ನವದೆಹಲಿ: ಕಣಿವೆ ರಾಜ್ಯದಲ್ಲಿ ನಿನ್ನೆ ನಡೆದ ಘಟನೆಯಲ್ಲಿ ಪಾಕಿಸ್ಥಾನ ಬಂಧಿಸಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಕ್ಕೆ ಒಪ್ಪಿಕೊಂಡಿರುವ ಪಾಕಿಸ್ಥಾನ ಅದಕ್ಕೊಂದು ಷರತ್ತು ವಿಧಿಸಿದೆ.
ವರದಿಗಳ ಆಧಾರದಲ್ಲಿ ಪಾಕ್ ವಿದೇಶಾಂಗ ಸಚಿವರು ಮಾತನಾಡಿದ್ದು, ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಪಾಕಿಸ್ಥಾನ ಒಪ್ಪಿದೆ. ಆದರೆ, ಅದಕ್ಕೂ ಮುನ್ನ ಭಾರತದ ಗಡಿಯಲ್ಲಿ ನಿಯೋಜನೆ ಮಾಡಲಾಗಿರುವ ಭಾರತೀಯ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಂತೆ…!
ಆದರೆ, ಪಾಕಿಸ್ಥಾನದ ಷರತ್ತಿಗೆ ತಿರುಗೇಟು ನೀಡಿರುವ ಭಾರತ, ನಮ್ಮ ದಾಳಿ ಉಗ್ರರ ವಿರುದ್ಧವೇ ಹೊರತೂ ಪಾಕಿಸ್ಥಾನದ ವಿರುದ್ಧವಲ್ಲ. ನಮ್ಮ ಅಭಿನಂದನ್ ಅವರನ್ನು ಯಾವುದೇ ಷರತ್ತುಗಳು ಇಲ್ಲದೇ ಸುರಕ್ಷಿತವಾಗಿ ಬಿಡುಗಡೆ ಮಾಡಿ. ಇಲ್ಲದೇ ಹೋದಲ್ಲಿ ಪರಿಣಾಮ ಎದುರಿಸಿ. ದೇಶದ ಭದ್ರತೆ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಪ್ರಶ್ನೆಯೇ ಇಲ್ಲ ಎಂಬ ಖಡಕ್ ಸಂದೇಶವನ್ನು ಭಾರತ ರವಾನಿಸಿದೆ.
Discussion about this post