ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಇಲ್ಲಿನ ಪುರಸಭೆ ಕಚೇರಿಯಲ್ಲಿ ಜನಸಾಮಾನ್ಯರ ಕೆಲಸಗಳು ವಿಳಂಬವಾಗುತ್ತಿವೆ ಹಾಗೂ ಕೆಲವು ಕೆಲಸಗಳು ಆಗುತ್ತಿಲ್ಲ ಎಂಬ ಸಾಲು ಸಾಲು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು #Lokayuktha police ದಿಢೀರ್ ಭೇಟಿ ನೀಡಿ ಕಡತ ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ವೀರಬಸಪ್ಪ ಎಲ್. ಕುಸುಲಾಪುರ್ ಅವರ ತಂಡ ಭೇಟಿ ನೀಡಿ ಕಡತ ಪರಿಶೀಲನೆ ನಡೆಸಿದರು
ಅಧಿಕಾರಿಗಳ ಟೇಬಲ್ ಬಳಿ ತೆರಳಿದ ಅವರು ಅಲ್ಲಿರುವ ಕಡತ ಏನು, ಯಾವ ಕೆಲಸಕ್ಕೆ ಸಂಬಂಧಿಸಿದ್ದು, ಯಾವಾಗ ಅರ್ಜಿ ಸಲ್ಲಿಸಲಾಗಿದೆ ಎಂಬ ಮಾಹಿತಿ ಪಡೆದು ಪರಿಶೀಲಿಸಿದರು.
ಕಚೇರಿಯಲ್ಲಿ ಹಾಜರಿದ್ದ ಸಾರ್ವಜನಿಕರಿಂದಲೂ ಮಾಹಿತಿ ಪಡೆದರು. ‘ನಿಮ್ಮ ಕೆಲಸಕ್ಕೆ ಹಣ ನೀಡಿದ್ದೀರಾ? ಎಷ್ಟನೇ ಬಾರಿ ಕಚೇರಿಗೆ ಆಗಮಿಸಿದ್ದೀರಿ’ ಎಂದು ಜನರನ್ನು ಪ್ರಶ್ನಿಸಿದರು.
ಕಳೆದ ಡಿ.9ಕ್ಕೆ ನೀಡಿದ ಕಡತ ಈವರೆಗೂ ವಿಲೇವಾರಿ ಆಗದಿರುವುದು ಕಂಡುಬಂದಿತು. 2025ರ ಮೇನಲ್ಲಿ ಸಲ್ಲಿಸಿದ್ದ ಕಡತ ನೋಡಿದ ಅವರು, ಕಡತ ವಿಲೇವಾರಿ ಕಾರ್ಯವೈಖರಿಯನ್ನು ತ ಕ್ಷಣವೇ ಬದಲಾವಣೆ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.
‘ಇ-ಸ್ವತ್ತು, ಬಿ-ಖಾತೆ ಮಾಡುವುದಕ್ಕೆ ಕಚೇರಿ ಅಲೆದಾಟ ಹೆಚ್ಚಾಗಿದೆ ಎನ್ನುವ ಹಲವು ದೂರು ಆಧರಿಸಿ ಲೋಕಾಯುಕ್ತ ಎಸ್.ಪಿ. ಎಂ.ಎಸ್.ಕವಲಾಪುರೆ ಅವರ ಸೂಚನೆ ಮೇರೆಗೆ ಪರಿಶೀಲನೆ ನೀಡಲಾಯಿತು. 714 ಇ-ಸ್ವತ್ತು ಅರ್ಜಿ ವಿಲೇವಾರಿಗೆ ಬಾಕಿ ಇವೆ. ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು, ಜನರನ್ನು ವಿನಾಕಾರಣ ಅಲೆದಾಡಿಸಿದ್ದು ಕೇಳಿ ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮತ್ತೊಬ್ಬ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಗುರುರಾಜ ಮೈಲಾರ ಹೇಳಿದರು.
ಪಿ.ಸಿ.ಆನಂದ, ಎಚ್.ಸಿ.ಟೀಪಪ್ಪ, ಎಚ್.ಸಿ.ಮಂಜುನಾಥ, ಆದರ್ಶ, ಚನ್ನೇಶ್, ಚಂದ್ರೀಬಾಯಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















