Monday, June 30, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮೋದಿ ವಿರುದ್ಧ ಬಂದ್ ಮಾಡಿದ್ದು ಸರಿ, ಧನ್ಯವಾದ ಕಾಂಗ್ರೆಸ್‌ಗೆ: ಏಕೆಂದರೆ?

September 11, 2018
in Special Articles
0 0
0
Share on facebookShare on TwitterWhatsapp
Read - 3 minutes

ಹೌದು… ತೈಲ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್‌ಗೆ ಕರೆ ನೀಡಿದ್ದ ಕಾಂಗ್ರೆಸ್ ಹಾಗೂ ಇತರೇ ಪಕ್ಷಗಳಿಗೆ ಹಾಗೂ ಅತ್ಯಂತ ಪ್ರಮುಖವಾಗಿ ಜೆಡಿಎಸ್‌ಗೆ ಅನಂತಾನಂತ ಧನ್ಯವಾದಗಳು, ಸಾಷ್ಟಾಂಗ ಪ್ರಣಾಮಗಳು…

ಬೆಳಕು ಎನ್ನುವುದಕ್ಕೆ ಬೆಲೆ ಕತ್ತಲೆ ಕಂಡಾಗ ಮಾತ್ರ, ಅಮೃತ ಎನ್ನುವುದಕ್ಕೆ ಬೆಲೆ ವಿಷವಿದ್ದಾಗ ಮಾತ್ರ, ಚಿನ್ನ ಎನ್ನುವುದಕ್ಕೆ ಬೆಲೆ ತುಕ್ಕು ಹಿಡಿದ ಕಬ್ಬಿಣವಿದ್ದಾಗ ಮಾತ್ರ, ಹಾಗೆಯೇ ಮೋದಿ ಎಂಬ ಶಕ್ತಿಗೆ ಬೆಲೆ ಅವರ ಹಿಂಬಾಲಕರಿಂದಲ್ಲ ಅವರ ವಿರೋಧಿಗಳಿಂದಲೇ.

ಯಾವಾಗ ದೇಶದಲ್ಲಿ ಭ್ರಷ್ಟಾಚಾರ, ದಬ್ಬಾಳಿಕೆ, ದೇಶದ್ರೋಹಿಗಳಿಗೆ ಸಹಕಾರಗಳು ಮಿತಿ ಮೀರಿದವೋ ಆಗ ಸಂಕಷ್ಟದಲ್ಲಿದ್ದ ತಾಯಿ ಭಾರತಿಯನ್ನು ರಕ್ಷಿಸಲು ಪ್ರಜ್ವಲಿಸಿ ಬಂದಿದ್ದೇ ನರೇಂದ್ರ ದಾಮೋದರ ದಾಸ್ ಮೋದಿ…

2014ರ ನಂತರ ಭಾರತದ ವರ್ಚಸ್ಸು ಬದಲಾಗುತ್ತಾ ಹೋದಂತೆ, ಭಾರತ ವಿಶ್ವಗುರುವಾಗುವತ್ತ ದಾಪುಗಾಲು ಇಡುತ್ತಾ, ನಮ್ಮೆಲ್ಲರ ಪ್ರಧಾನ ಸೇವಕ ವಿಶ್ವನಾಯಕನಾಗುವತ್ತ ವಿಜೃಂಭಿಸುತ್ತಾ ಇರುವುದು ಕಾಂಗ್ರೆಸ್ ಹಾಗೂ ಪಟಾಲಂ ಪಕ್ಷಗಳಿಗೆ ಕೆಂಡದ ಮೇಲೆ ನಿಂತಂತಾಗಿದೆ. ಆದರೆ, ಮೋದಿ ವಿರುದ್ದ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲು ಯಾವುದೇ ಹಗರಣ ಇಲ್ಲದ್ದಕ್ಕೆ ಈ ದುಷ್ಟಕೂಟ ಆರಿಸಿಕೊಂಡಿದ್ದೇ ಪೆಟ್ರೋಲ್ ಬೆಲೆ ಏರಿಕೆಯ ನೆಪ ಹೂಡಿ, ಭಾರತ್ ಬಂದ್ ಆಚರಣೆ ಮಾಡುವುದು.

ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ವಿರುದ್ಧವಾಗಿ ಕೋಟ್ಯಂತರ ಮೋದಿ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಬಾಯಿಗೆ ಬಂದಂತೆ ದೂರುತ್ತಿದ್ದಾರೆ. ನಾನು ಆತ್ಮಸಾಕ್ಷಿಯಾಗಿ ಹೇಳುತ್ತೇನೆ ‘ನೀವು ನಿಜಕ್ಕೂ ಮೋದಿ ಭಕ್ತರಾ? ಹಾಗಿದ್ದರೆ ಭಾರತ್ ಬಂದ್ ಮಾಡಿದ್ದಕ್ಕೆ ಕಾಂಗ್ರೆಸ್‌ನ್ನು ಅಭಿನಂದಿಸಿ’…

ಯಾಕೆ ಅಭಿನಂದಿಸಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿತೇ? ಉತ್ತರ ಮುಂದಿದೆ ಓದಿ….

  • ಮೊಟ್ಟ ಮೊದಲನೆಯದಾಗಿ ಕಾಂಗ್ರೆಸ್ ಕರೆ ನೀಡಿದ್ದ ಬಂದ್ ದೇಶದಲ್ಲಿ ಅರಾಜಕತೆ ಸೃಷ್ಠಿಸಿ, ಮೋದಿಯನ್ನು ಹಣಿಯುವುದೇ ಆಗಿತ್ತು ಎನ್ನುವುದು ಅರಿತಿದ್ದ ಈ ದೇಶದ ಜನ ತಾವಾಗಿಯೇ ಬಂದ್‌ಗೆ ವಾರಕ್ಕೂ ಮೊದಲೇ ವಿರೋಧಿಸಿದ್ದರು. ಜನರ ವಿರೋಧವನ್ನೇ ವಿರೋಧಿಸಿ ಬಂದ್ ಮಾಡಿ ತೊಂದರೆ ಮಾಡಿದ್ದರಿಂದ ಕಾಂಗ್ರೆಸ್ ತನ್ನ ಗೋಮುಖವ್ಯಾಘ್ರತನವನ್ನು ಮತ್ತೊಮ್ಮೆ ದೇಶಕ್ಕೆ ತೋರಿಸಿದೆ. ಇದು ಯಾರಿಗೆ ಲಾಭ ಹೇಳಿ?
  • ರಾಜ್ಯದಲ್ಲಿ ಬಂದ್‌ಗೆ ವ್ಯಾಪಕ ವಿರೋಧವಿತ್ತು. ಹೀಗಾಗಿ, ಹೇಗಾದರೂ ಮಾಡಿ ಯಶಸ್ವಿ ಮಾಡಿಸಲೇಬೇಕು ಎಂದು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ನೀಡಿಸಿದ್ದನ್ನು ರಾಜ್ಯವೇ ನೋಡಿ ಛೀಮಾರಿ ಹಾಕಿದೆ. ಇದು ಯಾರಿಗೆ ಲಾಭ ಹೇಳಿ?
  • ಇನ್ನು, ಹಾನಿಯಾಗಬಹುದು ಎಂಬ ಕಾರಣಕ್ಕೆ ಸಾರಿಗೆ ನಿಗಮದ ಬಸ್‌ಗೆ ರಸ್ತೆಗೆ ಇಳಿಯಲಿಲ್ಲ. ಇದರಿಂದ ಜನರಿಗೆ ತೊಂದರೆಯಾಗಿದೆ. ಇದು ಯಾರಿಗೆ ಲಾಭ ಹೇಳಿ?
  • ಕಾಂಗ್ರೆಸ್‌ನ ಬಲವಂತದ ಬಂದ್‌ನಿಂದಾಗಿ ರಾಜ್ಯ ಸರ್ಕಾರಕ್ಕೆ 190 ಕೋಟಿ ರೂ.(ರಾಜ್ಯದ ಒಟ್ಟಾರೆ ನಷ್ಟ 3400 ಕೋಟಿ ಎನ್ನಲಾಗಿದೆ) ಪ್ರತ್ಯಕ್ಷ ಹಾಗೂ ಪರೋಕ್ಷ ನಷ್ಟವಾಗಿದ್ದನ್ನು ಕರುನಾಡಿಗರು ನೋಡಿದ್ದಾರೆ. ಇದು ಯಾರಿಗೆ ಲಾಭ ಹೇಳಿ?
  • ಬಂದ್ ವೇಳೆ 8 ಸಾವಿರಕ್ಕೂ ಅಧಿಕ ಕಾಂಗ್ರೆಸ್ ಗೂಂಡಾಗಳನ್ನು ಪೊಲೀಸರು ಬಂಧಿಸಿದ್ದಕ್ಕೆ ಹಲವು ರಾಜ್ಯಗಳು ಸಾಕ್ಷಿಯಾಗಿವೆ. ಈ ಘಟನೆ ಯಾರಿಗೆ ಲಾಭ ಹೇಳಿ?
  • ಬಂದ್‌ಗಿಂತಲೂ ಮುನ್ನ ದುಡ್ಡು ಕೊಟ್ಟು ಕರೆತಂದಿದ್ದ ಜನರು ಬಂದ್‌ಗೂ ಮುನ್ನ ಕುಡಿದು ಹಾವಳಿ ಎಬ್ಬಿಸಿದ್ದನ್ನು ದೇಶವೇ ನೋಡಿದೆ. ಇದರ ಲಾಭ ಯಾರಿಗೆ ಹೇಳಿ?
  • ರಾಜ್ಯದ ಹಲವು ಕಡೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಕರಾವಳಿ ಭಾಗದಲ್ಲಿ ಬಡ ವ್ಯಾಪಾರಿಗಳ ಪದಾರ್ಥಗಳನ್ನು ಬಂದ್ ಹೆಸರಿನಲ್ಲಿ ಬೀದಿಗೆ ಚೆಲ್ಲಿ ಗೂಂಡಾಗಿರಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರದರ್ಶಿಸಿದರು. ಇದರ ಲಾಭ ಯಾರಿಗೆ ಹೇಳಿ?
  • ಬಿಹಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಂಬುಲೆನ್‌ಸ್ ತಡೆದಿದ್ದರಿಂದ 2 ವರ್ಷದ ಬಾಲಕಿ ಬಲಿಯಾಗಿದ್ದಕ್ಕೆ ಇಡಿಯ ದೇಶವೇ ಕಣ್ಣೀರಿಟ್ಟು, ಕಾಂಗಿ ಗೂಂಡಾಗಳಿಗೆ ಛೀಮಾರಿ ಹಾಕಿದೆ. ಇದರ ಲಾಭ ಯಾರಿಗೆ ಹೇಳಿ?
  • ಈ ಪ್ರಾಮಾಣಿಕ ವ್ಯಾಪಾರಿಗಳ ಆಹಾರವನ್ನು ಬೀದಿಗೆ ಚೆಲ್ಲಿ ರಾಕ್ಷಸೀ ಪ್ರವೃತ್ತಿ ಪ್ರದರ್ಶಿಸಿದ ಕಾಂಗಿಗಳ ಕೃತ್ಯ ಯಾರಿಗೆ ಲಾಭ ಹೇಳಿ?

