No Result
View All Result
Malnad is a Cultural ‘Gharana’ of Great Minds: Dr. Jayamala at Sahyadri Utsava
English Articles

Malnad is a Cultural ‘Gharana’ of Great Minds: Dr. Jayamala at Sahyadri Utsava

by ಕಲ್ಪ ನ್ಯೂಸ್
March 13, 2026
0

Kalpa Media House  |  Shimoga | Invoking the poetic essence of the Malnad landscape, veteran actor, former minister, and Chairperson...

Read moreDetails
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಎಚ್ಚರ ಅವಶ್ಯ : ಡಾ. ಸುಶ್ರುತ ಗೌಡ

Post-COVID Surge: Lifestyle Diseases Now Striking People in Their 40s, Warns Neurologist  Dr. Sushrutha Gowda

March 9, 2026
  • Advertise With Us
  • Grievances
  • About Us
  • Contact Us
Friday, March 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಪುನೀತ್ ಜಿ. ಕೂಡ್ಲೂರು

ನಮ್ಮೊಳಗಿರಲಿ ವಿವೇಕ + ಆನಂದ – ನಮ್ಮೊಳಗಿನ ವಿವೇಕನಾಂದ ಜಾಗೃತಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 13, 2026
in ಪುನೀತ್ ಜಿ. ಕೂಡ್ಲೂರು
0
ನಮ್ಮೊಳಗಿರಲಿ ವಿವೇಕ + ಆನಂದ – ನಮ್ಮೊಳಗಿನ ವಿವೇಕನಾಂದ ಜಾಗೃತಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ವಿಶ್ವ ಸಂತ ಭರತ ಪುತ್ರ ಆಧ್ಯಾತ್ಮ ಚೇತನ ಸ್ವಾಮಿ ವಿವೇಕಾನಂದರ ಬಗ್ಗೆ ಈ ಭೂಮಿಯಲ್ಲಿ ಯಾರಿಗೆ ತಾನೆ ತಿಳಿದಿಲ್ಲ. ಇಂದು ಅವರ ಜನ್ಮ ದಿನ. ಅವರ ಜೀವನದ ಕೆಲ ಘಟನೆಗಳನ್ನು ಮೆಲಕು ಹಾಕಿ ನಮ್ಮಲ್ಲಿ ಅವರ ಆದರ್ಶ ಮತ್ತು ವ್ಯಕ್ತಿತ್ವ ಬೆಳೆಸಿಕೊಂಡರೆ ಸಾಕು ಎಂಬುದಷ್ಟೆ ಈ ಕಿರು ಲೇಖನ. ಅಂತಹ ತೇಜಃಪುಂಜಕ್ಕೆ ಪುಣ್ಯ ಪುರುಷನಿಗೆ ಈ ಅಂಕಣ ಸಮರ್ಪಣೆ.

