No Result
View All Result
Malnad is a Cultural ‘Gharana’ of Great Minds: Dr. Jayamala at Sahyadri Utsava
English Articles

Malnad is a Cultural ‘Gharana’ of Great Minds: Dr. Jayamala at Sahyadri Utsava

by ಕಲ್ಪ ನ್ಯೂಸ್
March 13, 2026
0

Kalpa Media House  |  Shimoga | Invoking the poetic essence of the Malnad landscape, veteran actor, former minister, and Chairperson...

Read moreDetails
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಎಚ್ಚರ ಅವಶ್ಯ : ಡಾ. ಸುಶ್ರುತ ಗೌಡ

Post-COVID Surge: Lifestyle Diseases Now Striking People in Their 40s, Warns Neurologist  Dr. Sushrutha Gowda

March 9, 2026
  • Advertise With Us
  • Grievances
  • About Us
  • Contact Us
Tuesday, March 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಭದ್ರಾವತಿ

ಭದ್ರಾವತಿ: ಕ್ವಾಟ್ರಸ್ ವ್ಯಾಪ್ತಿಯಲ್ಲಿ ಮನೆ-ಮನೆ ಕಸ ಸಂಗ್ರಹ ಸ್ಥಗಿತ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 21, 2018
in ಭದ್ರಾವತಿ
0
Share on FacebookShare on TwitterShare on WhatsApp

ಭದ್ರಾವತಿ: ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯ ಸ್ವಚ್ಚ ಭಾರತ ಅಭಿಯಾನ ಯೋಜನೆಯಡಿ ನಗರಸಭೆ ಆರಂಭಿಸಿರುವ ಮನೆ-ಮನೆ ಕಸ ಸಂಗ್ರಹ ಹಾಗೂ ಸಂಕ್ಷರಣೆ ಕಾರ್ಯಕ್ಕೆ ವಿಐಎಸ್‌ಎಲ್ ಮತ್ತು ಎಂಪಿಎಂ ಆಡಳಿತಗಳು ನಗರಸಭೆಗೆ ಹಣ ಪಾವತಿಸದಿರುವ ಹಿನ್ನಲೆಯಲ್ಲಿ ಜೂನ್ 1 ರಿಂದ ಕಸ ಸಂಗ್ರಹ ಕಾರ್ಯ ಸ್ಥಗಿತಗೊಳಿಸಲಾಗಿದ್ದು ನಾಗರಿಕರು ಕಂಗೆಟ್ಟು ಪೇಚಾಟದಲ್ಲಿ ಸಿಲುಕಿದ್ದಾರೆ.

ಸ್ಥಳೀಯ ನಗರಸಭೆಯ ವ್ಯಾಪ್ತಿಗೆ ಸೇರಿದ ವಿಐಎಸ್‌ಎಲ್ 5 ಸಾವಿರ ವಸತಿ ಗೃಹಗಳು ಮತ್ತು ಎಂಪಿಎಂ ವ್ಯಾಪ್ತಿಯ 2 ಸಾವಿರ ವಸತಿ ಗೃಹಗಳು ಒಳಪಡುವುದರಿಂದ ಅಲ್ಲಿನ ನಿವಾಸಿಗಳಿಗೆ ಸ್ವಚ್ಚತೆ ಮತ್ತು ಪರಿಸರ ನೈರ್ಮಲ್ಯ ಕಾಪಾಡಲು ಅನುಕೂಲ ಕಲ್ಪಿಸುವಂತೆ ಕೇಂದ್ರ ಸರಕಾರದ ಸ್ವಚ್ಚ ಭಾರತ ಯೋಜನೆ ಹಾಗು ರಾಜ್ಯ ಸರಕಾರದ ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ಸ್ಥಳೀಯ ನಗರಸಭೆ ಆಡಳಿತ ಕ್ರಮ ಕೈಗೊಳ್ಳಲು ಮುಂದಾಗಿತ್ತು.

