Read - < 1 minute
ನವದೆಹಲಿ: ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಎನ್ಡಿಎ ಬೆಂಬಲಿತ ಅಭ್ಯರ್ಥಿ ಹರಿವಂಶ್ ನಾರಾಯಣ ಸಿಂಗ್ ಅವರು ಜಯಗಳಿಸಿದ್ದು, ಯುಪಿಎ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಯಾರು ಈ ಹರಿವಂಶ್ ನಾರಾಯಣ ಸಿಂಗ್ ಎಂಬ ಕುರಿತಾಗಿ ಇಲ್ಲಿವೆ ಕೆಲವು ಮಾಹಿತಿ:
- ಉತ್ತರ ಪ್ರದೇಶದ ಬಲಿಯಾದ ಹರಿವಂಶ್ ಅವರು ಜನಿಸಿದ್ದು 1956ರ ಜೂನ್ 30ರಂದು
- ರಾಂಚಿ ನಿವಾಸಿಯಾದ ಇವರು ಬನಾರಸ್ ಹಿಂದೂ ವಿವಿಯಿಂದ ಪದವಿ ಪಡೆದಿದ್ದಾರೆ
- ಮಧ್ಯಪ್ರದೇಶದಲ್ಲಿ ಜೆಟಿಯು ಪಕ್ಷದಿಂದ ಆಯ್ಕೆಯಾದ ಮೊಟ್ಟ ಮೊದಲ ಸಂಸದ
- ವಿಶ್ರಾಂತ ಪತ್ರಕರ್ತ ಹಾಗೂ ಪ್ರಭಾತ್ ಖಬರ್ ಎಂಬ ಹಿಂದೂ ಪತ್ರಿಕೆಯ ವಿಶ್ರಾಂತ ಸಂಪಾದಕ
- ಮಾಜಿ ಪ್ರಧಾನಿ ಚಂದ್ರಶೇಖರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದರು
Discussion about this post