ಸಾಗರ: ಕಳೆದ ಬಾರಿ ಸಂಸದನಾಗಿ ಕೇವಲ ಆರು ತಿಂಗಳ ಅವಧಿಯಲ್ಲಿ ನಾಲ್ಕೈದು ಐತಿಹಾಸಿಕ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಸಾಗರದಲ್ಲಿರುವ ಶೃಂಗೇರಿ ಶಂಕರ ಮಠದ ಶ್ರೀ ಶಾರದಾ ದೇವಿ ಸನ್ನಿಧಿಗೆ ತೆರಳಿ ರಾಘವೇಂದ್ರ ಪೂಜೆ ಸಲ್ಲಿಸಿದರು
ಜಿಲ್ಲೆಯ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದನೆ ಮಾಡುವ ಪ್ರಯತ್ನ ನಮ್ಮ ಕಡೆಯಿಂದ ಆಗಿದೆ ದೇಶದ ಭದ್ರತೆ, ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಬಿಜೆಪಿಯನ್ನು ಬೆಂಬಲಿಸಬೇಕು.
-ಬಿ.ವೈ. ರಾಘವೇಂದ್ರ
ಸಾಗರದಲ್ಲಿಂದು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಸಂಸದನಾಗಿ ಕೇವಲ ಆರು ತಿಂಗಳಲ್ಲಿ, ನಮ್ಮ ಪಕ್ಷದ ಸಂಘಟನೆಯ ಹಾರೈಕೆ, ಮೋದಿಜಿಯವರ ಆಶೀರ್ವಾದ ಮತ್ತು ಬಿ.ಎಸ್. ಯಡಿಯೂರಪ್ಪನವರ ಮಾರ್ಗದರ್ಶನದಿಂದ ನಮ್ಮ ಕ್ಷೇತ್ರಕ್ಕೆ ಐತಿಹಾಸಿಕ ಯೋಜನೆಗಳನ್ನು ಯಶಸ್ವಿಯಾಗಿ ತಂದು ಕೊಡಲಾಗಿದೆ ಎಂದರು.
ಪ್ರಚಾರದಲ್ಲಿ ರಾಘವೇಂದ್ರ ಹೇಳಿದ್ದು:
- ಸಾಗರ ಕ್ಷೇತ್ರದಲ್ಲಿ ಕಳಸವಳ್ಳಿ-ಸಿಗಂದೂರು ಸೇತುವೆ 152 ಕೋಟಿ ವೆಚ್ಚದ ಯೋಜನೆ ಈಗಾಗಲೇ ಅಧಿಕೃತವಾಗಿ ಟೆಂಡರ್ ಕರೆಯಲಾಗಿದೆ ಮೂವತ್ತು ತಿಂಗಳ ಒಳಗೆ ಕಾಮಗಾರಿ ಮುಗಿಸಬೇಕು ಎಂಬ ಷರತ್ತು ವಿಧಿಸಲಾಗಿದೆ
- ಈ ಸೇತುವೆ ತುಂಬಾ ವೈಜ್ಞಾನಿಕವಾದ ಪ್ಲಾನ್’ನಿಂದ ಎರಡೂವರೆ ಕಿಲೋ ಮೀಟರ್ ಉದ್ದದ ಈ ಸೇತುವೆ ರಾಜ್ಯದಲ್ಲಿಯೇ ಮೊದಲು ಎಂಬ ಕೀರ್ತಿ ಇದಾಗಲಿದೆ
- ಇಎಸ್ಐ ಆಸ್ಪತ್ರೆ, ಭದ್ರಾವತಿಯ ವಿಶ್ವೇಶ್ವರಯ್ಯ ಹೆಸರಿನ ವಿಐಎಸ್’ಎಲ್ ಉಕ್ಕು ಕಾರ್ಖಾನೆಗೆ ಬೇಕಾಗಿದ್ದ ಕಬ್ಬಿಣದ ಅದಿರನ್ನು
- ಬಳ್ಳಾರಿ ರಾಮದುರ್ಗದಿಂದ ಕೊಡಿಸುವ ಪ್ರಯತ್ನ ಆಗಿದೆ
- ಶಿವಮೊಗ್ಗದಲ್ಲಿ ಎಫ್ಎಂ ರೇಡಿಯೊ ಆಧುನೀಕರಣಕ್ಕೆ ಪ್ರಯತ್ನ ನಡೆಯುತ್ತಿದೆ
- ಮಲೆನಾಡಿನಲ್ಲಿ ಬಿಎಸ್ಎನ್ಎಲ್ ಟವರ್ ಸಮಸ್ಯೆ ಹೆಚ್ಚಿದ್ದು ಇದನ್ನು ನಿವಾರಿಸಲು ಕ್ರಮವನ್ನು ಕೈಗೊಳ್ಳಲಾಗಿದೆ
Discussion about this post