ಭದ್ರಾವತಿ: ಉನ್ನತ ಸಮಾಜದಲ್ಲಿ ಜನಿಸಿ ಕೆಳಸ್ತರ ಜನರನ್ನು ಪ್ರೀತಿಸಿರುವುದು ಬಸವಣ್ಣನವರ ಸಾಧನೆಯಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಚ್.ಎನ್.ಮಹಾರುದ್ರ ಹೇಳಿದರು.
ನ್ಯೂಟೌನ್ ಸರ್.ಎಂ.ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ ತಾಲೂಕು ಘಟಕ ಏರ್ಪಡಿಸಿದ್ದ 603 ನೆಯ ವಚನ ಮಂಟಪ-ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗತ್ತು ಅಂಧಕಾರತ್ವದಲ್ಲಿದ್ದ ಸಂದರ್ಭದಲ್ಲಿದ್ದ ನೂತನ ಚಿಂತನೆಗಳನ್ನು ನೀಡಿ ಪರಿಕಲ್ಪೆನೆಯನ್ನು ಶರಣರು ನೀಡಿದ್ದಾರೆ. ಬಾಲ್ಯದಲ್ಲಿ ವಿಶಿಷ್ಟ ಸಾಧನೆ ಮಾಡಿ ಸಕಲ ಜೀವಾತ್ಮಗಳಿಗೆ ಬದುಕು ರೂಪಿಸಿ ಒಳಿತನ್ನು ರೂಪಿಸಿದ್ದರು. ಶರಣ ಎಂಬ ಪದದಿಂದ ಪ್ರೀತಿ ಏನೆಂಬುದು ತಿಳಿಸಿ ಇತರರ ಅಮೂಲ್ಯ ಬದುಕಿಗೆ ಮಾರ್ಗದರ್ಶನ ನೀಡಿದ್ದ ಬಸವಣ್ಣ ಕೇವಲ ಕನ್ನಡ ನಾಡಿಗೆ ಮಾತ್ರವಲ್ಲದೆ ಜಗತ್ತಿಗೆ ಬೇಕಾದ ಶಕ್ತಿಯಾಗಿದ್ದರು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಸಹ ಜೀವನದ ಸಂಸ್ಕ7ತಿಗೆ ಸಾಹಿತ್ಯ ಪರಿಚಯಿಸಿದ ಕೀರ್ತಿಗೆ ಪಾತ್ರರಾಗಿದ್ದರು ಎಂದರು.
ಸೊರಬದ ಯುವವಾಗ್ಮಿ ಭರತ್ ಕಾರೇಕೊಪ್ಪ ವಚನಗಳಿಂದ ವ್ಯಕ್ತಿತ್ವ ವಿಕಸನ ಕುರಿತ ಉಪನ್ಯಾಸ ನೀಡಿ ಕಲಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಪದಗಳನ್ನು ವಚನಗಳಲ್ಲಿ ಅನೇಕ ಭಾರಿ ತಿಳಿಸಿದ್ದರು ಸಹ ಇಂದಿಗೂ ಅವುಗಳನ್ನೆ ಪಾಲಿಸುವ ಜನರೆ ಹೆಚ್ಚಾಗಿದ್ದಾರೆ. ಬಸವಣ್ಣನವರ ವಚನ ಸಾಹಿತ್ಯವು ಭಾರತದೇಶದ ಬಹುದೊಡ್ಡ ಕೊಡುಗೆಯಾಗಿದ್ದು ಇತರೇ ರಾಜ್ಯಗಳಿಗೂ ಅನ್ವಯವಾಗುತ್ತಿದೆ. ಇಂದು ದೇಶದ ಎಲ್ಲಾ ಭಾಷಿಗರಿಗೂ ವಚನ ಸಾಹಿತ್ಯ ಅವಶ್ಯಕವಾಗಿದೆ. ವೇದ, ಪುರಾಣ, ಉಪನಿಷತ್ತುಗಳನ್ನು ಮೀರಿದ ವಚನ ಸಾಹಿತ್ಯವಾಗಿದೆ. ಅಕ್ಕಮಹಾದೇವಿಯವರು ಅಂದೇ ಜಗತ್ತಿನ ಸ್ತ್ರೀಕುಲಕ್ಕೆ ಬದುಕು ರೂಪಿಸಿಕೊಟ್ಟವರಲ್ಲಿ ಮೊದಲಿಗರಾದರೆ, ಸ್ವಾಮಿ ವಿವೇಕನಂದಾರು ಮಹಾತ್ಮರಾಗಿದ್ದಾರೆ. ಜಾತ್ಯಾತೀತ ದೇಶದಲ್ಲಿ ವಚನ ಸಾಹಿತ್ಯವೆ ಕರ್ನಾಟಕದ ಕೊಡುಗೆಯಾಗಿತ್ತು. ಮಾನವರಲ್ಲಿ ಅಜ್ಞಾನ ದೂರವಾದಾಗ ಮಾತ್ರ ಸುಜ್ಞಾನದ ಬೆಳಕು ಬರಲು ಸಾದ್ಯ. ಅದ್ದರಿಂದ ಮುಂದೊಂದು ದಿನ ವಚನಗಳನ್ನು ಹುಡುಕುವ ದಿನಗಳು ಬರಲಿವೆ ಎಂದರು.
ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಕತ್ತಲಗೆರೆ ತಿಮ್ಮಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ ಸಮಾನತೆಗೆ ಜಾತಿ ಧರ್ಮ ತೊಲಗಿಸಿ ಜಾತ್ಯಾತೀತ ಸಂಕಲ್ಪ ನೀಡಲು ಶ್ರಮಿಸಿದ್ದ ಬಸವಣ್ಣ ಜಗತ್ತಿಗೆ ಮೊದಲ ಸಂಸತ್ತನ್ನು ನೀಡಿದ್ದರು. ಅವರ ಹಾದಿಯಲ್ಲೆ ಶರಣ ಸಾಹಿತ್ಯವು ಸತತ 20 ವರ್ಷಗಳಿಂದ ನಿರಂತರವಾಗಿ ವಚನ ಸಾಹಿತ್ಯದ ಕೆಲಸ ನಿರ್ವಹಿಸಲಾಗುತ್ತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ಉಮಾಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಶೈಲಜಾ ಹೊಸೆಳ್ಳೇರ ಅನಿಸಿಕೆ ತಿಳಿಸಿದರು. ಡಾ.ಟಿ.ಮಂಜುನಾಥ್ ಉಪಸ್ಥಿತರಿದ್ದರು. ಕದಳಿ ತಂಡದವರು ವಚನ ಪ್ರಾರ್ಥಿಸಿ ಸಮೂಹ ಗಾಯನ ಹಾಡಿದರೆ, ಉಪನ್ಯಾಸಕರಾದ ಹಾಲಸಿದ್ದಪ್ಪ ಸ್ವಾಗತಿಸಿ, ವರದರಾಜ್ ಕಾರ್ಯಕ್ರಮ ನಿರೂಪಿಸಿದರು. ದತ್ತಿ ದಾನಿಗಳಾದ ನಗರದ ಲೋಯರ್ ಹುತ್ತಾದ ರಂಗನಾಥ ಗ್ಯಾಸ್ ಸರ್ವಿಸ್ನ ದಿವಂಗತ ಬಿ.ಎಚ್.ಮಹಾದೇವಪ್ಪ ಕುಟುಂಬದವರು ಉಪಸ್ಥಿತರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post