಪ ಮೀಡಿಯಾ ಹೌಸ್ | ಸೊರಬ |
ಅಕ್ರಮ ಸಂಬಂಧದ ಅನುಮಾನದ ಹಿನ್ನೆಲೆಯಲ್ಲಿ ಸ್ವಂತ ತಮ್ಮನನ್ನೇ ಅಣ್ಣನೊಬ್ಬ ಕೊಂದು, ಗುಂಡಿ ತೆಗೆದು ಹೂತು ಹಾಕಿರುವ ದಾರುಣ ಘಟನೆ ಸೊರಬ ತಾಲೂಕಿನ ಜೇಡಗೆರೆ ಬಳಿಯ ತೋಟದ ಮನೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ರಾಮಚಂದ್ರ(28) ಹಾಗೂ ಹತ್ಯೆ ಮಾಡಿದ ವ್ಯಕ್ತಿಯನ್ನು ಮಾಲತೇಶ್(35) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆಯೇನು?
ಮಾಲತೇಶ್ ಹಾಗೂ ರಾಮಚಂದ್ರ ಇಬ್ಬರೂ ಅಣ್ಣ ತಮ್ಮಂದಿರಾಗಿದ್ದಾರೆ. ಮಾಲತೇಶನಿಗೆ 8 ವರ್ಷದ ಹಿಂದೆ ಭಾಗ್ಯ ಎನ್ನುವವರೊಂದಿಗೆ ವಿವಾಹವಾಗಿದ್ದು, ಹಿರೇಕೆರೂರು ತಾಲೂಕಿನ ಚಟಕೆರೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ರಾಮಚಂದ್ರನೂ ಸಹ ಇವರೊಟ್ಟಿಗೇ ನೆಲೆಸಿದದರು.
ನಂತರ ನಾಲ್ಕು ವರ್ಷದಿಂದ ಸೊರಬ ತಾಲೂಕಿನ ಜೇಡಿಕೆರೆ ಬಳಿಯ ತೋಟದ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ರಾಮಚಂದ್ರ ಕೂಲಿ ಕೆಲಸಕ್ಕೆಂದು ತೆರಳಿದರೆ ಸುಮಾರು 15 ದಿನ, ತಿಂಗಳಾದರೂ ಮನೆಗೆ ಬರುತ್ತಿರಲಿಲ್ಲ.
ಸೆ.8ರಂದು ಬೆಳಗ್ಗೆ ರಾಮಚಂದ್ರ ಮನೆಯಿಂದ ಹೋದವನು ಸುಮಾರು ಒಂದೂವರೆ ತಿಂಗಳಾದರೂ ಹಿಂತಿರುಗಿ ಬರಲಿಲ್ಲ. ಮಗ ಹಿಂತಿರುಗಿ ಬಾರದ ಹಿನ್ನೆಲೆಯಲ್ಲಿ ಆತನ ತಾಯಿ ಅದೇ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈಗ ಮಾಲತೇಶ ಹಾಗೂ ಆತನ ಪತ್ನಿ ಭಾಗ್ಯ ಮನೆಗೆ ಬಂದ ವೇಳೆ ತಾಯಿ ರಾಮಚಂದ್ರನ ಬಗ್ಗೆ ವಿಚಾರಿಸಿದ್ದಾರೆ. ಆಗ ಗಾಬರಿಗೊಂಡ ಭಾಗ್ಯ ಅತ್ತೆ ನಿಮ್ಮ ಬಳಿ ಏನೋ ಹೇಳಬೇಕು. ನಮ್ಮ ಹಾಗೂ ರಾಮಚಂದ್ರನ ಸಂಬಂಧದ ವಿಚಾರದಲ್ಲಿ ಮಾಲತೇಶ ದ್ವೇಷ ಹೊಂದಿದ್ದನು.
ಮಾಲತೇಶನು ರಾಮಚಂದ್ರನನ್ನು ಸೊರಬ ತಾಲೂಕಿನ ಜೇಡಿಗೆರೆ ತೋಟದ ಮನೆ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ಅವನಿಗೆ ಸಾರಾಯಿ ಕುಡಿಸಿ, ಕುತ್ತಿಗೆಗೆ ಹಗ್ಗದಿಂದ ಬಿಗಿದು ಸಾಯಿಸಿದ್ದಾನೆ. ನಂತರ ಅಲ್ಲಿಯೇ ಗುಂಡಿ ತೆಗೆದು ಹೂತು ಹಾಕಿದ್ದಾನೆ ಎಂದು ಬಾಯಿ ಬಿಟ್ಟಿದ್ದಾಳೆ.
ಇದರಿಂದಾಗಿ ತಾಯಿಯು ಮಾಲತೇಶನನ್ನು ಕೇಳಿದಾಗ ಏನೂ ಹೇಳದೇ ಕತೆ ಮುಗಿದಿದೆ. ಅದರ ಬಗ್ಗೆ ಏನೂ ಕೇಳಬೇಡ ಎಂದಷ್ಟೇ ಹೇಳಿದ್ದಾನೆ.