ಭುವನೇಶ್ವರಿದೇವಿಗೆ ಎರಡು ಹೆಣ್ಣು ಮಕ್ಕಳ್ಳಿದ್ದರೂ ಅಂದಿನ ಕಾಲದಲ್ಲಿ ಹಾಗೂ ಈಗಲೂ ಹಲವು ಪೋಷಕರಿಗೆ ಇರುವ ಆಸೆಯಂತೆ ತಮಗೂ ಒಂದು ಗಂಡು ಮಗುವಾಗಲಿ ಎಂದು ಕಾಶಿ ವಿಶ್ವೇಶ್ವರನಿಗೆ ಹರಕೆ ಹೊತ್ತು ಒಂದು ಗಂಡು ಮಗುವನ್ನು ಪಡೆದರು. ಭುವನೇಶ್ವರಿ ದೇವಿಯವರು ಗರ್ಭವತಿಯಾಗಿದ್ದಾಗ ಅವರ ಕನಸಲ್ಲಿ ತೇಜಃಪುಂಜವಾದ ಶಿವಮೂರ್ತಿಯು ಧ್ಯಾನಮಗ್ನನಾಗಿರುವುದನ್ನು ಕಂಡು ಅವರಿಗೆ ಹುಟ್ಟುವ ಮಗನು ಶಿವನ ಆಶಿರ್ವಾದ ಹಾಗೂ ಆತ ಆಧ್ಯಾತ್ಮ ಸಾಧನೆಗಯ್ಯುವವನೆ ಎಂದು ತಿಳಿದು ಅಂತಹ ಅದ್ಭುತ ವ್ಯಕ್ತಿಯನ್ನು ಜಗತ್ತಿಗೆ ದಾರೆಯರಿಯ ಬೇಕಾದರೆ ತಪ್ಪಸ್ಸಿನಿಂದ ಪೂತವಾಗಬೇಕು ಮನಸ್ಸು ಎಂದು ಅವರು ಆಧ್ಯಾತ್ಮದ ಅಧ್ಯಯನ ಮತ್ತು ಅನುಕರಣೆಯಲ್ಲಿ ತೊಡಗಿಸಿಕೊಂಡರಂತೆ. ಅಂತಹ ತಪಸ್ ಶಕ್ತಿಯನ್ನು ಪೌಷ್ಯಮಾಸದ ಸಪ್ತಮಿ ದಿನ ಅಂದರೆ 1863ನೇ ಇಸವಿ ಜನವರಿ 12ನೇ ತಾರೀಖು ಭಾರತ ಮಾತೆಯ ಮಡಿಲಿಗೆ ಹಾಕಿದರು. ಇಂದು ಆ ಮಹಾಪುರುಷನ ಜನ್ಮದಿನ.
ನರೇಂದ್ರ ಅಂದರೆ ವಿವೇಕಾನಂದರ ಬಾಲ್ಯದಲ್ಲಿದ್ದ ಧೈರ್ಯ ಮತ್ತು ಏಕಾಗ್ರತೆಯನ್ನು ನಾವು ರೂಢಿಸಿಕೊಳ್ಳಲೇ ಬೇಕು ಆ ಧೈರ್ಯ ಮತ್ತು ಏಕಾಗ್ರತೆಗೆ ಒಂದು ಉದಾಹರಣೆ ಒಮ್ಮೆ ನರೇಂದ್ರರು ತಮ್ಮ ಬಾಲ್ಯದ ಸ್ನೇಹಿತರ ಜೊತೆ ಧ್ಯಾನ ಮಾಡುತ್ತಿರಬೇಕಾದರೆ ಅವರಿದ್ದ ಕೊಠಡಿಯ ಒಳಗೆ ಹಾವೊಂದು ಬಂತಂದ್ದು ಅವರ ಸ್ನೇಹಿತರೆಲ್ಲ ಓಡಿ ಹೋದರು ಅದರಲ್ಲಿ ಒಬ್ಬ ಸ್ನೇಹಿತ ನರೇಂದ್ರರನ್ನು ಎಚ್ಚರಿಸುವ ಪ್ರಯತ್ನ ಮಾಡಿದ ಧ್ಯಾನದಲ್ಲಿ ಕುಳಿತಿದ್ದ ನರೇಂದ್ರನಿಗೆ ಬಾಹ್ಯ ಜಗತ್ತಿನ ಅರಿವೇ ಇಲ್ಲ ಅವನ ಸುತ್ತ ಏನು ನೆಡೆಯುತ್ತಿದೆ ಅನ್ನುವ ಪರಿಜ್ಞಾನವೂ ಇಲ್ಲ ತನ್ನ ಸುತ್ತ ಹಾವೊಂದು ಸುತ್ತಿ ಕೆಲ ಹೊತ್ತಿದ್ದು ಹೋಗಿದ್ದು ಅವನಿಗೆ ತಿಳಿಯಲೇ ಇಲ್ಲ. ಅಷ್ಟು ತನ್ನ ಕೆಲಸದಲ್ಲಿ ಏಕಾಗ್ರತೆ ಮತ್ತು ಶ್ರದ್ಧೆ. ಅನಂತರ ಸ್ನೇಹಿತನು ನೀನೇಕೆ ಓಡಲಿಲ್ಲ ಎಂದು ಕೇಳಿದಾಗ ನರೇಂದ್ರರು ಕೊಟ್ಟ ಉತ್ತರ “ ಆ ಸಮಯದಲ್ಲಿ ಮನಸ್ಸು ಒಂದು ಅವರ್ಣನೀಯ ಆನಂದದಲ್ಲಿತ್ತು ” ಎಂದರು. ಒಮ್ಮೆ ಆಲೋಚಿಸಿ ನಾವು ಮಾಡುವ ಕೆಲಸದಲ್ಲಿ, ಓದಿನಲ್ಲಿ ನಮಗೆ ನರೇಂದ್ರರ ಒಂದು ಪಾಲು ಶ್ರಧ್ಧೆ ಏಕಾಗ್ರತೆ ಇದ್ದರೆ ನಮ್ಮ ಕೆಲಸದಲ್ಲಿ ಸಾಧಿಸುವುದು ಕಷ್ಟವೇ ಅಲ್ಲ.

