ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮಮಂದಿರದಲ್ಲಿ ಮಾರ್ಚ್ 19 ರಿಂದ 29ರ ವರೆಗೆ ವಸಂತ ನವರಾತ್ರಿ ಶ್ರೀರಾಮೋತ್ಸವ #Shri Ramothsava ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಮುಖ್ಯ ಅತಿಥಿಗಳಾಗಿ ಮಲ್ಲೇಶ್ವರದ ಶಾಸಕರಾದ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಆಗಮಿಸಲಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳು : ಮಾರ್ಚ್ 19, ಬೆಳಗ್ಗೆ 7 ಗಂಟೆಯಿಂದ ರಾಮಾಯಣ ಪಾರಾಯಣ, ಶ್ರೀರಾಮ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು, ಸಂಜೆ 5-30 ಪಂಚಾಂಗ ಶ್ರವಣ. ಮಾರ್ಚ್ 27, ಬೆಳಗ್ಗೆ 7-30 ರಿಂದ ರಾಮನವಮಿ ಪ್ರಯುಕ್ತ ವಿಶೇಷ ಪಂಚಾಮೃತ ಅಭಿಷೇಕ, ಶ್ರೀರಾಮದೇವರಿಗೆ ತೊಟ್ಟಿಲು ಸೇವೆ, ಪಾನಕ ಸೇವೆ. ಮಾರ್ಚ್ 29, ಬೆಳಗ್ಗೆ ಶ್ರೀರಾಮ ಪಟ್ಟಾಭಿಷೇಕದ ಪ್ರಯುಕ್ತ ಅನ್ನದಾನ ಸೇವೆ.
ಸಾಂಸ್ಕೃತಿಕ ಕಾರ್ಯಕ್ರಮಗಳು (ಪ್ರತಿದಿನ ಸಂಜೆ 6-30ಕ್ಕೆ) : ಮಾರ್ಚ್ 19- ಭರತನಾಟ್ಯ ಪ್ರದರ್ಶನ : ಕು. ಸುರಭಿ ಶ್ರೀಧರ್ ಕೈಪೆ, ಮಾರ್ಚ್ 20-ದ್ವಂದ್ವ ಪಿಟೀಲು : ವಿ. ಜಯಶ್ರೀ, ವಿ. ಆದಿತ್ಯ ಮತ್ತು ಸಂಗಡಿಗರು, ಮಾರ್ಚ್ 21-ಭರತನಾಟ್ಯ ಪ್ರದರ್ಶನ : ನೃತ್ಯ ದಿಶಾ ಟ್ರಸ್ಟಿನ ಸುಮಾರು 40 ವಿದ್ಯಾರ್ಥಿಗಳಿಂದ. ಗುರುಗಳು : ಡಾ. ದರ್ಶಿನಿ ಮಂಜುನಾಥ್. ಮಾರ್ಚ್ 22-ಶಾಸ್ತ್ರೀಯ ಸಂಗೀತ : ವಿ. ಅಕ್ಷಯ ರುದ್ರಪಟ್ಟಣಂ ಮತ್ತು ಸಂಗಡಿಗರು, ಮಾರ್ಚ್ 23-ಸಮೂಹ ಗಾಯನ : ವಿದುಷಿಯರಾದ ಶ್ರೀದೇವಿ ಗರ್ತಿಕೆರೆ, ಇಂದಿರಾ ಶರ್ಮಾ, ಎಂ.ಕೆ. ಶ್ರೀದೇವಿ, ಚಾಂದಿನಿ ಗರ್ತಿಕೆರೆ. ಮಾರ್ಚ್ 24-ನೃತ್ಯ ವೈಭವ : ಮೈಸೂರಿನ ಶ್ರೀ ಗಣೇಶ ಸಂಗೀತ ನೃತ್ಯಾಲಯ ಚಾರಿಟಿಯಟಬಲ್ ಟ್ರಸ್ಟಿನ ಕಲಾವಿದರಿಂದ, ನಿರ್ದೇಶನ : ವಿ. ಆರತಿ ಅರುಣ್,
ಮಾರ್ಚ್ 25-ಹರಿದಾಸ ಮಂಜರಿ : ಕು. ಅನನ್ಯ ಬೆಳವಾಡಿ (ಗಾಯನ), ವಿ. ಅಮಿತ್ ಶರ್ಮಾ (ಕೀಬೋರ್ಡ್), ವಿ. ಸರ್ವೋತ್ತಮ (ತಬಲಾ). ಮಾರ್ಚ್ 26-ಶಾಸ್ತ್ರೀಯ ಸಂಗೀತ : ವಿ. ಆರ್.ಕೆ. ಪ್ರಸನ್ನಕುಮಾರ್ ಮತ್ತು ಸಂಗಡಿಗರು, ಮಾರ್ಚ್ 27-ಸಂಜೆ 5-30ಕ್ಕೆ ಸ್ತುತಿ ವಾಹಿನಿ ತಂಡದವರಿಂದ ಭಜನಾಮೃತ. ನಂತರ ಭಗವದ್ಗೀತ ಶ್ಲೋಕಗಳ ಪಠಣ : ಕು. ವೈನವಿ. ಮಾರ್ಚ್ 28-ಹರಿದಾಸ ವೈಭವ : ಕು. ಅವನಿ ಭಟ್ (ಗಾಯನ), ವಿ. ಟಿ.ಎಸ್. ರಮೇಶ್ (ಕೀಬೋರ್ಡ್), ವಿ. ಪ್ರಮಥ್ ವಿಠಲ್ (ತಬಲಾ), ಮಾರ್ಚ್ 29-ಸಂಜೆ 7-30ಕ್ಕೆ ಶ್ರೀರಾಮದೇವರ ಪ್ರಾಕಾರೋತ್ಸವ ನಂತರ ಶ್ರೀ ಶಾರದಾ ಶಂಕರ ಭಜನಾ ಮಂಡಳಿಯ ಸದಸ್ಯರಿಂದ ದೇವರನಾಮ ಮತ್ತು ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀರಾಮಮಂದಿರದ ಗೌರವ ಕಾರ್ಯದರ್ಶಿ ಸಿ. ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















