ಶಿವಮೊಗ್ಗ: ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಸಾಧನೆಗಿಂತ ಸರ್ಕಾರ ಉರುಳುವ ಕುರಿತೇ ಹೆಚ್ಚು ಚರ್ಚಿಸುತ್ತಿದ್ದಾರೆ. ಇಸ್ ಇಟ್ ನೆಸೆಸರಿ ಫಾರ್ ಯು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದರು.
ಮಲೆನಾಡು ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯ ರಜತ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ಆಗಮಿಸಿದ್ದ ವೇಳೆ ಅವರು ಮಾತನಾಡಿದರು.
ಮಾಧ್ಯಮದವರ ಮೇಲೆ ನನಗೆ ಗೌರವವಿದೆ. ನಾನು ಮಲೆನಾಡು ಕೋ-ಆಪರೇಟಿವ್ ಬ್ಯಾಂಕ್ ರಚತ ಮಹೋತ್ಸವಕ್ಕೆ ಬಂದಿದ್ದೇನೆ. ಕಾರ್ಯಕ್ರಮ ಮುಗಿಸಿಕೊಂಡು ವಾಪಾಸಾಗುತ್ತಿದ್ದೇನೆ ಎಂದು ತಿಳಿಸಿದ ತಕ್ಷಣವೇ ಮಾದ್ಯಮ ಪ್ರತಿನಿಧಿಗಳು ಜಾರಕಿಹೊಳಿ ಬ್ರದರ್ಸ್ ಬಂದು ತಮ್ಮನ್ನ ಸಂಪರ್ಕಿಸಿದ್ದಾರಾ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸುವ ಬಗ್ಗೆ ನಿರಾಸಕ್ತಿ ತೋರಿದರು. ಅದರ ಹಿಂದೆನೆ ಮಾದ್ಯಮದ ಪ್ರತಿನಿಧಿಗಳು ಡಿಸಿಎಂ ಪರಮೇಶ್ವರ್ ಅವರು ಬಂದು ಸಂಪರ್ಕಿಸಿದರಾ ಎಂದು ಕೇಳಿದಾಗ ಸಿಡಿಮಿಡಿಗೊಂಡ ಮಾಜಿ ಪ್ರಧಾನಿಗಳು ಇಸ್ ಇಟ್ ನೆಸೆಸ್ಸರಿ ಫಾರ್ ಯು ಎಂದು ಪ್ರಶ್ನಿಸಿದರು.
Discussion about this post