ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ಅಖಿಲ ಹವ್ಯಕ ಮಹಾಸಭೆಯು ನೀಡುವ ವಾರ್ಷಿಕ ವಿಶೇಷ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಮಾರ್ಚ್ 26 ಭಾನುವಾರದಂದು ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ #HavyakaBhavana ನಡೆಯುವ 83ನೆಯ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ 2025-26 ನೆಯ ಸಾಲಿನ ಪ್ರಶಸ್ತಿ ಪ್ರದಾನ ನಡೆಯಲಿದೆ.
ಹವ್ಯಕ ವಿಶೇಷ ಪ್ರಶಸ್ತಿ 2025-26 : ಈ ಕೆಳಗಿನ ಸಾಧಕರು ಆಯ್ಕೆಯಾಗಿದ್ದಾರೆ ಎಂದು ತಿಳಿಸಲು ಮಹಾಸಭೆ ಹರ್ಷಿಸುತ್ತಿದೆ.
ಹವ್ಯಕ ವಿಭೂಷಣ
- ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ
ಖ್ಯಾತ ತಾಳಮದ್ದಳೆ ಅರ್ಥದಾರಿಗಳು, ಸಾಹಿತಿಗಳು - ಶ್ರೀ ಎಸ್. ಶಂಭು ಭಟ್ ಕಡತೋಕ
ಶಿಕ್ಷಣ ತಜ್ಞರು, ಸಾಂಸ್ಕೃತಿಕ ರಾಯಭಾರಿ
ಹವ್ಯಕ ಭೂಷಣ
- ಶ್ರೀ ನೀರ್ನಳ್ಳಿ ಗಣಪತಿ
ಖ್ಯಾತ ಚಿತ್ರ ಕಲಾವಿದರು - ಡಾ . ವೈ. ವಿ. ಕೃಷ್ಣಮೂರ್ತಿ
ಪಶು ತಜ್ಞರು, ದೇಶಿ ಗೋವು ಸಂವರ್ಧಕರು - ಶ್ರೀ ಉಮೇಶ ಬಂದಗದ್ದೆ
ಉದ್ಯಮಿಗಳು, ಶಿಕ್ಷಣ ಪೋಷಕರು
ಹವ್ಯಕ ಶ್ರೀ
- ಶ್ರೀಮತಿ ಪೂರ್ಣಿಮಾ ಕೆ ಭಟ್
ಕಸೂತಿ ಉದ್ಯಮ - ವೇ. ಮೂ. ಸುಚೇತನ ಭಟ್
ಯಜುರ್ವೇದ ಘನಪಾಠಿಗಳು - ಶ್ರೀ ಆನಂದ ಹೆಗಡೆ ಶೀಗೇಹಳ್ಳಿ
ಸಮಾಜ ಸೇವೆ - ಕು. ಪ್ರತ್ಯೂಷ ಕುಮಾರ್
ಯುವ ಕ್ರಿಕೆಟ್ ಪ್ರತಿಭೆ
ಹವ್ಯಕ ಸೇವಾಶ್ರೀ
- ಡಾ. ಬಿ. ವಿ. ನರಹರಿ ರಾವ್
ಹಿರಿಯ ಸಂಚಾಲಕರು - ಶ್ರೀ ಬೋನಂತಾಯ ಶಿವಶಂಕರ ಭಟ್
ಹಿರಿಯ ನಿರ್ದೇಶಕರು - ಶ್ರೀ ಕೃಷ್ಣಮೂರ್ತಿ ಹೆಗಡೆ ತ್ಯಾಗಲಿ
ಸಂಚಾಲಕರು – ಹವ್ಯಕ ವಧೂ-ವರ ವೇದಿಕೆ
ಪ್ರಶಸ್ತಿ ಆಯ್ಕೆ ಹೇಗೆ?
ಸಮಾಜದ ಅರ್ಹ ಸಾಧಕರನ್ನು ಗುರುತಿಸಿ; ಆಯ್ಕೆಯ ಮಾನದಂಡಗಳ ಅನ್ವಯ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಮಹಾಸಭೆಯ ಸದಸ್ಯರುಗಳು ಪ್ರಶಸ್ತಿಗೆ ಹೆಸರುಗಳನ್ನು ಸೂಚಿಸಬಹುದಾಗಿದ್ದು; ಸ್ವಯಂ ಅಭ್ಯರ್ಥಿಗಳೇ ಪ್ರಶಸ್ತಿಗಾಗಿ ಅರ್ಜಿಸಲ್ಲಿಸಲು ಅವಕಾಶವಿರುವುದಿಲ್ಲ.
ಹಾಗೆಯೇ ಇದೇ ಸಂದರ್ಭದಲ್ಲಿ ವಿಶೇಷ ಸಾಧನೆಗಳನ್ನು ಮಾಡಿದ ವಿದ್ಯಾರ್ಥಿಗಳಿಗೆ ‘ಪಲ್ಲವ’ ಪ್ರಶಸ್ತಿಯನ್ನು ನೀಡಿ ಮಕ್ಕಳಿಗೆ ಪ್ರೋತ್ಸಾಹ ನೀಡಲಾಗುವುದು.
‘ಹವ್ಯಕ’ ಮಾಸಪತ್ರಿಕೆಯ ವಜ್ರಮಹೋತ್ಸವ – ವಿಶೇಷ ಸಂಚಿಕೆ ಲೋಕಾರ್ಪಣೆ
ಹವ್ಯಕ ಮಹಾಸಭೆಯ ಮುಖವಾಣಿ ‘ಹವ್ಯಕ’ ಪತ್ರಕೆಯು 1966 ಜೂನ್ ತಿಂಗಳಿನಲ್ಲಿ ಆರಂಭವಾಗಿದ್ದು, ನಿರಂತರವಾಗಿ 60 ವರ್ಷಗಳಿಂದ ಪ್ರಕಾಶಿತವಾಗುತ್ತಿದೆ. ಪ್ರತಿತಿಂಗಳು ಸುಮಾರು 30,000 ಕುಟುಂಬಗಳನ್ನು ತಲುಪುತ್ತಿದ್ದು, ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಪತ್ರಿಕೆಯ ವಜ್ರಮಹೋತ್ಸವದ ಪ್ರಯುಕ್ತ ವಿಶೇಷ ಸಂಚಿಕೆಯನ್ನು ಹೊರತರಲಾಗುತ್ತಿದ್ದು, ಭಾನುವಾರ ಸಂಚಿಕೆಯ ಲೋಕಾರ್ಪಣೆ ಹಾಗೂ ಪತ್ರಿಕೆಯಲ್ಲಿ ಸಂಪಾದಕರು ಹಾಗೂ ಸಂಚಾಲಕರಾಗಿ ಸೇವೆ ಸಲ್ಲಿಸಿದವರಿಗೆ ಇದೇ ಸಂದರ್ಭದಲ್ಲಿ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