ಮತ್ತೊಮ್ಮೆ ಅವರ ಸ್ನೇಹಿತರು ಪಕ್ಕದ ಮನೆಯಲ್ಲಿನ ಮರದಲ್ಲಿ ಮರಕೋತಿ ಆಡುತ್ತಿದ್ದರು ಹುಡುಗರ ಆಟದಿಂದ ಅವರ ಮಧ್ಯಾಹ್ನದ ನಿದ್ದೆಗೆ ತೊಂದರೆಯಾಗುತ್ತದೆ ಎಂದು ಮರದಲ್ಲಿ ಬ್ರಹ್ಮರಾಕ್ಷಸ ಇದೆ ಅದು ನಿಮ್ಮ ಕತ್ತನ್ನು ಹಿಸುಕುತ್ತದೆ ಎಂದು ಹೇಳಿದ ಹುಡುಗರೆಲ್ಲ ಓಡಿಹೋದರು ಆದರೆ ನರೇಂದ್ರರು ಮಾತ್ರ ಮರದಲ್ಲಿ ನೇತಾಡುತ್ತಿದ್ದರು. ಮನೆಯ ಮಾಲಿಕ ಹೊರಬಂದು ನಾನು ಹೇಳಿದನಲ್ಲ ಆ ಮರದಲ್ಲಿ ಬ್ರಹ್ಮರಾಕ್ಷಸ ನಿದ್ದಾನೆಯೆಂದು ನೀನು ಹೋಗು ಎಂದು ಹೇಳಿದಾಗ ನರೇಂದ್ರರು ಹೇಳಿದರು “ಬ್ರಹ್ಮರಾಕ್ಷಸನು ಇಲ್ಲ ಯಾರೂ ಇಲ್ಲ, ನೋಡೋಣ, ಇದ್ದರೆ ಬಂದು ಕತ್ತನ್ನು ಹಿಸುಕಲಿ!” ಎಂದರು. ಅವರ ಆ ವಯಸ್ಸಿನಲ್ಲಿ ಆ ಧೈರ್ಯವನ್ನು ಮೆಚ್ಚಲೇ ಬೇಕು. ನಾವು ನಮ್ಮ ಮಕ್ಕಳಿಗೆ ಕತ್ತಲು, ಭೂತ, ಪ್ರೇತ, ಸಮಾಜದ ಕೆಟ್ಟ ಉದಾಹರಣೆಗಳನ್ನು ಕೊಟ್ಟು ಹೆದರಿಸಿ ಇಟ್ಟು ಕೊಳ್ಳುತೇವೆ ಬಾಲ್ಯದಲ್ಲಿ ನಮ್ಮ ಮಾತು ಕೇಳಲಿ ಎಂದು ಆದರೆ ಆ ಹೆದರಿಕೆಗಳೇ ಅವರ ಜೀವನದ ಭಾಗವಾಗಿರುತ್ತದೆ. ನಮ್ಮ ಮಕ್ಕಳಿಗೆ ನಾವು ತುಂಬ ಬೇಕಾದುದು ಧೈರ್ಯ ಮಕ್ಕಳಿಗೆ ಮಾತ್ರವಲ್ಲ ಎಲ್ಲರಿಗೂ ಇರಬೇಕಾದುದು ಅದೇ ಧೈರ್ಯ. ಅದು ನಮ್ಮೊಳಗಿದ್ದರೆ ಮಾತ್ರ ನಾವು ವಿವೇಕಾನಂದರು ಹೇಳಿದಹಾಗೆ ನಮ್ಮನ್ನು ನಾವು ಗೆಲ್ಲಲು ಸಾಧ್ಯ. ನಮ್ಮನ್ನು ನಾವು ಗೆಲ್ಲದಿದ್ದರೆ ಮತ್ತೇನನ್ನು ಗೆಲ್ಲಲಾದೀತು!?