  • ಈ ಕೆಳಗಿನ ಚಿತ್ರ ಹಾಗೂ ವೀಡಿಯೋಗಳನ್ನು ನೋಡಿ. ಇದರ ಲಾಭ ಯಾರಿಗೆ ಹೇಳಿ?



ಇಷ್ಟೆಲ್ಲಾ ಓದಿದಿರಿ, ನೋಡಿದಿರಲ್ಲ? ಈಗ ಹೇಳಿ ಇದರ ಲಾಭ ಯಾರಿಗೆ? ಘಂಟಾಘೋಷವಾಗಿ ಹೇಳುತ್ತೇನೆ ಇದರ ಲಾಭ ನರೇಂದ್ರ ದಾಮೋದರ ದಾಸ್ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ನಮ್ಮೆಲ್ಲರ ಪ್ರಯತ್ನಕ್ಕೆ ಲಾಭವೇ ಹೊರತೂ ಕಾಂಗ್ರೆಸ್‌ಗಲ್ಲ…

ಕೆರೆ ಮೇಲೆ ಮುನಿಸಿಕೊಂಡು ಅಂಡು ತೊಳೆದುಕೊಳ್ಳದೇ ಕುಳಿತರೆ ನಾರುವುದು ಯಾರದ್ದು? ಹಾಗೆಯೇ, ಪ್ರತಿಬಾರಿಯೂ ಮುಠ್ಠಾಳತನವನ್ನೇ ಪ್ರದರ್ಶನ ಮಾಡುವ ಕಾಂಗ್ರೆಸ್ ಮೋದಿ ಮೇಲಿನ ಜಿದ್ದಿಗೆ ತನ್ನ ಬುಡಕ್ಕೆ ತಾನೇ ಬೆಂಕಿ ಇಟ್ಟುಕೊಂಡಿದೆ.

