ನವದೆಹಲಿ: ಪಾಪಿ ಪಾಕಿಸ್ಥಾನಕ್ಕೆ ಸರಿಯಾದ ಪಾಠ ಕಲಿಸಿದ್ದ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ಗೆ ಎರಡು ವರ್ಷ ತುಂಬಿದ ಬೆನ್ನಲ್ಲೇ, ಭಾರತ ಸದ್ದಿಲ್ಲದೇ ಇದೇ ವಾರದಲ್ಲಿ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಹೌದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಮಾತುಗಳು ಅಂತಹ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ನಿನ್ನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ರಾಜನಾಥ್ ಸಿಂಗ್ ಮಾತನಾಡುವ ವೇಳೆ ರಹಸ್ಯ ಎಂಬಂತೆ ಮಾತನಾಡಿದ್ದು, ಎರಡು ಮೂರು ದಿನಗಳ ಹಿಂದೆ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಆದರೆ, ಏನಾಗಿದೆ ಅದು ಒಳ್ಳೆಯದೇ ಆಗಿದೆ ಎಂಬುದನ್ನು ನಾನು ಭರವಸೆ ನೀಡುತ್ತೇನೆ ಎಂದಿದ್ದಾರೆ.
ಇದೇ ವೇಳೆ ಇತ್ತೀಚೆಗೆ ಬಿಎಸ್ಎಫ್ ಯೋಧ ನರೇಂದ್ರ ಸಿಂಗ್ ಅವರನ್ನು ಪಾಕ್ ಸೈನಿಕರು ಕತ್ತು ಸೀಳಿ, ಕಣ್ಣು ಕಿತ್ತು ಭೀಕರವಾಗಿ ಹತ್ಯೆ ಮಾಡಿದ್ದನ್ನು ಖಂಡಿಸಿರುವ ಅವರು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಸೇನೆ ಎಂದಿಗೂ ತಾನೇ ಅಪ್ರಚೋದಿತ ಗುಂಡಿನ ದಾಳಿ ನಡೆಸಿಲ್ಲ ಹಾಗೂ ನಡೆಸುವುದಿಲ್ಲ. ಆದರೆ, ಇಂತಹ ಕೃತ್ಯ ಮಾಡುತ್ತಿರುವ ಪಾಕ್ಗೆ ಪಾಠ ಕಲಿಸಲು ಭಾರತ ಗುಂಡಿನ ಲೆಕ್ಕ ಇಡುವುದಿಲ್ಲ ಎಂದು ಪಾಕ್ಗೆ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಪ್ರಮುಖ ಘಟನೆಯೊಂದು ನಡೆದಿದೆ. ಅದು ಮುಂದೆಯೂ ನಡೆಯಲಿದೆ ಎಂದು ಹೇಳುವ ಮೂಲಕ ನರೇಂದ್ರ ಸಿಂಗ್ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದೆಯೇ ಎಂಬ ಪ್ರಶ್ನೆಯನ್ನು ಗೃಹಸಚಿವರ ಮಾತು ಸೃಷ್ಠಿಸಿದೆ. ಆದರೆ, ಅವರ ಈ ಕುರಿತಾಗಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
ಬಿಎಸ್ಎಫ್ ಯೋಧನನ್ನು ಪಾಕ್ ಸೇನೆ ಹತ್ಯೆ ಮಾಡಿರುವ ಕ್ರೂರತ್ವವನ್ನು ನೀವು ಗಮನಿಸಿ. ಇದರ ಹಿನ್ನೆಲೆಯಲ್ಲೆ ಏನೋ ನಡೆದಿದೆ. ನಾನು ಅದರ ಕುರಿತಾಗಿ ಮಾತನಾಡುವುದಿಲ್ಲ. ಆದರೆ, ಏನು ಆಗಿದೆಯೋ ಅದು ಒಳ್ಳೆಯದೇ ಆಗಿದೆ. ಇಂತಹ ಬೆಳವಣಿಗೆ ಮತ್ತೆ ಆಗಲಿದೆ. ಪಾಕ್ ನಮ್ಮ ನೆರೆಯ ರಾಷ್ಟ್ರವಾದ ಕಾರಣ ನೀವೇ ಮೊದಲು ಯಾವುದೇ ಕಾರಣಕ್ಕೂ ಗುಂಡು ಹಾರಿಸಬೇಡಿ. ಆದರೆ, ಪಾಕ್ ಕಡೆಯಿಂದ ಒಂದು ಬುಲೆಟ್ ನಮ್ಮ ಕಡೆ ಬಂದರೆ, ಪ್ರತಿಯಾಗಿ ಪಾಕ್ ವಿರುದ್ದ ನೀವು ಹಾರಿಸುವ ಬುಲೆಟ್ಗಳನ್ನು ಲೆಕ್ಕ ಇಡಬೇಡಿ ಎಂದು ಗಡಿ ಭದ್ರತಾ ಪಡೆಗೆ ಹೇಳಿದ್ದೇನೆ ಎಂದಿದ್ದಾರೆ ಗೃಹ ಸಚಿವರು.
Maine apne Border Security Force ke jawanon ko kaha tha, padosi hai, pehli goli matt chalana, lekin ek bhi goli agar udhar se chal jaati hai to phir apni goliyon ko matt gin’na: Home Minister (28.9) pic.twitter.com/62PgHEPRkm
— ANI UP (@ANINewsUP) September 29, 2018
Discussion about this post