ಸೊರಬ: ತಾಲೂಕು ಮಡಿವಾಳ ಮಾಚೀದೇವ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ತಾಲೂಕು ಮಡಿವಾಳ ಮಾಚಿದೇವ ಸಮುದಾಯದ ವತಿಯಿಂದ ಅಧ್ಯಕ್ಷ ರಾಜು ಎಂ. ತಲ್ಲೂರು ಅವರ ನೇತೃತ್ವದಲ್ಲಿ ನವೆಂಬರ್ 11ರ ಭಾನುವಾರ ರಂಗಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಪಡೆದು, ಅ.20ರ ಒಳಗಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಸ್ಥಳದಲ್ಲಿಯೇ ಹಿಂತಿರುಗಿಸಬೇಕು ಎಂದು ತಿಳಿಸಲಾಗಿದೆ.
ಅರ್ಜಿ ದೊರೆಯುವ ಸ್ಥಳಗಳು:
ಸುಬ್ಬು ನೆಮ್ಮದಿ ಸೊರಬ. ಹೂವಪ್ಪ ಉಪ್ಪಳ್ಳಿ ಪಿ.ಎಲ್.ಡಿ. ಬ್ಯಾಂಕ್ ಹಿಂಭಾಗ ಶ್ರೀ ರೇಣುಕಾ ಟ್ರೇಡರ್ಸ್ ಸೊರಬ, ಉಮೇಶ್ ವಕೀಲ ಮಾವಲಿ, ಅಶ್ವತ್ಥ್ ಚಂದ್ರಗುತ್ತಿ, ಟಿ.ಎಂ. ಕೃಷ್ಣಪ್ಪ ಚಂದನ್ ಟೈಲರ್ ಶಿರಾಳಕೊಪ್ಪ ರಸ್ತೆ ಆನವಟ್ಟಿ, ರಾಘವೇಂದ್ರ ಹರೀಶಿ, ಎಂ.ಪಿ. ನಾಗರಾಜ್ ಆನವಟ್ಟಿ, ಶಿವಾನಂದ್ ಅವಿನಾಶ್ ಟೈಲರ್, ಬಸ್ಟ್ಯಾಂಡ್ ಎದರು ಜಡೆ, ಸತೀಶ್ ಜಡೆ, ಭಾಸ್ಕರ್ ಶಿಗ್ಗಾ, ಪ್ರವೀಣ್ ಉಳವಿ.
ಮಾಹಿತಿ: ಮಧುರಾಮ್, ಸೊರಬ
Discussion about this post