ಅದರಂತೆ ಅವಳಿ ಕಾರ್ಖಾನೆಗಳ ವ್ಯಾಪ್ತಿಯ ಚುನಾಯಿತ ಪ್ರತಿನಿಧಿಗಳು ನಗರ ಪ್ರದೇಶದ ನಿವಾಸಿಗಳಿಗೆ ನೀಡುವ ಸೌಲತ್ತಿನಂತೆ ಎರಡು ಕಾರ್ಖಾನೆಗಳ ವಸತಿ ಗೃಹಗಳಲ್ಲಿ ವಾಸವಾಗಿರುವ ನಾಗರೀಕರಿಗೆ ಅನುಕೂಲ ಕಲ್ಪಿಸಲು ಮನೆ-ಮನೆ ಕಸ ಸಂಗ್ರಹ ಯೋಜನೆ ಜಾರಿಗೆ ಒತ್ತಾಯಿಸಿತ್ತು.

ಈ ಯೋಜನೆಗೆ ತಗಲುವ ವಾಹನಗಳ ಹಾಗೂ ಸಿಬ್ಬಂದಿಗಳ ನಿರ್ವಹಣೆ ವೆಚ್ಚವನ್ನು ಜನರಿಂದಲೇ ಸಂಗ್ರಹಿಸುವ ನಿಂಬಂಧನೆ ಮೇರೆಗೆ ಯೋಜನೆಯನ್ನು ನಗರಸಭೆ ಜಾರಿಗೊಳಿಸಿತ್ತು. ನಗರ ವ್ಯಾಪ್ತಿಯ ಮನೆ, ಕಟ್ಟಡಗಳ ಖಾತೆದಾರರು ಪಾವತಿಸುವ ಕಂದಾಯದಲ್ಲಿ ಕಟ್ಟಡ, ಮನೆ ಅಳತೆಯ ಆಧಾರದಡಿ ನಿಗದಿ ಪಡಿಸಿದಂತೆ 60 ರೂ ಗಳನ್ನು ಜನರಿಂದ ಪಾವತಿ ಮಾಡಲಾಗುತ್ತಿದೆ. ಅದೇರೀತಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ವಸತಿ ಗೃಹಗಳಿಗೆ ಪ್ರತಿಮನೆಗಳಿಂದ ತಿಂಗಳಿಗೆ ಡಿಪಿಆರ್ ಪ್ರಕಾರ ತಲಾ ಮನೆಗೆ 80 ರೂ ಪಾವತಿಸುವಂತೆ ನಗರಸಭೆ ಕೋರಿತ್ತು.

ಆದರೆ ವಿಐಎಸ್‌ಎಲ್ ಅಧಿಕಾರಿಗಳು 60 ರೂ ನೀಡುವುದಾಗಿ ಒಡಂಬಡಿಕೆ ಮಾಡಿಕೊಂಡಿತ್ತೆಂದು ನಗರಸಭೆ ತಿಳಿಸಿದೆ. ಅದರಂತೆ ಪ್ರತಿನಿತ್ಯ ಬೆಳಿಗ್ಗೆ ವಸತಿಗೃಹಗಳಿಂದ ಪರಿಸರ ಸ್ವಚ್ಚತೆಯ ಧ್ವನಿವರ್ಧಕ ವಾಹನಗಳು ಕಸ ಸಂಗ್ರಹ ಮಾಡಿಕೊಳ್ಳುತ್ತಿದ್ದವು. ಜನರು ಈ ವಾಹನ ಬರುವ ನಿರೀಕ್ಷೆಯಲ್ಲಿ ಇರುತ್ತಿದ್ದರು. ಆದರೆ ವಿಐಎಸ್‌ಎಲ್ ಆಡಳಿತ ನಗರಸಭೆಗೆ ಕಳೆದ 13 ತಿಂಗಳಿಂದ ಅಂದಾಜು 31 ಲಕ್ಷ ರೂ ಬಾಕಿ ಪಾವತಿ ಮಾಡದಿರುವುದರಿಂದ ಹಾಗೂ ಅನೇಕ ಪತ್ರ ವ್ಯವಹಾರ ಮಾಡಿದ್ದರು ಸಹ ಉಪಯೋಗವಾಗದೆ ಇರುವುದರಿಂದ ಹಾಗು ನಿರ್ವಹಣೆಗೆ ಅನಾನುಕೂಲವಾಗಿರುವುದರಿಂದ ಜೂನ್ 1 ರಿಂದ ಕಸ ಸಂಗ್ರಹ ಕಾರ್ಯ ಸ್ಥಗಿತಗೊಳಿಸಲಾಗಿದೆ.

ಆದರೆ ಎಂಪಿಎಂ ನಗರಾಡಳಿತ ಇಲಾಖೆ ತನ್ನ ಸಿಬ್ಬಂದಿಗಳಿಂದ ಕಾರ್ಖಾನೆ ವ್ಯಾಪ್ತಿಯ ಸ್ವಚ್ಚತೆಗೆ ಮುಂದಾಗಿರುವಾಗ ನಗರಸಭೆಯಿಂದ ಕಸ ಸಂಗ್ರಹಣೆ ಮಾಡುವ ಅಗತ್ಯವಿಲ್ಲವೆಂದು ಹೇಳಿತ್ತಾದರೂ ನಗರಸಭೆಯು ಅಧಿಕಾರಿಗಳೊಂದಿಗೆ ಸ್ಪಷ್ಟ ಮಾತುಕತೆ ನಡೆಸಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಭಾಗದ ನಗರಸಭಾ ಸದಸ್ಯರು ಸ್ವಪ್ರೇರಣೆಯಿಂದ ಉಚಿತವಾಗಿ ಕಸ ಸಂಗ್ರಹಣೆ ಮಾಡಿಸುತ್ತಿದ್ದಾರೆಂದು ಕಾರ್ಖಾನೆಯ ಅಧಿಕಾರಿಗಳು ತಿಳಿದುಕೊಂಡಿದ್ದರು.

ನಗರಸಭೆ ಮಾತ್ರ ಕಸ ಸಂಗ್ರಹಣೆಯ ಸುಮಾರು 5 ಲಕ್ಷ ರೂ.ಗಳಿಗೂ ಅಧಿಕ ಬಾಕಿ ಪಾವತಿಸಬೇಕೆಂದು ಹೇಳಿಕೊಳ್ಳುತ್ತಿದೆ. ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದಾಗಿ ಕಸ ಸಂಗ್ರಹಣಾ ಕಾರ್ಯ ಸ್ಥಗಿತಗೊಳಿಸಲಾಗಿದೆ. ನಗರಸಭೆ ಬಾಕಿ ಪಾವತಿಗಾಗಿ ಆಡಳಿತ ಮಂಡಳಿಯೊಂದಿಗೆ ಪತ್ರ ವ್ಯವಹಾರದಲ್ಲಿ ತೊಡಗಿದೆ.

ಮನೆ-ಮನೆಯ ಕಸ ಸಂಗ್ರಹಣೆ ಸ್ಥಗಿತಗೊಂಡಿರುವುದರಿಂದ ಇದನ್ನೆ ಅವಲಂಬಿಸಿದ್ದ ನಾಗರಿಕರು ನಿರಾಶೆಗೊಂಡು ಪೇಚಾಟದಲ್ಲಿ ತೊಡಗಿದ್ದಾರೆ. ಅಲ್ಲದೆ ಕಸ ಮತ್ತು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಾ ಕಸದ ರಾಶಿಗಳು ಕಂಡು ಬರುತ್ತಿದೆ. ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿದೆ. ಹಂದಿ, ನಾಯಿಗಳ ಹಾವಳಿಯಿಂದ ಕಸ ಕಡ್ಡಿಯ ತ್ಯಾಜ್ಯಗಳ ದುರ್ನಾತ ಹರಡುತ್ತಿದೆ. ಕೇಂದ್ರ ಸರಕಾರದ ಸ್ವಚ್ಚ ಭಾರತ್ ಅಭಿಯಾನ ಯೋಜನೆಗೆ ನಗರಸಭೆ, ವಿಐಎಸ್‌ಎಲ್, ಎಂಪಿಎಂ ಆಡಳಿತಗಳು ವಿರುದ್ದವಾಗಿ ವರ್ತಿಸುತ್ತಿರುವುದಾಗಿ ನಾಗರೀಕರ ಅಪಾದನೆಯಾಗಿದೆ.

 

ನಗರಸಭೆ ಅಧಿಕಾರಿಗಳ ಸ್ಪಷ್ಟನೆ

ನಗರಸಭೆ ಆಡಳಿತವು ಕಳೆದ ವರ್ಷದಿಂದ ಮನೆ-ಮನೆ ಕಸ ಸಂಗ್ರಹ ಕಾರ್ಯವನ್ನು ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆ ವ್ಯಾಪ್ತಿಯ ವಸತಿ ಗೃಹಗಳಿಗೂ ವಿಸ್ತರಿಸಿದೆ. ಡಿಪಿಆರ್ ಆದೇಶದಂತೆ ತಲಾ ಒಂದು ಮನೆಯಿಂದ 80 ರೂ ಸಂಗ್ರಹ ಮಾಡುವಂತೆ ಕೋರಲಾಗಿದೆ. ಆದರೆ ವಿಐಎಸ್‌ಎಲ್ ಆಡಳಿತ 60 ರೂ ನೀಡುವುದಾಗಿ ಹೇಳಿ 5 ಸಾವಿರ ಮನೆಗಳ 37 ಲಕ್ಷ ರೂ ಬಾಕಿ ಉಳಿಸಿಕೊಂಡಿದೆ. ಪತ್ರ ವ್ಯವಹಾರ ಮಾಡಿದ್ದರು ಸಹ ನಿರ್ಲಕ್ಷಧೋರಣೆ ತಾಳಿದೆ.
ಅದೇರೀತಿ ಎಂಪಿಎಂ ಕಾರ್ಖಾನೆಯ 2 ಸಾವಿರ ವಸತಿ ಗೃಹಗಳ ಸುಮಾರು 6 ಲಕ್ಷ ರೂಗಳಿಗೂ ಅಧಿಕ ಬಾಕಿ ಪಾವತಿಸಿರುವುದಿಲ್ಲ. ಕೇಳಿದರೆ ನಮ್ಮದೆ ನಗರಾಡಳಿತ ಇಲಾಖೆ ಇದೆ. ಸಿಬ್ಬಂದಿಯೂ ಇದ್ದಾರೆ. ಕಾರ್ಖಾನೆ ಮುಚ್ಚಲ್ಪಟ್ಟಿರುವುದರಿಂದ ವಾರ್ಡ್ ನಂ: 19, 28, 32, 33 ಮತ್ತು 34 ರ ನಿವಾಸಿಗಳ ಕಾರ್ಮಿಕ ಕುಟುಂಬಗಳಿಂದ ಹಣ ಪಾವತಿಗೆ ತೊಂದರೆಯಾಗಿ ನಗರಸಭೆಯ ಕಸ ಸಂಗ್ರಹಣಾ ಕಾರ್ಯ ಅಗತ್ಯವಿಲ್ಲವೆಂದು ಹೇಳಿರುವುದರಿಂದ ಜೂ: 1 ರಿಂದ ಅವಳಿ ಕಾರ್ಖಾನೆಗಳ ಮನೆಗಳಿಂದ ಕಸ ಸಂಗ್ರಹಣೆ ಕಾರ್ಯ ಸ್ಥಗಿತಗೊಳಿಸಲಾಗಿದೆ. ಅದೇ ಸಮಯದಲ್ಲಿ ಅವಳಿ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳಲ್ಲಿ ಕಸ ಸಂಗ್ರಹಣೆ ಕಾರ್ಯ ಮುಂದುವರೆಸಲಾಗಿದೆ.
-ಎಚ್.ವಿ. ಹರೀಶ್, ಪೌರಾಯುಕ್ತ ಮತ್ತು ರುದ್ರೇಗೌಡ, ಪರಿಸರ ಇಂಜಿನಿಯರ್

 

ವಿಐಎಸ್‌ಎಲ್ ನಗರಾಡಳಿತಾಧಿಕಾರಿ ಹೇಳಿಕೆ:

ನಗರಸಭೆಯು ವಿಐಎಸ್‌ಎಲ್ ಕಾರ್ಖಾನೆ ವ್ಯಾಪ್ತಿಯ ವಸತಿ ಗೃಹಗಳಿಂದ ಕಸ ಸಂಗ್ರಹಣೆ ಮಾಡುತ್ತಿದೆ. ಇದಕ್ಕೆ ತಗಲುವ ವೆಚ್ಚದ ಬಾಬ್ತು ನಗರಸಭೆಗೆ ಪಾವತಿಸಬೇಕಾಗಿದೆ. ಪ್ರತಿ ಮನೆಗೆ ನಿಗಧಿ ಪಡಿಸಿರುವ ಹಣದ ವಿಚಾರದಲ್ಲಿ ನಗರಸಭೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೆ ಪೌರಾಯುಕ್ತ ಬಳಿ ಚರ್ಚೆ ನಡೆದು ಬಗೆ ಹರಿಸಲಾಗುತ್ತದೆ.
-ರವಿಚಂದ್ರನ್, ನಗರಾಡಳಿತಾಧಿಕಾರಿ

ಎಂಪಿಎಂ ನಗರಾಡಳಿತಾಧಿಕಾರಿ ವಿವರಣೆ:

ನಗರಸಭೆಯವರನ್ನು ಎಂಪಿಎಂ ಆಡಳಿತವು ಕಸ ಸಂಗ್ರಹಿಸುವಂತೆ ಕೋರಿರುವುದಿಲ್ಲ. ನಮಗೆ ಅದರ ಅವಶ್ಯಕತೆಯು ಇರುವುದಿಲ್ಲ. ನಮ್ಮದೆ ಆದಂತಹ ನಗರಾಡಳಿತ ಇಲಾಖೆ ಸಿಬ್ಬಂದಿಗಳು ಪ್ರತಿನಿತ್ಯ ಸ್ವಚ್ಚತೆಯಲ್ಲಿ ತೊಡಗಿದ್ದಾರೆ. ಕೇವಲ ಕಸ ಸಂಗ್ರಹಣೆಯಿಂದ ಮಾತ್ರ ಸ್ವಚ್ಚತೆಯಾಗುವುದಿಲ್ಲ. ಸಾಕಷ್ಟು ಸಮಸ್ಯೆಗಳಿವೆ. ನಗರಸಭೆ ಮತ್ತು ಎಂಪಿಎಂ ವಿಚಾರಗಳು ನ್ಯಾಯಾಲಯದಲ್ಲಿ ನಡೆಯುತ್ತಿವೆ. ಕಾರ್ಖಾನೆ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪಕ ನಿರ್ದೇಶಕರು ಕೈಗೊಳ್ಳುವ ತೀರ್ಮಾನದಂತೆ ಕ್ರಮ ಕೈಗೊಳ್ಳಲಾಗುವುದು.
ಜಿ.ಎಸ್.ಸತೀಶ್, ನಗರಾಡಳಿತಾಧಿಕಾರಿ ಹಾಗೂ ಹಿರಿಯ ವ್ಯವಸ್ಥಾಪಕ

ನಗರಸಭಾ ಸದಸ್ಯರ ಹೇಳಿಕೆಗಳು

ವಿಐಎಸ್‌ಎಲ್ ವ್ಯಾಪ್ತಿಯ ನಗರಸಭೆ ಸದಸ್ಯೆ ಎಂ.ಎಸ್.ಸುಧಾಮಣಿ ಹೇಳುವಂತೆ, ಸ್ವಚ್ಚ ಭಾರತ್ ಯೋಜನೆಯು ನಗರಕ್ಕೊಂದು ಕಾರ್ಖಾನೆ ವ್ಯಾಪ್ತಿಗೊಂದು ಬೇರೆ ಬೇರೆ ಇರುವುದಿಲ್ಲ. ಎಲ್ಲರ ಆರೋಗ್ಯದೃಷ್ಟಿಯಿಂದ ನಗರಸಭೆ ಸ್ವಚ್ಚತೆಗೆ ಒತ್ತು ನೀಡಬೇಕು. ನಗರಸಭೆ ವ್ಯಾಪ್ತಿಗೆ ಸೇರಿರುವುದರಿಂದ ಪೌರಾಯುಕ್ತರು ತಾರತಮ್ಯ ತೋರದೆ ಕೊಳಚೆ ಪ್ರದೇಶಗಳಿಗೆ ಸೌಲಭ್ಯ ನೀಡಿದಂತೆ ಯೋಜನೆ ಜನರಿಗೆ ಅರ್ಪಿಸಬೇಕು ಎಂದರು.

ಎಂಪಿಎಂ ವ್ಯಾಪ್ತಿಯ ಸದಸ್ಯ ಮಹೇಶ್ ಮಾತನಾಡಿ, ಎಂಪಿಎಂ ನಗರಾಡಳಿತ ಇಲಾಖೆಯಲ್ಲಿ ನಿವೃತ್ತಿಯಾದ ಅಧಿಕಾರಿ ಸತೀಶ್ ಇಂದಿಗೂ ಕರ್ತವ್ಯದಲ್ಲಿ ಮುಂದುವರೆದಿದ್ದಾರೆ. ನಗರಸಭಾ ಪೌರಾಯುಕ್ತರು ಒಂದು ಮನೆಗೆ 80 ರೂ ಪಾವತಿಸುವಂತೆ ಹೇಳಿರುವುದರಿಂದ ಆಡಳಿತ ನಿರಾಕರಿಸಿದೆ. ಇಲ್ಲಿನ ವಾಸಿಗಳು ಮತದಾರರಾಗಿದ್ದಾರೆ. ಎಲ್ಲರಂತೆ ಸೌಕರ್ಯ ಕಲ್ಪಿಸುವುದು ಇಲಾಖೆಯ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

(ವಿಶೇಷ ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

Tags: BhadravathiBhadravathi CMCMPMShivamoggaVISLನಗರಸಭೆ
Share196Tweet123Send
Previous Post

ವೈರಲ್ ಆಗಿದೆ ಆಚಾರ್ಯರ ಮತ್ತೊಂದು ಹನುಮಾನ್ ಚಿತ್ರ

Next Post

ಐ ಲವ್ ಯೂ ಚಿತ್ರಕ್ಕೆ ನೈಸ್ ರಸ್ತೆಯಲ್ಲಿ ಭರ್ಜರಿ ಶೂಟಿಂಗ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಐ ಲವ್ ಯೂ ಚಿತ್ರಕ್ಕೆ ನೈಸ್ ರಸ್ತೆಯಲ್ಲಿ ಭರ್ಜರಿ ಶೂಟಿಂಗ್

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಮೈಲಿಗಲ್ಲು | `ಮೈಯಾಸ್ಥೆನಿಕ್ ಕ್ರೈಸಿಸ್’ ಯಶಸ್ವಿ | ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯರು

ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಮೈಲಿಗಲ್ಲು | `ಮೈಯಾಸ್ಥೆನಿಕ್ ಕ್ರೈಸಿಸ್’ ಯಶಸ್ವಿ | ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯರು

March 17, 2026
ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ | ಕಾರಣವೇನು?

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ | ಕಾರಣವೇನು?

March 17, 2026
ಯುಗಾದಿ | ಯಶವಂತಪುರ-ಹೊಸಪೇಟೆ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು

ಯುಗಾದಿ | ಯಶವಂತಪುರ-ಹೊಸಪೇಟೆ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು

March 16, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಬೆಂಗಳೂರು-ಕಣ್ಣೂರು ಎಕ್ಸ್’ಪ್ರೆಸ್ ಕೋಜಿಕೋಡ್’ವರೆಗೆ ವಿಸ್ತರಣೆ

March 16, 2026
ಕುಂದಾಪುರ ಕನ್ನಡದ ಅಪ್ಪಟ ಕಲಾ ರತ್ನ: ನಗುವಿನ ಸರದಾರ ‘ನ್ಯೆಗಿ ನಾಗಣ್ಣ’

ಕುಂದಾಪುರ ಕನ್ನಡದ ಅಪ್ಪಟ ಕಲಾ ರತ್ನ: ನಗುವಿನ ಸರದಾರ ‘ನ್ಯೆಗಿ ನಾಗಣ್ಣ’

March 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL