ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪತ್ರಕರ್ತರು #Journalist ಆರೋಗ್ಯ ಕಾಪಾಡಿಕೊಳ್ಳಬೇಕು. ಪತ್ರಕರ್ತರ ಪಿಂಚಣಿ ವ್ಯವಸ್ಥೆ ಬದಲಾಗಬೇಕಿದೆ ಎಂದು ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟಿ ಹೇಳಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಪತ್ರಕರ್ತರು ಆರೋಗ್ಯ ಕಾಪಾಡಿಕೊಳ್ಳಬೇಕು. ಪತ್ರಕರ್ತರೆಂಬ ಕಲ್ಪನೆಯೇ ಬದಲಾಗಿದೆ. ಹಿಂದೆ ಕಾರ್ಯ ಮರೆತ ಪತ್ರಕರ್ತರೆಂದು ಕಾರ್ಯನಿರತ ಪತ್ರಕರ್ತರ ಸಂಘವನ್ನ ಲೇವಡಿ ಮಾಡಲಾಗುತ್ತಿತ್ತು. ಈಗ ಶಿವಾನಂದ ತಗಡೂರು ಅವರು ರಾಜ್ಯಾಧ್ಯಕ್ಷರಾದ ನಂತರ ಈ ಲೇವಡಿಯನ್ನ ಬದಲಾಯಿಸಿದ್ದಾರೆ ಎಂದರು.
ಪತ್ರಕರ್ತರ ಪಿಂಚಣಿ ವ್ಯವಸ್ಥೆ ಬದಲಾಗಬೇಕಿದೆ. ಸಾಕಷ್ಟು ನಿವೃತ್ತ ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ. ನಿಯಮಾವಳಿಗಳು ಬದಲಾಗಬೇಕು. ಮುಂದಿನ ಪತ್ರಕರ್ತರು ಸೌಲಭ್ಯ ಪಡೆಯುವಂತಾಗಬೇಕು. ವಾರ್ತಾ ಇಲಾಖೆ ಅಧಿಕಾರಿಗಳು ಪಿಂಚಣಿ ನೀಡಲು ಬದಲಾಗಬೇಕಿದೆ ಎಂದರು.
ಕಾರ್ಯ ನಿರತ ಪತ್ರಕರ್ತರು ಮೇಲ್ಮನವಿ ಸಲ್ಲಿಸಿ. ರಿಯಾಕ್ಷನ್ ಮತ್ತು ಊಹಾ ಪತ್ರಿಕೋದ್ಯಮದಿಂದ ದೂರವಿರಬೇಕು. ಪತ್ರಕರ್ತರು ಅಭಿವೃದ್ಧಿ ಮತ್ತು ತನಿಖಾ ಪತ್ರಿಕೋದ್ಯಮದ ಬಗ್ಗೆ ಗಮನ ಹರಿಸಿ ಎಂದು ಕರೆ ನೀಡಿದರು.
ಮತ್ತೋರ್ವ ಆಯುಕ್ತ ರಾಜಶೇಖರ್ ಮಾತನಾಡಿ, ವೃತ್ತಿ ಧರ್ಮದ ಜೊತೆಗೆ ಆರೋಗ್ಯವನ್ನ ಕಾಪಾಡಿಕೊಳ್ಳಿ ಎಂದರು. ಸಂಘದ ರಾಜ್ಯ ಉಪಾಧ್ಯಕ್ಷ ಮದನಗೌಡರು ಮಾತನಾಡಿ, 94 ವರ್ಷಕಳೆದಿದೆ. 100 ವರ್ಷ ಕಳೆಯುವ ಹಂತಕ್ಕೆ ಬಂದು ನಿಂತಿದೆ. ರಾಜ್ಯದ ಪತ್ರಕರ್ತರಿಗೆ ಆರೋಗ್ಯ ವಿಮೆ ಮಾಡಿಸಿದ್ದಾರೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಬೈಲಾದಂತೆ ಪತ್ರಕರ್ತರಿಗೆ ಪ್ರಮಾಣವಚನ ಓದಿಸಿದ್ದಾರೆ. ಎಲ್ಲರೂ ಅವರ ಜವಾಬ್ದಾರಿ ನಿಭಾಯಿಸಬೇಕು. ಅಧಿಕಾರದಿಂದ ನಿರ್ಗಮಿಸುವವರು ಸಂಘದ ಮನ್ನಡೆಗೆ ಸಹಕರಿಸಬೇಕು. ಸಂಘದಲ್ಲಿ ಹಣವಿಲ್ಲ. ಆದರೆ ಸಂಘ ಗಟ್ಟಿಯಿದೆ. ಇರುವ ವ್ಯವಸ್ಥೆಯ ಒಳಗೆ ಸಕ್ರಿಯವಾಗಿ ಇಬ್ವರು ನಡೆಸುಕೊಂಡು ಬಂದಿದೆ. ಅಶಕ್ತರಿಗೆ ಸಂಘ ಸಹಾಯವಾಗಲಿ ಎಂದರು.
