ಶ್ರೀನಗರ: ನಮ್ಮ ಸಹೋದ್ಯೊಗಿ ಸಹೋದರ ಪ್ರತಿ ಹನಿಯ ರಕ್ತಕ್ಕೂ ಈಗ ಬೆಲೆ ಸಿಕ್ಕಿದೆ. ಇಂತಹ ನಿರ್ಧಾರ ಕೈಗೊಂಡ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಸೂರ್ಯ ಚಂದ್ರರು ಇರುವವರೆಗೂ ಪ್ರಜ್ವಲಿಸುತ್ತದೆ: ಹೀಗೆಂದು ಭಾವನಾತ್ಮಕವಾಗಿ ನುಡಿದಿದ್ದು ಸಿಆರ್’ಪಿಎಫ್’ ಓರ್ವ ಯೋಧ.
ಭಾರತೀಯ ವಾಯು ಸೇನೆ ಇಂದು ಪಾಕ್ ಪರಿಧಿಯೊಳಗೆ ನುಗ್ಗಿ ಬರೋಬ್ಬರಿ 245 ಉಗ್ರರರನ್ನು ಹೊಸಕಿ ಹಾಕಿ, ಪುಲ್ವಾಮಾ ಘಟನೆಯಲ್ಲಿ ವೀರಸ್ವರ್ಗ ಸೇರಿದ ಯೋಧರ ಸಾವಿಗೆ ಪ್ರತೀಕಾರ ತೆಗೆದುಕೊಂಡ ಹಿನ್ನೆಲೆಯಲ್ಲಿ ಸಿಆರ್’ಪಿಎಫ್ ಕ್ಯಾಂಪ್’ನಲ್ಲಿ ಯೋಧರು ಸಂಭ್ರಮಾಚರಣೆ ನಡೆಸಿದರು.
#IndiaStrikesPakistan | CRPF jawans celebrate the IAF airstrike, say 'we had faith in the Prime Minister, to avenge an attack in 12 days is a big thing'
Tune in to watch LIVE visuals-https://t.co/LGCyJUEBn5 pic.twitter.com/nEtVZVGkqp— Republic (@republic) February 26, 2019
ಈ ವೇಳೆ ಮಾತನಾಡಿದ ಯೋಧರು ನಮ್ಮ ಸಹೋದರರ ಸಾವಿನಿಂದ ನಮ್ಮಲ್ಲಿ ಆಕ್ರೊಶವಿತ್ತು. ಆದರೆ, ಇದಕ್ಕೆ ಸರಿಯಾದ ಪ್ರತೀಕಾರವನ್ನು ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಪ್ರಧಾನಿ ಮೋದಿ ಅವರಲ್ಲಿತ್ತು. ಆನಂಬಿಕೆಯನ್ನು ಅವರಿಂದು ಸತ್ಯ ಮಾಡಿದ್ದಾರೆ. 12 ದಿನಗಳ ಹಿಂದೆ ಇಲ್ಲಿನ ಪರಿಸ್ಥಿತಿಯೇ ವಿಭಿನ್ನವಾಗಿತ್ತು. ದುಃಖ ಹಾಗೂ ಆಕ್ರೋಶ ಮಡುಗಟ್ಟಿತ್ತು. ಆದರೆ, ಮೋದಿ ಜಿ ಅದನ್ನೆಲ್ಲಾ ಬದಲಾಯಿಸಿದ್ದಾರೆ ಎಂದಿದ್ದಾರೆ.
ನಮ್ಮಲ್ಲಿ ನಂಬಿಕೆ ಇಟ್ಟು ನಮ್ಮನ್ನು ಸದಾ ಬೆಂಬಲಿಸಿ. ನಾವು ಇರುವುದೇ ದೇಶದ ಸೇವೆಗೆ ಎಂದು ಯೋಧರು ಮನವಿ ಮಾಡಿದ ಗಳಿಗೆ ಇಡಿಯ ಸೇನಾ ಪಡೆಯ ತ್ಯಾಗವನ್ನು ಸಾರಿ ಹೇಳುತ್ತಿತ್ತು.
ಈ ವೇಳೆ ಮಾತನಾಡಿದ ಇನ್ನೋರ್ವ ಯೋಧ, ನಮ್ಮ ಸಹೋದರರ ಪ್ರತಿ ಹನಿ ರಕ್ತಕ್ಕೂ ಮೋದಿ ಜಿ ಬೆಲೆ ತಂದುಕೊಟ್ಟಿದ್ದಾರೆ. ಇಂತಹ ಮೋದಿಯವರ ಹೆಸರು ಸೂರ್ಯ ಚಂದ್ರರು ಇರುವವರೆಗೂ ಪ್ರಜ್ವಲಿಸುತ್ತದೆ ಎಂದು ಅಭಿಮಾನ ವ್ಯಕ್ತಪಡಿಸಿದರು.
#IndiaStrikesPakistan | CRPF jawans celebrate the IAF airstrike
Tune in to watch LIVE visuals-https://t.co/LGCyJUEBn5 pic.twitter.com/xH6Jlrd3aV— Republic (@republic) February 26, 2019
ಪುಲ್ವಾಮಾದಂತಹ ಘಟನೆಗಳಿಂದ ನಾವು ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ನಮ್ಮ ತಾಕತ್ತು ಎಂತಹುದ್ದು ಎಂಬುದನ್ನು ನಾವಿಂದು ವಿಶ್ವಕ್ಕೆ ತೋರಿಸಿಕೊಟ್ಟಿದ್ದೆವೆ. ಇದಕ್ಕೂ ಮೀರಿ ಪಾಕಿಸ್ಥಾನ ಅಥವಾ ಉಗ್ರರು ಮುಂದುವರೆದಿದ್ದೆ ಆದಲ್ಲಿ, ತಕ್ಕ ಶಾಸ್ತಿ ಅನುಭವಿಸಲು ಸಿದ್ದರಾಗಿ ಎಂದು ಶತ್ರು ರಾಷ್ಟ್ರಕ್ಕೆ ಯೋಧರು ಎಚ್ಚರಿಕೆ ನೀಡಿದ್ದಾರೆ.
ಪುಲ್ವಾಮದಲ್ಲಿ ನಡೆದ ಘಟನೆಯಲ್ಲಿ ವೀರಸ್ವರ್ಗ ಸೇರಿದ ಎಲ್ಲ 42 ಯೋಧರು ಸಿಆರ್’ಪಿಎಫ್’ಗೆ ಸೇರಿದವರಾಗಿದ್ದ ಕಾರಣ, ಈ ಬೆಟಾಲಿಯನ್’ನಲ್ಲಿ ಕಳೆದ 12 ದಿನಗಳಿಂದ ವಾತಾವರಣವೇ ಭಿನ್ನವಾಗಿತ್ತು. ಎಲ್ಲೆಲ್ಲೂ, ಎಲ್ಲ ಯೋಧರನ್ನೂ ದುಃಖ ಹಾಗೂ ಸೇಡಿನ ಆಕ್ರೋಶವಿತ್ತು. ಆದರೆ, ಶತ್ರುಗಳ ವಿರುದ್ಧ ಇಂದು ನಮ್ಮ ಸೇನೆ ಅಖಂಡ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಪರಿಸ್ಥಿತಿ ಬದಲಾಗಿದ್ದು, ಎಲ್ಲಲ್ಲೂ ಸಂಭ್ರಮ ಹಾಗೂ ಉತ್ಸಾಹ ಇಮ್ಮಡಿಗೊಂಡಿದೆ.
Discussion about this post