ತದನಂತರ ಅವರು ರಾಮಕೃಷ್ಣಪರಮಹಂಸರ ಜೊತೆ ಗೂಡಿದ್ದು ಅವರ ಶಿಷ್ಯರಾಗಿದ್ದು ಎಲ್ಲರಿಗೂ ತಿಳಿದಿದೆ. ರಾಮಕೃಷ್ಣರ ಸಂಬಂಧ ಅವರ ಆಧ್ಯಾತ್ಮಿಕ ಸ್ವಭಾವದ ಬೀಜಗಳಿಗೆ ನೀರೆರದಂತೆ ಆಯಿತು. ನರೇಂದ್ರರ ತಂದೆ ವಿಶ್ವನಾಥದತ್ತರಿಗೆ ನರೇಂದ್ರ ತನ್ನಂತೆ ವಕೀಲನಾಗಬೇಕೆಂಬ ಆಸೆ ಅದಕ್ಕಾಗಿ ಕಲ್ಕತ್ತಾದ ನಿಮಯಚರಣ ಬೋಸ್ ಎಂಬ ಪ್ರಖ್ಯಾತವಕೀಲನ ಹತ್ತಿರ ಸೇರಿಸಿದರು. ಇತ್ತ ಮಗನ ಮದುವೆಗೆ ವಧುವನ್ನು ನೋಡಲು ಆರಂಬಿಸಿದರು. ನರೇಂದ್ರರಿಗೆ ಮದುವೆಯಲ್ಲಿ ಆಸಕ್ತಿಇಲ್ಲ ಒಮ್ಮೆ ಮದುವೆಯಾದರೆ ಮುಗಿಯಿತು ಆಧ್ಯಾತ್ಮಿಕ ಅಭಿಪ್ಸೆಗಳಿಗೆಲ್ಲ ತಿಲತರ್ಪಣ ಕೊಟ್ಟಂತೆ ಎಂದು ಭಾವಿಸಿದ್ದರು.ಶ್ರೀ ರಾಮಕೃಷ್ಣರಂತು ನರೇಂದ್ರರ ಮನೆಗೆ ಹೆಣ್ಣಿನವರು ಬಂದರೆ ಕಾಳಿಕಾಮಂದಿರಕ್ಕೆ ಹೋಗಿ ನರೇಂದ್ರರ ಮದುವೆ ಆಗದಂತೆ ಮಾಡು ಎಂದು ಬೇಡುತ್ತಿದ್ದರು. ನರೇಂದ್ರ ಬಂದಿರುವುದು ಮದುವೆಯಾಗಿ ಯಾವುದೋ ಒಂದು ಹೆಣ್ಣಿಗೆ ಮತ್ತು ಕೆಲವು ಮಕ್ಕಳಿಗೆ ಆನಂದವನ್ನು ಕೊಡುವುದಕ್ಕೆ ಅಲ್ಲ. ಅವನು ಹಲವು ಜೀವಿಗಳ ಉದ್ಧಾರ ಮಾಡುವುದಕ್ಕೆ ಭವಸಾಗರದಲ್ಲಿ ಒಂದು ನಾವೆಯಂತೆ ಇರಬೇಕಾಗಿದೆ ಎಂಬದು ಅವರ ಇಚ್ಚೆ. ಭಗವದ್ದಿಚ್ಚೆಯಂತೆ ನರೇಂದ್ರರು ವಿವೇಕಾನಂದರಾಗಿ ಭಾರತದ ಆಧ್ಯಾತ್ಮಿಕ ಲೋಕಕ್ಕೆ ತಿಲಕರಾದರು. ಅವರ ಜೀವನವೇನು ಸುಖದ ಸುಪ್ಪತ್ತಿಗೆಯರಿಲಿಲ್ಲ, ಪ್ರತಿ ಹಂತದಲ್ಲೂ ಕಷ್ಟಪಟ್ಟರು. ಆದರೆ ತಾವು ನಂಬಿದ್ದ ಸಿದ್ದಾಂತ ಮತ್ತು ತಮ್ಮ ವ್ಯಕ್ತಿತ್ವವನ್ನು ಬಿಡಲಿಲ್ಲ. ಪ್ರತಿ ಜೀವನದ ಹೊಡೆತವನ್ನು ತಮ್ಮ ಬೆಳವಣಿಗೆಗೆ ಮಾರ್ಪಾಡು ಮಾಡಿಕೊಂಡರು. ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ಅವರು ಆನಂದವನ್ನು ಕಂಡರು. ಇಡೀ ಜಗತ್ತಿಗೆ ಭಾರತದ ಆಧ್ಯಾತ್ಮಶಕ್ತಿಯನ್ನು ತೋರಿದರು.

