ಕಲ್ಪ ಮೀಡಿಯಾ ಹೌಸ್ | ಮೈಸೂರು |
ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಜನ್ಮದಿನದ ಪ್ರಯುಕ್ತ ಮೈಸೂರಿನ (Mysuru) ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿ ನಡೆಯುತ್ತಿರುವ ಗಣೇಶೋತ್ಸವದ ಅಂಗವಾಗಿ ವಿಶೇಷ ಗಣಪತಿ ಹೋಮವನ್ನು (Ganapathi Homa) ನೆರವೇರಿಸಲಾಯಿತು.
ಬಡಾವಣೆಯ ಗಣೇಶೋತ್ಸವದಲ್ಲಿ ಎ.ಎನ್. ರಾಮಕೃಷ್ಣ ಹಾಗೂ ಶ್ರೀಮತಿ ನಿರ್ಮಲಾ ದಂಪತಿಗಳು ಗಣಪತಿ ಹೋಮವನ್ನು ನೆರವೇರಿಸಿದರು.
Mysuru : ಬರಗಾಲ ನಿವಾರಣೆಯಾಗಿ ಉತ್ತಮ ಮಳೆಯಾಗಲಿ
ಈ ಸಂದರ್ಭದಲ್ಲಿ ಮಾತನಾಡಿದ ರಾಮಕೃಷ್ಣ, “ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಪ್ರಗತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಭಾರತವು ಇಂದು ವಿಶ್ವದಲ್ಲಿ ಹೆಚ್ಚಿನ ಮಾನ್ಯತೆ ಗಳಿಸಿರುವುದಕ್ಕೆ ಅವರ ಆಡಳಿತವೂ ಪ್ರಮುಖ ಕಾರಣವಾಗಿದೆ. ನರೇಂದ್ರ ಮೋದಿಯವರಿಗೆ ಇನ್ನೂ ಹೆಚ್ಚಿನ ಶಕ್ತಿ, ಆರೋಗ್ಯ ಮತ್ತು ಆಯಸ್ಸು ದೊರೆಯಲಿ. ದೇಶದಲ್ಲಿ ಬರಗಾಲ ನಿವಾರಣೆಯಾಗಿ ಉತ್ತಮ ಮಳೆಯಾಗಲಿ ಎಂದು ಗಣಪತಿ ದೇವರಲ್ಲಿ ಪ್ರಾರ್ಥಿಸಲಾಗಿದೆ” ಎಂದು ತಿಳಿಸಿದರು.
Also read>> ಜಗಮೆಚ್ಚಿದ ಮಗ ಚಿತ್ರಕ್ಕೆ ಹೊಸ ರೂಪ: ಕನ್ನಡ ರಾಜ್ಯೋತ್ಸವಕ್ಕೆ ಕಲರ್ನಲ್ಲಿ ಡಾ.ರಾಜಕುಮಾರ್ ಸಿನಿಮಾ ಬಿಡುಗಡೆ
ಹೋಮದ ಅಂಗವಾಗಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪುಣ್ಯಾಹವಾಚನ, ನವಗ್ರಹ ಪೂಜೆ, ಗಣಪತಿ ಪೂಜೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ವಿಶೇಷವಾಗಿ ಮೋದಕ ಹಾಗೂ ಅಷ್ಟದ್ರವ್ಯಗಳಿಂದ ಹೋಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಡಾವಣೆಯ ಅಧ್ಯಕ್ಷ ಕೆ. ಆರ್. ಗಣೇಶ್, ಕಾರ್ಯದರ್ಶಿ ನಾಗಭೂಷಣಾಚಾರಿ, ಪುನೀತ್ ಜಿ, ಮಂಜುನಾಥ್, ಮೋಹನ್, ಕಾರ್ತಿಕ್ ಸೇರಿದಂತೆ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








