ಭದ್ರಾವತಿ: ಭದ್ರಾ ನದಿ ತುಂಬಿ ಹರಿಯುತ್ತಿರುವ ಬೆನ್ನಲ್ಲೇ ನಗರದಲ್ಲಿ ಭಾರೀ ಅನಾಹುತ ಸೃಷ್ಠಿಯಾಗಿದ್ದು, ಇಡಿಯ ನಗರದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಬಿಎಚ್ ರಸ್ತೆಯಲ್ಲಿರುವ ಕಾರ್ಪೊರೇಶನ್ ಬ್ಯಾಂಕ್ ಬಳಿಯಿರುವ ಪೆಟ್ರೋಲ್ ಬಂಕ್ಗೆ ಮಧ್ಯಾಹ್ನವೇ ನೀರು ನುಗ್ಗಿದ್ದು, ಸಂಜೆ ವೇಳೆಗೆ ನೀರು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿತ್ತು.
ಇದರ ಪರಿಣಾಮ ಸಂಜೆ ವೇಳೆಗೆ ಇಲ್ಲಿನ ಬಂಕ್ನಿಂದ ಭಾರೀ ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸೋರಿಕೆಯಾಗಿ, ಇಲ್ಲಿ ನಿಂತಿರುವ ನೆರೆ ನೀರಿನೊಂದಿಗೆ ಬೆರೆತಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ.
ಇಡಿಯ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವಾಸನೆ ಹರಡಿದ್ದು, ಎಲ್ಲಿ ಸ್ಫೋಟಗೊಳ್ಳುವುದೋ ಎಂಬ ಆತಂಕ ಮೂಡಿದೆ.
ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಭಂದಿಗಳನ್ನು ನಿಯೋಜನೆ ಮಾಡಲಾಗಿದ್ದು, ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಆರ್ಎಸ್ಎಸ್ ಕಾರ್ಯಕರ್ತರ ಸೇವೆ
ಪೆಟ್ರೋಲ್ ಹಾಗೂ ಡೀಸೆಲ್ ಸೋರಿಕೆಯಾಗಿ ಇಲ್ಲಿನ ನೆರೆ ನೀರಿನೊಂದಿಗೆ ಭಾರೀ ಪ್ರಮಾಣದಲ್ಲಿ ಸೇರಿರುವ ಹಿನ್ನೆಲೆಯಲ್ಲಿ ಇಲ್ಲಿ ಯಾರಿಗೂ ಮೊಬೈಲ್ ಬಳಸಲು ಹಾಗೂ ವಾಹನ ಸಂಚರಿಸಲು ನಿರ್ಬಂಧಿಸಲಾಗಿದೆ.
ಇಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸದೇ ಇರದಂತೆ ತಡೆಯುವ ಕಾರ್ಯದ ಭಾಗವಾಗಿ ಇಲ್ಲಿ ನೆರೆದಿರುವ ಜನರನ್ನು ಚದುರಿಸುವ ಹಾಗೂ ತಿಳಿ ಹೇಳಿ ದೂರ ಕಳುಹಿಸುವ ಕಾರ್ಯಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ದ ಕಾರ್ಯಕರ್ತರು ಕೈಜೋಡಿಸಿದ್ದಾರೆ.
ಇಲ್ಲಿ ನಿಂತಿರುವ ಪೆಟ್ರೋಲ್ ಮಿಶ್ರಿತ ನೀರಿನಲ್ಲಿಯೇ ನಿಂತಿರುವ ಸುಮಾರು 15ರಿಂದ 20 ಕಾರ್ಯಕರ್ತರ ಪೊಲೀಸರಂತೆಯೇ ಶ್ರಮವಹಿಸಿ ಭದ್ರತಾ ಕಾರ್ಯ ಮಾಡುತ್ತಿದ್ದಾರೆ.
ಸಂಘ ಪರಿವಾರ ಕಲಿಸಿದ ನಮಸ್ತೆ ಸದಾ ವತ್ಸಲೇ ಪಾಠ ಇಂತಹ ಕಾರ್ಯಕ್ಕೆ ಈ ಯುವಕರನ್ನು ಪ್ರೇರೇಪಿಸಿದೆ.
ಭದ್ರಾವತಿಯ ಈ ಯುವಕರ ಶ್ರಮವನ್ನು ಕಲ್ಪ ನ್ಯೂಸ್ ಮನದುಂಬಿ ಅಭಿನಂದಿಸುತ್ತದೆ.
Discussion about this post