ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿರುಗಾಳಿ ಮಳೆಯಿಂದ ಭಾರೀ ಅನಾಹುತ ಉಂಟಾದ ಶಿವಮೊಗ್ಗ ಗ್ರಾಮಾಂತರ ಭಾಗದ ಮೈದೊಳಲು, ಮಲ್ಲಿಗೇನಹಳ್ಳಿ, ಅರಹತೊಳಲು ಗ್ರಾಮಗಳಿಗೆ ಶುಕ್ರವಾರ ಬೆಳಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ Minister Krishna Bairegowda ಅವರು ಭೇಟಿನೀಡಿ, ವೀಕ್ಷಣೆ ನಡೆಸಿದರು.
ಮಲ್ಲಿಗೇನಹಳ್ಳಿ ಭೋವಿ ಕಾಲೋನಿಯ ರೈತರೊಬ್ಬರ ತೋಟಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದ ಬಳಿಕ ರೈತರೊಂದಿಗೆ ಮಾತನಾಡಿದ ಸಚಿವರು, ಮಳೆ ಬಿರುಗಾಳಿಯಿಂದಾದ ಆಸ್ತಿ ಪಾಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಸರ್ವೇ ಕಾರ್ಯ ನಡೆಯುತ್ತಿದೆ. ಅದು ಮುಗಿದ ತಕ್ಷಣವೇ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಭಾರೀ ಪ್ರಮಾಣದ ಬೆಳೆನಷ್ಡವಾಗಿದೆ. ಸಾಲ ಶೂಲ ಮಾಡಿ ಬೆಳೆ ಬೆಳೆದಿದ್ದೇವೆ, ಈಗ ದಾರಿ ಕಾಣುತ್ತಿಲ್ಲ, ಕೆಲವರು ವಿಷ ಸೇವಿಸಲು ಮುಂದಾಗಿದ್ದನ್ನು ತಪ್ಪಿಸಿದ್ದೇವೆ ಎಂದು ರೈತರು ಸಚಿವರ ಬಳಿ ಅಳಲು ತೋಡಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರ ರೈತರ ಪರವಾಗಿದೆ.ಯಾವುದೇ ಕಾರಣಕ್ಕೂ ಅಂತಹ ಅನಾಹುತ ಮಾಡಿ ಕೊಳ್ಳುವ ಆತುರ ಬೇಡ. ರಜೆ ಇದ್ದರೂ ಕೂಡ ಇವತ್ತು ಅಧಿಕಾರಿಗಳು ಸರ್ವೇ ಕಾರ್ಯದಲ್ಲಿ ತೊಡಗಿದ್ದಾರೆ. ಸಂತ್ರಸ್ಥರಿಗೆ ಆದಷ್ಟು ಬೇಗ ಪರಿಹಾರ ನೀಡಬೇಕೆನ್ನುವುದು ಇದರ ಉದ್ದೇಶ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಇಲ್ಲಿಗೆ ಬಂದು ಹೋಗಿದ್ದಾರೆ. ಮಾಹಿತಿ ಪಡೆದಿದ್ದೇನೆ. ಆದಷ್ಟು ಬೇಗ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಪ್ರಭಾರ ಜಿಲ್ಲಾಧಿಕಾರಿಗಳು ಆದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು. ಬಗರ್ ಹುಕುಂ ರೈತರಿಗೆ ಅರಣ್ಯ ಇಲಾಖೆಯವರು ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ. ಹಲವಾರು ವರ್ಷಗಳ ಕಾಲ ಇಲ್ಲಿ ಉಳುವೆ ಮಾಡುತ್ತಿದ್ದೇವೆ, ನಮಗೆ ಅರಣ್ಯ ಇಲಾಖೆ ತೊಂದರೆ ಕೊಡುವುದನ್ನು ತಪ್ಪಿಸಬೇಕೆಂದು ರೈತರು ಇದೇ ವೇಳೆ ತಮ್ಮ ಅಹವಾಲು ಹೇಳಿಕೊಂಡರು.