ರಾಮಚಂದ್ರ ಹಾಗೂ ಭಾಗ್ಯಳ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು ಎಂದು ಹೇಳಲಾಗಿದ್ದು, ಇಂತಹ ತಪ್ಪು ಮಾಡದಂತೆ ಹಲವು ಬಾರಿ ಬುದ್ದಿ ಹೇಳಲಾಗಿತ್ತು ಎನ್ನಲಾಗಿದೆ. ಆದರೆ, ಇಬ್ಬರ ಸಂಬಂಧ ಮುಂದುವರೆದಿತ್ತು ಎನ್ನಲಾಗಿದ್ದು, ಮಾಲತೇಶನು ತನ್ನ ಸ್ವಂತ ತಮ್ಮ ರಾಮಚಂದ್ರನನ್ನು ಹತ್ಯೆ ಮಾಡಲು ಇದೇ ಕಾರಣವಾಗಿದೆ ಎನ್ನಲಾಗಿದೆ.
ರಾಮಚಂದ್ರನ ತಾಯಿ ಸೊರಬ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ಮಗನ ಸಾವಿಗೆ ನ್ಯಾಯ ಒದಗಿಸುವಂತೆ ಕೋರಿದ್ದಾರೆ.
ಸೆ.8ರಂದು ತೊಗರ್ಸಿಯಲ್ಲಿದ್ದ ರಾಮಚಂದ್ರನಿಗೆ ಏಕೆ ಮದುವೆಯಾಗುತ್ತಿಲ್ಲ? ಅದಕ್ಕೆ ದೋಷ ಪರಿಹಾರ ಮಾಡುತ್ತೇನೆ ಎಂದು ತೋಟಕ್ಕೆ ಕರೆಸಿಕೊಂಡಿದ್ದಾನೆ. ಅದೇ ದಿನ ರಾತಿ ಮಾಟ ಮಂತ್ರ ಮಾಡುವ ನೆಪದಲ್ಲಿ ಅವನನ್ನು ಕೊಲೆ ಮಾಡಿ ತೋಟದ ಪಕ್ಕದಲ್ಲೇ ಗುಂಡಿ ತೆಗೆದು ಶವ ಹೂತು ಹಾಕಿದ್ದಾನೆ. ನಂತರ ತೋಟ ಬಿಟ್ಟು ಹೋಗಿ, ಅ.29ರಂದು ರಾಮಚಂದ್ರ ಕಾಣೆಯಾಗಿದ್ದಾನೆ ಎಂದು ಆನವಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಆನವಟ್ಟಿ ಪೊಲೀಸರು ನಾಪತ್ತೆಯಾದ ರಾಮಚಂದ್ರನ ಬಗ್ಗೆ ಮಾಹಿತಿ ಕಲೆ ಹಾಕಿ ಕೊಲೆ ಎಂದು ಖಚಿತಪಡಿಸಿಕೊಂಡಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಾಲತೇಶನನ್ನು ಬಂಧಿಸಿ, ವಿಚಾರಣೆ ಒಳಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸಿಪಿಐ ಮಹಾಂತೇಶ್ ನೇತೃತ್ವದಲ್ಲಿ ತನಿಖೆ ನಡೆಸಿದಾಗ ತಮ್ಮನನ್ನು ಕೊಲೆ ಮಾಡಿರುವುದಾಗಿ ಮಾಲತೇಶ್ ಒಪ್ಪಿಕೊಂಡಿದ್ದಾನೆ.
ಸಾಗರ ಉಪವಿಭಾಗಾಧಿಕಾರಿ ವೀರೇಶಕುಮಾರ್ ಸಮ್ಮುಖದಲ್ಲಿ ಹತ್ಯೆ ನಡೆದ ಸ್ಥಳ ಮಹಜರು ನಡೆಸಿ, ಹೆಣ ಹೂತು ಹಾಕಿದ್ದ ಸ್ಥಳವನ್ನು ಅಗೆಸಿ ಕಳೆಬರವನ್ನು ಹೊರತೆಗೆದು ಪಾಲಕರಿಗೆ ನೀಡಲಾಯಿತು.
ದೂರು ದಾಖಲಿಸಿಕೊಂಡು ಕೊಂಚವೂ ಸಹ ತಡ ಮಾಡದೇ ಕಾರ್ಯಾಚರಣೆ ಆರಂಭಿಸಿದ ಸೊರಬ ಪೊಲೀಸರು ಕ್ಷಿಪ್ರಗತಿಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಡಿವೈಎಸ್ಪಿ ಕೇಶವ್, ಸಿಪಿಐ ಮಹಾಂತೇಶ್ ಲಂಬಿ, ಸೊರಬ ಪಿಎಸ್ಐ ನವೀನ್ ಕುಮಾರ್, ಆನವಟ್ಟಿ ಪಿಎಸ್ಐ ಚಂದನ್ ಕುಮಾರ್, ಎ ಎಸ್ ಐ ತೋಟಪ್ಪ, ಪೇದೆಗಳಾದ ಉಷಾ, ರಾಘವೇಂದ್ರ, ವಿನಯ್ ಕುಮಾರ್, ಸಂದೀಪ್, ಜಗದೀಶ್, ಹರಿಪ್ರಸಾದ್, ಮಧು ಕುಮಾರ್, ವೈದ್ಯಾಧಿಕಾರಿಗಳು, ಇತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