ಬಂದ್ ಮಾಡುವುದು ಕಾಂಗ್ರೆಸ್‌ನ ಉದ್ದೇಶವಾಗಿರಲಿಲ್ಲ. ಬದಲಾಗಿ ಬಂದ್ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಠಿಸಿ, ಅದನ್ನು ಮೋದಿ ತಲೆಗೆ ಕಟ್ಟಿ, ಅಧಿಕಾರದಿಂದ ಇಳಿಸಬೇಕು ಎನ್ನುವುದು.

ಆದರೆ, ನನ್ನ ಭಾರತ ಈಗ ಬದಲಾಗಿದೆ, ನನ್ನ ಭಾರತೀಯನೂ ಸಹ ಬದಲಾಗಿದ್ದೇನೆ. ಈಗ ದೇಶಕ್ಕಾಗಿ ತನ್ನ ವೈಯಕ್ತಿಕ ಜೀವನವನ್ನೂ ಸಹ ಮಾರ್ಪಾಟು ಮಾಡಿಕೊಳ್ಳುವ, ಒಂದಷ್ಟು ತ್ಯಾಗಗಳನ್ನು ಮಾಡುವ ಮನಃಸ್ಥಿತಿಯನ್ನು ಬೆಳೆಸಿಕೊಂಡಿದ್ದಾನೆ… ಹೀಗಾಗಿ, ಕಾಂಗ್ರೆಸ್ ಹಳೆಯ ತುಕಾಲಿ ರಾಜಕೀಯ ಆಟಗಳು ಈಗ ನಡೆಯುವುದಿಲ್ಲ.

ಹೀಗಾಗಿ, ಭಾರತ್ ಬಂದ್ ಮಾಡುವ ಮೂಲಕ ಕಾಂಗ್ರೆಸ್ ತನ್ನ ಕೊನೆಯ ಮೊಳೆಯನ್ನು ತಾನೇ ಹೊಡೆದುಕೊಂಡಿದೆ… ಇನ್ನೊಂದೇ ಕೆಲಸ ಬಾಕಿ ಇರುವುದು… ಅದಕ್ಕೆ ಅದರ ಅಂತಿಮ ವಿಧಿವಿಧಾನಗಳನ್ನು ಪೂರೈಸುವುದು. ಅದಕ್ಕೆ 2019ರಲ್ಲಿ ವೇದಿಕೆ ಸಿದ್ದವಾಗುತ್ತಿದೆ.

ಈ ಹಂತದಲ್ಲೇ ಸ್ನೇಹಿತರೇ ನಮ್ಮೆಲ್ಲರ ಜವಾಬ್ದಾರಿ ನಿರ್ವಹಣೆ ಮುಖ್ಯವಾಗಿರುವುದು… ಹೇಗೂ ತನ್ನ ಕೊನೆಯ ಮೊಳೆಯನ್ನು ಕಾಂಗ್ರೆಸ್ ತಾನೇ ಹೊಡೆದುಕೊಂಡಿದೆ. ಉಳಿದ ಕೊನೆಯ ವಿಧಿವಿಧಾನಗಳನ್ನು ಸಂತೋಷ, ಧೈರ್ಯ, ತ್ಯಾಗ ಹಾಗೂ ದೇಶಪ್ರೇಮದಿಂದ ನಿರ್ವಹಿಸಿ, ಐತಿಹಾಸಿಕ ಪಕ್ಷವನ್ನು ಕರಾಳ ಇತಿಹಾಸದ ಪುಟಗಳನ್ನು ಸೇರಿಸೋಣ… ನರೇಂದ್ರ ದಾಮೋದರ ದಾಸ್ ಮೋದಿ ಅವರನ್ನು ಮೊತ್ತೊಮ್ಮೆ ಪ್ರಧಾನಿ ಮಾಡೋಣ… ಅಟಲ್ ಜೀ ಕಂಡ ಭಾರತದ ಕನಸನ್ನು ಎಲ್ಲರೂ ಒಟ್ಟಾಗಿ ನನಸು ಮಾಡೋಣ…

ಈಗ ಹೇಳಿ ಕಾಂಗ್ರೆಸ್ ನಡೆಸಿದ ಬಂದ್ ಲಾಭ ಯಾರಿಗೆ?