ಸಚಿವರು ಇದಕ್ಕೆ ಪ್ರತಿಕ್ರಿಯಿಸಿ, ಕಾನೂನು ಸಮಸ್ಯೆಗಳಿವೆ. ಕೋರ್ಟ್ ಆದೇಶವಿದೆ. ಈ ಹಂತದಲ್ಲಿ ನಾವು ಅರಣ್ಯ ಇಲಾಖೆಗೆ ತಡೆಯೋದಿಕ್ಕೆ ಆಗೋದಿಲ್ಲ. ಆದರೆ ತೊಂದ್ರೆ ಕೊಡ್ಬೇಡಿ ಅಂತ ಮಾತ್ರ ಹೇಳಬಹುದು. ಆ ಕೆಲಸವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು. ವಿಧಾನಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ ಮಾತನಾಡಿ, ಬೆಳೆ ವಿಮೆ ಯೋಜನೆ ಇದಕ್ಕೆ ಅನ್ವಯ ಆಗಲ್ಲ, ಬಿಸಿಲಿನ ತಾಪ ಅಂತ ಬೆಳೆನಷ್ಟ. ತೋರಿಸಿದರೂ ಪರಿಹಾರ ತುಂಬಾ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ. ಮಳೆಗಾಲ ಬೆಳೆವಿಮೆ ಯೋಜನೆಯಾದರೆ ಕನಿಷ್ಡ 1 ಲಕ್ಷ ರೂ. ಪರಿಹಾರ ಸಿಗುತ್ತದೆ. ಈಗ ರೈತರಿಗೆ ವಿಮೆ ಯೋಜನೆಯ ಸೌಲಭ್ಯ ಸಿಗದಂತಾಗಿದೆ. ಹಾಗಾಗಿ ಪರಿಹಾರದ ಮೊತ್ತವನ್ನು ಹೆಚ್ಚಿಸಿ, ತಕ್ಷಣವೇ ಕೊಡಬೇಕೆಂದು ಒತ್ತಾಯಿಸಿದರು.
ಜಿ.ಪಂ. ಸಿಇಓ ಎನ್. ಹೇಮಂತ್ ಇದಕ್ಕೆ ಪ್ರತಿಕ್ರಿಯಿಸಿ, ಬೆಳೆ ವಿಮೆ ಸೌಲಭ್ಯದ ಬಗೆಗಿನ ಕಂಡಿಷನ್ಸ್ ಹೇಗೆ, ಏನು? ಅವಕಾಶ ಇದೀಯಾ ಎನ್ನುವುದನ್ನು ಚೆಕ್ ಮಾಡಿವೆ. ಅವಕಾಶವಿದ್ದರೆ ಬೆಳೆ ನಷ್ಡ ಹೊಂದಿದ ರೈತರಿಗೆ ನೀಡಲು ಸೂಚಿಸಲಾಗುವುದು ಎಂದು ಹೇಳಿದರು. ಸಚಿವರು ಪ್ರತಿಕ್ರಿಯಿಸಿ, ನೋಡಿ ಅಂತಹ ಅವಕಾಶ ಇದ್ದರೆ ಕೊಡಿ ಎಂದು ಸೂಚಿಸಿದರು.“ಈ ಸಂದರ್ಭದಲ್ಲಿ ಶಾಸಕಿ ಶಾರಾದಾ ಪೂರ್ಯನಾಯ್ಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಹೊಳೆಹೊನ್ನುರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಣ ಸಿ.ಹನುಮಂತು, ರಾಜ್ಯ ಭೋವಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್.ರವಿಕುಮಾರ್, ರೈತ ನಾಯಕ ಕೆ.ಟಿ.ಗಂಗಾದರ್, ನಗರದ ಮಹಾದೇವಪ್ಪ, ಭೋವಿ ಸಮಾಜದ ಮುಖಂಡರಾದ ಧೀರರಾಜ್ ಹೊನ್ನವಿಲೆ, ವೀರೇಶ್ ಕ್ಯಾತಿನಕೊಪ್ಪ ಮತ್ತಿತರರು ಇದ್ದರು.
ಸಿಎಂ ಬದಲಾವಣೆ ಕುರಿತು ಸಚವ ಕೃಷ್ಣ ಬೈರೇಗೌಡ ಪ್ರತಿಕ್ರಿಯಸಿದ್ದು ಬದಲಾವಣೆ, ನಮ್ಮ ಆಸೆ ಎನ್ನುವುದರ ಮೂಲಕ ಸಚಿವ ಕೃಷ್ಣ ಭೈರೇಗೌಡ ಮೊದಲಬಾರಿಗೆ ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿ, ಯಾವ ಕಾಲಕ್ಕೆ ಏನೂ ಆಗುತ್ತದೆಯೋ ಅದು ಆಗುತ್ತದೆ. ಜನ ನಮಗೆ ಈ ಸ್ಥಾನ ಕೊಟ್ಟಿದ್ದಾರೆ. ಜನರಿಗೆ ಒಳ್ಳೆಯದನ್ನು ಮಾಡಬೇಕಿದೆ. ಕಾಲಕ್ಕೆ ತಕ್ಕಂತೆ ಎಲ್ಲರೂ ಹೊಂದುಕೊಳ್ಳಬೇಕಾಗುತ್ತದೆ ಎಂದರು. ““ಜನ ನಮಗೆ ಜವಾಬ್ದಾರಿ ಕೊಟ್ಟು ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದಾರೆ. ನನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡುತ್ತೆನೆ. ನಾವು ಜನರ ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕು. ರಾಜಕೀಯದಲ್ಲಿ ಆಸೆ ಆಕ್ಷಾಂಕ್ಷೆಗಳು, ಬದಲಾವಣೆಗಳು ಇರುತ್ತವೆ. ನಾವು ನಿರ್ಲಪ್ತತೆಯಿಂದ ಇರಲು ಸಾಧ್ಯವಿಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















