ಸೊರಬ: ಪಟ್ಟಣದ ಯುವ ಬ್ರಿಗೇಡ್ ಪಾರಂಪರಿಕ ಮೌಲ್ಯವುಳ್ಳ ಕೊಳ, ಕಲ್ಯಾಣಿಯಂತಹ ನೀರಿನಾಶ್ರಯದ ಉಳಿವಿಗೆ ಮುಂದಾಗಿದ್ದು, ಪಟ್ಟಣದ ಆಜುಬಾಜಿನಲ್ಲಿರುವ ಹಲವಾರು ಕಲ್ಯಾಣೀಗಳನ್ನು ಸ್ವಚ್ಛಗೊಳಿಸಿದ್ದು, ಇದೀಗ ಹಳೆಸೊರಬ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದ್ದಾರೆ.
ದೇವಸ್ಥಾನದಿಂದ ಕಲ್ಯಾಣೀಗೆ ಹೋಗುವ ಮಾರ್ಗವನ್ನು ಒದಗಿಸಿಕೊಟ್ಟಿದ್ದಾರೆ. ಈ ಕಲ್ಯಾಣಿ ಕೆಳದಿ ಅರಸರ ಕಾಲದ್ದಾಗಿದ್ದು, ಪುನಃ ತನ್ನ ಮೂಲ ರೂಪವನ್ನು ಪಡೆದಿದೆ.
ಹೆಸರಿನ ಮೂಲಕ ಪ್ರಚಾರ ಬಯಸದ ಇವರ ತಂಡ, ತಮ್ಮ ಕಾರ್ಯವನ್ನಷ್ಟೆ ಬಿಂಬಿಸಿ, ಇದರಿಂದ ಇಂತಹ ಸ್ವಚ್ಛತಾ ಕಾರ್ಯದ ಆಸಕ್ತಿ ಇನ್ನಷ್ಟು ಜನರಿಗೆ ಬರಲಿ ಎಂದಿದ್ದು, ವೈಯುಕ್ತಿಕ ಪ್ರಚಾರ ಬಯಸದ ಇವರ ಕಾರ್ಯಸಾಧನೆಯನ್ನು ಇತಿಹಾಸಕ್ತರು, ಪರಿಸರಾಸಕ್ತರು ಶ್ಲಾಘಿಸಿದ್ದಾರೆ.
(ವರದಿ: ಮಧುರಾಮ್, ಸೊರಬ)
Discussion about this post