ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್, ಬಂಟರ ಸಂಘ ಶಿವಮೊಗ್ಗ, ಬೆನಕ ಇವೆಂಟ್ಸ್ ಕುಂದಾಪುರ ಇವರುಗಳು ಸಂಯುಕ್ತಾಶ್ರಯದಲ್ಲಿ ನಗರದ ಬಂಟರ ಭವನದಲ್ಲಿ ಜುಲೈ 3, 4 ಮತ್ತು 5ರಂದು ಹಲಸು ಮತ್ತು ಮಾವು ಮೇಳ ನಡೆಯಲಿದೆ ಎಂದು ಬೆನಕ ಇವೆಂಟ್ಸ್ನ ಗಣೇಶ್ ಶೆಟ್ಟಿ ತಿಳಿಸಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9.30ರ ವರೆಗೆ ಈ ಮೇಳ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ.
90ಕ್ಕೂ ಹೆಚ್ಚು ಸ್ಟಾಲ್ಗಳಲ್ಲಿ ಹಲಸಿನ ಮತ್ತು ಮಾವಿನ ಹಣ್ಣಿನ ವಿಶೇಷ ಖಾದ್ಯಗಳು, ಹಲವಾರು ತಿನಿಸುಗಳು, ಹಣ್ಣಿನ ಬಗೆ ಬಗೆಯ ಐಸ್ ಕ್ರೀಂಗಳು, ಹಲಸಿನ ಹೋಳಿಗೆ, ಜಿಲೇಬಿ, ವಿವಿಧ ಹಣ್ಣುಗಳು, ತರಕಾರಿ ಬೀಜಗಳು, ಹಣ್ಣಿನ ಉತ್ಪನ್ನಗಳ, ಆಯುರ್ವೇದಿಕ್ ಹಾಗೂ ಗೃಹ ತಯಾರಿಕೆಯ ಉತ್ಪನ್ನಗಳು, ಮನೆಗೆ ಬೇಕಾದ ಸಾಮಾಗ್ರಿಗಳು, ವಿವಿಧ ತಳಿಯ ಹಣ್ಣಿನ ಮತ್ತು ಹೂವಿನ ಸಸಿ ಗಿಡಗಳು, ಮನೆಯಲ್ಲೇ ತಯಾರು ಮಾಡಿದ ಉಡುಪಿ ಉಪ್ಪಿನಕಾಯಿ, ಹಪ್ಪಳ, ಹಲಸಿನ ಉಪ್ಪಿನಕಾಯಿ, ಹಲಸಿನ ಬೀಜದ ಬಿಸ್ಕೇಟ್, ಹಲಸಿನ ಹಣ್ಣಿನ ಜಾಮ್, ಹಲಸಿನ ಉಪ್ಪಿನಕಾಯಿ, ಇಳಿಕಲ್ ಹಾಗೂ ಮೈಸೂರು ಸಿಲ್ಕ್ ಖಾದಿ ಸೀರೆಗಳು, ರಾಮನಗರ, ತುಮಕೂರು, ಪಾಂಡಿಚರಿಯಿಂದ ಬಗೆ ಬಗೆಯ ಹಲಸಿನ ಹಣ್ಣು, ಸದಬಿರುಚಿಯ ಪುಸ್ತಕ, ಮಕ್ಕಳ ಬಟ್ಟೆಗಳು, ರಾಮನಗರದ ವಿಶೇಷ ಹತ್ತು ಬಗೆಯ ಮಾವಿನ ಹಣ್ಣು, ಚನ್ನಪಟ್ಟಣದ ವಿಶೇಷ ಗೊಂಬೆಗಳು, ಹುಣಸೇಕಾಯಿ ಚಟ್ನಿ, ಅಪ್ಪಿಮಿಡಿ ಚಟ್ನಿ, ಕರಾವಳಿ ಮಸಾಲ ಪದಾರ್ಥಗಳು, ಖಾದಿ ಉತ್ಪನ್ನಗಳು, ಮಣ್ಣಿನ ಮತ್ತು ಒಂದು ಗ್ರಾಂ ಗೋಲ್ಡ್ ಆಭರಣಗಳು ಈ ಮೇಳದಲ್ಲಿ ಭಟ್ ಅಂಡ್ ಭಟ್ ಅವರ ಉತ್ಪನ್ನಗಳು ಕೂಟ ಲಭ್ಯವಿದೆ ಎಂದರು.
ಸಣ್ಣ ಉದ್ಯಮಿಗಳು ಮತ್ತು ಗೃಹ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ಈ ಮೇಳ ಹಮ್ಮಿಕೊಳ್ಳಲಾಗಿದ್ದು, ಹಲವು ಕಡೆಗಳಲ್ಲಿ ಯಶಸ್ವಿಯಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಅವರು ವಿನಂತಿಸಿದರು.
ಸೆಲ್ಫಿಸ್ಟ್ಯಾಂಡ್ನಲ್ಲಿ ಫೋಟೋ ತೆಗೆದು ವಾಟ್ಸ್ ಅಪ್ ಸ್ಟೇಟಸ್ ಹಾಗು ಅತೀ ವೀಕ್ಷಣೆ ಪಡೆದ ಮೂರು ವಾಟ್ಸ್ ಅಪ್ ಸ್ಟೇಟಸ್ ಗಳಿಗೆ ಗುಣಮಟ್ಟದ ಇಳಕಲ್ ಸೀರೆ ಬಹುಮಾನ ಪಡೆಯುವ ಸುವರ್ಣಾವಕಾಶವಿದೆ. ವೀಕ್ಷಣೆಗೊಂಡ ಸ್ಟೇಟಸ್ ಸ್ಕ್ರೀನ್ಶಾಟನ್ನು ಹೆಚ್ಚಿನ ವಿವರಗಳಿಗೆ ಭಾಸ್ಕರ ಪೂಜಾರಿ, ಮೊ.810529767 ನಂಬರ್ಗೆ ವಾಟ್ಸ್ ಅಪ್ ಮಾಡಲು ಕೋರಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ನ ವಸಂತ್ ಹೋಬಳಿದಾರ್, ಕಿರಣ್ಕುಮಾರ್ ಜಿ., ಸತೀಶ್ಕುಮಾರ್ ಶೆಟ್ಟಿ, ರೋಟರಿ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಸವರಾಜ್, ಜಯಶೀಲ ಶೆಟ್ಟಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