ಕೊನೆಯಲ್ಲಿ ಒಂದೇ ಒಂದು ಮಾತನ್ನು ಆಣೆ ಮಾಡಿ ಹೇಳುತ್ತೇನೆ… 2019ರಲ್ಲಿ ಭಾರತೀಯರ ನಿರ್ಣಯ ಹೇಗಿರಬೇಕು ಎಂದರೆ
‘ಹೈಪವರ್ ಕರೆಂಟ್ ವಯರ್ ಮೇಲೆ ಸೂಸೂ ಮಾಡಿದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇರಬೇಕು’…

(ಅರಿಕೆ: ಕಾಂಗ್ರೆಸ್ ನಡೆಸಿದ ಬಂದ್ ಒಂದು ದಿನವಾಗಿದ್ದರೂ ಕೋಟ್ಯಂತರ ಜನರಿಗೆ ತೊಂದರೆಯಾಗಿದ್ದು, ಲಕ್ಷಾಂತರ ಬಡ ವ್ಯಾಪಾರಿಗಳ ಒಂದು ದಿನ ನಷ್ಟ ತುಂಬಿಕೊಳ್ಳಲು ತಿಂಗಳುಗಳೇ ಬೇಕು. ಬಿಹಾರದಲ್ಲಿ ಪುಟ್ಟ ಕಂದಮ್ಮವೊಂದು ನಮ್ಮನ್ನು ಬಿಟ್ಟು ಹೋಗಿದ್ದು ತೀರಾ ದುಃಖದ ಸಂಗತಿ.. ಈ ಲೇಖನದಲ್ಲಿ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸಿ ಇದರ ಲಾಭ ಯಾರಿಗೆ ಹೇಳಿ? ಎಂದು ಹೇಳಿರುವುದು ರಾಜಕೀಯ ಲಾಭದ ಉದ್ದೇಶದಿಂದಲ್ಲ. ಯಾಕೆಂದರೆ ನಾನು ರಾಜಕೀಯ ವ್ಯಕ್ತಿಯಲ್ಲ… ಇದರ ಲಾಭ ಯಾರಿಗೆ ಹೇಳಿ? ಎಂದು ವ್ಯಂಗ್ಯ ಮಿಶ್ರಿತವಾಗಿ ಹೇಳಿ ಕಾಂಗ್ರೆಸ್‌ನ ಕರಾಳಕೃತ್ಯವನ್ನು ತೆರೆದಿಡುವುದೇ ಆಗಿದೆ. ಇಲ್ಲಿ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ?)

-ಎಸ್.ಆರ್. ಅನಿರುದ್ಧ ವಸಿಷ್ಠ

Tags: Bharat BandhBJPcongressLok Sabha elections 2019PM Narendra Modi
Previous Post

ಮೂಷಿಕ ವಾಹನವಲ್ಲ… ಬದಲಿಗೆ ಮೂಷಿಕಾಸುರ…

Next Post

ಮೌನ ಮುರಿದ ರಕ್ಷಿತ್ ಶೆಟ್ಟಿ ಹೇಳಿದ್ದೇನು ಗೊತ್ತಾ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮೌನ ಮುರಿದ ರಕ್ಷಿತ್ ಶೆಟ್ಟಿ ಹೇಳಿದ್ದೇನು ಗೊತ್ತಾ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮೈಸೂರು ರೈಲ್ವೆ ನಿಲ್ದಾಣ ಕುರಿತಾಗಿ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ನೀಡಿದ ರೈಲ್ವೆ ಇಲಾಖೆ

June 30, 2025

ಹಾಸನ | ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಒಂದೇ ದಿನ ಮೂವರ ಸಾವು | ಆತಂಕ

June 30, 2025

ಆಷಾಢ ಏಕಾದಶಿ | ಹುಬ್ಬಳ್ಳಿಯಿಂದ ಪಂಢರಪುರಕ್ಕೆ ತೆರಳುವ ಭಕ್ತರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್

June 30, 2025

Dyson announced the results of its first Global Wet Cleaning Study

June 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮೈಸೂರು ರೈಲ್ವೆ ನಿಲ್ದಾಣ ಕುರಿತಾಗಿ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ನೀಡಿದ ರೈಲ್ವೆ ಇಲಾಖೆ

June 30, 2025

ಹಾಸನ | ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಒಂದೇ ದಿನ ಮೂವರ ಸಾವು | ಆತಂಕ

June 30, 2025

ಆಷಾಢ ಏಕಾದಶಿ | ಹುಬ್ಬಳ್ಳಿಯಿಂದ ಪಂಢರಪುರಕ್ಕೆ ತೆರಳುವ ಭಕ್ತರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್

June 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!