ಕಾರ್ಯನಿರತವರಿಗೆ ಇದು ಸಂಘ ವಿನಃ ಕಾರ್ಯಮರೆತವರಿಗೆ ಅಲ್ಲ. ಪತ್ರಕರ್ತರು ಎಂದರೆ ಸಾಲದು, ವೃತ್ತಿ ಗೌರವವನ್ನ ಕಾಪಾಡಿಕೊಳ್ಳಬೇಕು. ಸಾರ್ವಜನಿಕರ ಪ್ರೀತಿಗಳಿಸಿ ವೃತ್ತಿ ಘನತೆ ಹೆಚ್ಚಿಸಿಕೊಳ್ಳಬೇಕು. ಪತ್ರಕರ್ತರಿಗೆ ಕೊಟ್ಟ ಘನತೆ ಕಾಪಾಡಿಕೊಳ್ಳಬೇಕು. ಪದಗಳನ್ನ ನಾಜೂಕಾಗಿ ಬಳಸುತ್ತಾರೆ. ಆದರೆ ಸಮೂಹ ಪತ್ರಿಕೋದ್ಯಮದಿಂದ ಹಾಳಾಗಿದೆ. ಯಾರು ಪತ್ರಕರ್ತರಲ್ಲವೋ ಅವರನ್ನ ಸುದ್ದಿಮನೆಯಿಂದ ದೂರಯಿಡಬೇಕಿದೆ ಎಂದರು.
ದೇವರು ಕೊಟ್ಟರು ಪೂಜಾರಿಕೊಡಲ್ಲ ಎಂಬ ನೀತಿಯನ್ನ ವಾರ್ತಾ ಇಲಾಖೆ ಅನಿಸರಿಸುತ್ತಿದೆ. ಕೊಂಡಿಯಾಗಿ ಕೆಲಸ ಮಾಡಬೇಕಿದ್ದ ಇಲಾಖೆ ಬದಲಿಗೆ ಕೊಕ್ಕೆಯಾಗಿ ಕೆಲಸ ಮಾಡುತ್ತಿದೆ. ಪತರ್ಕರ್ತರಿಗೆ ಉಚಿತ ಆರೋಗ್ಯ ವಿಮೆ ಸಿಗಬೇಕಿದೆ. ಇದು ಮಾನ್ಯತೆ ಪಡೆದವರಿಗೆ ಮತ್ರವಲ್ಲ ಎಲ್ಲಾ ಪತ್ರಕರ್ತರಿಗೆ ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಕೆಲಸ ಆಗಬೇಕಿದೆ ಎಂದರು.
ಜಿಲ್ಲಾ ಶಾಖೆಯ ನಿರ್ಗಮಿತ ಅಧ್ಯಕ್ಷ ಕೆ.ವಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. 2025-28ರ ಸಾಲಿನ ನಿಯೋಜಿತ ಅಧ್ಯಕ್ಷ ಹೆಚ್.ಯು. ವೈದ್ಯನಾಥ್(ವೈದ್ಯ), ಪ್ರಧಾನ ಕಾರ್ಯದರ್ಶಿ ಆರ್.ಎಸ್. ಹಾಲಸ್ವಾಮಿ, ರಾಷ್ಟ್ರೀಯ ಮಂಡಳಿ ಸದಸ್ಯ ಭಂಡಿಗಡಿ ಆರ್. ನಂಜುಂಡಪ್ಪ, ಉಪಾಧ್ಯಕ್ಷರಾದ ಕೆಎಸ್ ಹುಚ್ರಾಯಪ್ಪ,ಕೆ ಸತ್ಯನಾರಾಯಣ್, ದೇಶಾದ್ರಿ ಹೊಸ್ಮನಿ, ಕಾರ್ಯದರ್ಶಿ ದೀಪಕ್ ಸಾಗರ್, ಕೆ.ಆರ್, ಸೋಮನಾಥ್, ಖಜಾಂಚಿ ರೋಹಿತ್, ಸಂಘಟನಾ ಕಾರ್ಯದರ್ಶಿಗಳಾದ ಗಾರಾ ಶ್ರೀನಿವಾಸ್, ರಾಘವೇಂದ್ರ ಶೆಟ್ಟಿ ಇತರರು ಇದ್ದರು,
ಶಿವಮೂರ್ತಿ ವೃತ್ತದಿಂದ ಆರ್ ಟಿ ಒ ಕಚೇರಿ ರಸ್ತೆಯಲ್ಲಿರುವ ಪತ್ರಿಕಾ ಭವನದ ವರೆಗೂ ಡೊಳ್ಳು ಮತ್ತು ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