ಅಂತಹಾ ವಿವೇಕ ಭೂಮಿ ಈ ಭಾರತ ಭೂಮಿ. ನಾವು ಸಹ ಅದೇ ಭೂಮಿಯಲ್ಲಿ ಬದುಕುತ್ತಿದ್ದೇವೆ. ಈ ಭಾರತವನ್ನು ವಿಶ್ವಗುರು ಮಾಡಿದ ಆ ಮಹಾ ಚೇತನ ನಮಗೆ ಸ್ಪೂರ್ತಿಯ ಚಿಲುಮೆ. ಅವರಿಲ್ಲಿದ್ದ ವಿವೇಕ ಮತ್ತು ಆನಂದ ಇಂದು ನಮ್ಮಲ್ಲಿ ಇಲ್ಲದಾಗಿದೆ. ಭಾರತವನ್ನು ಕಟ್ಟುವ ಜಾಗದಲ್ಲಿ ಭಾರತವನ್ನು ಹಲವಾರು ವಿಷಯಗಳಲ್ಲಿ ವಿಭಜಿಸುವ ಕೃತ್ಯ ಜರುಗುತ್ತಿದೆ. ಬನ್ನಿ ನಮ್ಮೊಳಗಿನ ವಿವೇಕವನ್ನು ಜಾಗೃತಿ ಮಾಡೋಣ. ಸದೃಢ ಭಾರತವನ್ನು ಕಟ್ಟಿ ಆನಂದಿಸೋಣ. ವಿವೇಕಾನಂದರಿಗೆ ಒಂದು ಉತ್ತಮ ಭಾರತವನ್ನು ಉಡುಗೊರೆಯಾಗಿ ನೀಡೋಣ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

http://kalpa.news/wp-content/uploads/2024/04/VID-20240426-WA0008.mp4

  

Tags: Kannada News WebsiteLatest News KannadamysorePunit G KoodluruSwami VivekanandaVivekananda Jayanthiಆಧ್ಯಾತ್ಮಕಾಶಿ ವಿಶ್ವೇಶ್ವರಭುವನೇಶ್ವರಿ ದೇವಿಸ್ವಾಮಿ ವಿವೇಕಾನಂದ
Share200Tweet125Send
Previous Post

ಇಂದಿನ ಪಂಚಾಂಗ | 2026ರ ಜನವರಿ 13, ಮಂಗಳವಾರ

Next Post

ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್ ಸಿನಿಮಾದ ‘ರೋಮಾಂಚಕ’ ಹಾಡು ಬಿಡುಗಡೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್ ಸಿನಿಮಾದ ‘ರೋಮಾಂಚಕ’ ಹಾಡು ಬಿಡುಗಡೆ

ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್ ಸಿನಿಮಾದ 'ರೋಮಾಂಚಕ' ಹಾಡು ಬಿಡುಗಡೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಆಸ್ಪತ್ರೆ – ವಿದ್ಯಾರ್ಥಿನಿಲಯಗಳಿಗೆ ಸಮರ್ಪಕ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಆಸ್ಪತ್ರೆ – ವಿದ್ಯಾರ್ಥಿನಿಲಯಗಳಿಗೆ ಸಮರ್ಪಕ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

March 13, 2026
ಮಾ.24, 25 ಶರಣ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷರಾಗಿ ಬೆಕ್ಕಿನ ಕಲ್ಮಠ ಶ್ರೀಗಳಿಗೆ ಆಹ್ವಾನ

ಮಾ.24, 25 ಶರಣ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷರಾಗಿ ಬೆಕ್ಕಿನ ಕಲ್ಮಠ ಶ್ರೀಗಳಿಗೆ ಆಹ್ವಾನ

March 13, 2026
ಜ.17ರಂದು ಭದ್ರಾವತಿಯ ಬಹುತೇಕ ಕಡೆ, ಮಾಚೇನಹಳ್ಳಿ ಪ್ರದೇಶದಲ್ಲಿ ಕರೆಂಟ್ ಇರಲ್ಲ | ಇಲ್ಲಿದೆ ಪಟ್ಟಿ

ಗಮನಿಸಿ! ಮಾರ್ಚ್ 14-15ರಂದು ಶಿವಮೊಗ್ಗದ ಈ ಎಲ್ಲ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

March 13, 2026
ಮಾನವೀಯತೆ ಜಾಗೃತಗೊಳಿಸಲು ಸಾಹಿತ್ಯ ಮದ್ದಾಗಲಿದೆ: ವಿಮರ್ಶಕಿ ಆಶಾದೇವಿ

ಮಾನವೀಯತೆ ಜಾಗೃತಗೊಳಿಸಲು ಸಾಹಿತ್ಯ ಮದ್ದಾಗಲಿದೆ: ವಿಮರ್ಶಕಿ ಆಶಾದೇವಿ

March 13, 2026
ಎಪ್ರಿಲ್ 10ರಿಂದ 20 | ಪುತ್ತೂರು ಮಹಾಲಿಂಗೇಶ್ವರ ಜಾತ್ರೆ | ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?

ಎಪ್ರಿಲ್ 10ರಿಂದ 20 | ಪುತ್ತೂರು ಮಹಾಲಿಂಗೇಶ್ವರ ಜಾತ್ರೆ | ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?

March 13, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL