ಪೂನಾ: ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳು, ಆರ್ಯ ಚಾಣಕ್ಯ ಅವರ ಚಿಂತನೆಗಳಿಗೂ ಬಹುತೇಕ ಸಾಮ್ಯತೆಯಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿಶ್ಲೇಷಣೆ ಮಾಡಿದ್ದಾರೆ.
ಪೂನಾದ ಕಾರ್ಯಕ್ರಮವೊಂದರಲ್ಲಿ ಆರ್ಯ ಚಾಣಕ್ಯ ಜೀವನ್ ಔರ್ ಕಾರ್ಯ್: ಆಕ್ ಕೆ ಸಂದರ್ಭ್ ಮೈನ್ ಎಂಬ ವಿಚಾರದ ಕುರಿತಾಗಿ ಅವರು ಮಾತನಾಡುವ ವೇಳೆ ಈ ರೀತಿ ಹೇಳಿದ್ದಾರೆ.
ಆರ್ಯ ಚಾಣಕ್ಯನ ಆಡಳಿತಾತ್ಮಕ ಚಿಂತನೆ ಹಾಗೂ ನೀತಿಗಳು ಸಾಮ್ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದ್ದವು. ಅದೇ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆ ಹಾಗೂ ನೀತಿಗಳೂ ಸಹ ಇದ್ದು, ಇದು ದೇಶದ ಅಭಿವೃದ್ಧಿಗೆ ಪೂರಕ ಹಾಗೂ ಹಿತವಾಗಿವೆ ಎಂದಿದ್ದಾರೆ.
Discussion about this post