No Result
View All Result
Malnad is a Cultural ‘Gharana’ of Great Minds: Dr. Jayamala at Sahyadri Utsava
English Articles

Malnad is a Cultural ‘Gharana’ of Great Minds: Dr. Jayamala at Sahyadri Utsava

by ಕಲ್ಪ ನ್ಯೂಸ್
March 13, 2026
0

Kalpa Media House  |  Shimoga | Invoking the poetic essence of the Malnad landscape, veteran actor, former minister, and Chairperson...

Read moreDetails
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಎಚ್ಚರ ಅವಶ್ಯ : ಡಾ. ಸುಶ್ರುತ ಗೌಡ

Post-COVID Surge: Lifestyle Diseases Now Striking People in Their 40s, Warns Neurologist  Dr. Sushrutha Gowda

March 9, 2026
  • Advertise With Us
  • Grievances
  • About Us
  • Contact Us
Saturday, March 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

‘ಗೆಜ್ಜೆ ಪೂಜೆ’ ಅದ್ಬುತ ನೃತ್ಯ ಸಂಜೆಗೆ ಸಾಕ್ಷಿಯಾದ ಬೆಂಗಳೂರಿನ ಸೇವಾ ಸದನ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 30, 2019
in Small Bytes, ಬೆಂಗಳೂರು ನಗರ
0
‘ಗೆಜ್ಜೆ ಪೂಜೆ’ ಅದ್ಬುತ ನೃತ್ಯ ಸಂಜೆಗೆ ಸಾಕ್ಷಿಯಾದ ಬೆಂಗಳೂರಿನ ಸೇವಾ ಸದನ
Share on FacebookShare on TwitterShare on WhatsApp

ಬೆಂಗಳೂರು: ಈ ಸುಂದರ ಸಂಜೆಯಂದು ಅಷ್ಟೇ ಒಂದು ಸುಂದರ, ವಿಭಿನ್ನ ಮತ್ತು ಅದ್ಭುತವಾದ ನೃತ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ನಗರದ ಸೇವಾ ಸದನದಲ್ಲಿ ಸಂಗೀತ್ ನೃತ್ಯ ಭಾರತಿ ಅಕಾಡೆಮಿಯ 4 ಉದಯೋನ್ಮುಖ ಪ್ರತಿಭೆಗಳು ತಮ್ಮ ನೃತ್ಯ ಲೋಕದ ಪ್ರಥಮ ಹೆಜ್ಜೆಗಳನ್ನು ಗೆಜ್ಜೆ ಪೂಜೆಯ ರೂಪದಲ್ಲಿ ತಮ್ಮ ಗುರು ಶ್ರೀಮತಿ ಪದ್ಮಾ ಹೇಮಂತ್ ಅವರ ಮಾರ್ಗದರ್ಶನದಲ್ಲಿ ನಗರದ ಸೇವಾ ಸದನದಲ್ಲಿ ದಾಖಲಿಸಿದರು.

ನಿಗದಿತ ಸಮಯಕ್ಕೆ ಸರಿಯಾಗಿ ಒಂದು ಸುಂದರ ಆದಿ ಪೂಜಿತ ಗಣೇಶನ ಸ್ತುತಿಯೊಂದಿಗೆ ಕುಮಾರಿ ಶೀತಲ ಹೇಮಂತ್ ರವರು ಸೊಗಸಾದ ಕಂಠಸಿರಿಯಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಪ್ರಥಮವಾಗಿ ಅಂದು ನರ್ತಿಸಲು ಸಿದ್ಧಗೊಂಡಿದ್ದ ಎಲ್ಲಾ ಪ್ರತಿಭೆಗಳು ಸೇರಿ ತಮ್ಮಮೊದಲ ಪ್ರಸ್ತುತಿಯಾಗಿ ’ವಂದಿಸುವುದಾದಿಯಲಿ ಗಣನಾಥನ….’ ದಾಸವರೇಣ್ಯ ಶ್ರೀ ಪುರಂದರ ದಾಸರ ಸೊಗಸಾದ ಹಾಡಿಗೆ ನರ್ತಿಸಿದರು.

ಏಕವ್ಯಕ್ತಿ ಪ್ರದರ್ಶನದಲ್ಲಿ ಮೊದಲಿಗರಾಗಿ ಬಂದ ಎ. ಈಶ್ವರಿ, ನೃತ್ಯದ ಅಧಿದೇವತೆ ಶ್ರೀ ನಟರಾಜನನ್ನು ಕುರಿತಾದ ಪ್ರಚಲಿತ ಮತ್ತು ಸೊಗಸಾದ ಪ್ರಸ್ತುತಿಯನ್ನು ವೇದಿಕೆಗೆ ತಂದರು. ರೇವತಿ ರಾಗ ಆದಿತಾಳದಲ್ಲಿರುವ ಈ ಸಂಯೋಜನೆಗೆ ತಕ್ಕ ನ್ಯಾಯ ಒದಗಿಸಿದರು ಈಶ್ವರಿ. ನೃತ್ಯದ ನಡುವೆ ಅಳವಡಿಸಿದ್ದ ಗಂಗಾವತರಣದ ಸಂಚಾರಿಯಲ್ಲಿ ಎಲ್ಲರನ್ನೂ ಆಕರ್ಷಿಸಿದರು ಕುಮಾರಿ ಈಶ್ವರಿ.


ನವಿರಾದ ಮತ್ತೊಂದು ಗಣೇಶನ ಕುರಿತಾದ ಸ್ತುತಿಯೊಂದಿಗೆ ವೇದಿಕೆಗೆ ಬಂದದ್ದು ಕುಮಾರಿ ಎಸ್. ಸ್ನೇಹ ಸ್ವಲ್ಪ ಕಾಲದಿಂದಷ್ಟೇ ನೃತ್ಯ ಅಭ್ಯಾಸ ಮಾಡುತ್ತಿದ್ದರೂ ಈ ಕಲೆಯ ಬಗೆಗಿನ ಅವರ ಒಲವು ಅವರ ನೃತ್ಯದಲ್ಲಿ ಎದ್ದು ಕಾಣತ್ತಿತ್ತು. ಇವರ ಸಂಚಾರಿ ಭಾಗದಲ್ಲಿ ಗಣಪ ಮತ್ತವನ ವಾಹನ ಮೂಷಿಕನ ನಡುವಿನ ಮಾತುಕತೆಯನ್ನು ಬಿಂಬಿಸುವಲ್ಲಿ ಲಘುಹಾಸ್ಯವನ್ನು ಗುರು ಶ್ರೀಮತಿ ಪದ್ಮ ಹೇಮಂತ್ ಅವರು ಬಳಸಿಕೊಂಡಿದ್ದ ರೀತಿಯಲ್ಲಿ ಹೊಸತನವಿದ್ದುದಷ್ಟೇ ಅಲ್ಲದೆ ಸಭಿಕರು ಮುಕ್ತವಾಗಿ ಆನಂದಿಸುವಂತೆ ಮಾಡಿತು.

ಮುಂದಿನ ಮತ್ತೊಂದು ಸಮೂಹ ಪ್ರಸ್ತುತಿ ಪಾರಂಪರಿಕ ಜತಿಸ್ವರವನ್ನು 4 ಪ್ರತಿಭೆಗಳು ಕಣ್ಸೆಳೆಯುವ ಸಮೂಹ ಸಂಯೋಜನೆಯಲ್ಲಿ ಅನಾವರಣಗೊಳಿಸಿದರು. ಇದು ರಾಗ ಮಾಲಿಕೆ ಮತ್ತು ಮಿಶ್ರಚಾಪು ತಾಳಕ್ಕೆ ನಿಬದ್ಧವಾಗಿತ್ತು.

ಮುಂದಿನ ಏಕವ್ಯಕ್ತಿ ಪ್ರದರ್ಶನದಲ್ಲಿ ವೇದಿಕೆಗೆ ಬಂದ ಪ್ರತಿಭೆ ಕುಮಾರಿ ಲಕ್ಷಿತ ಗೌಡ. ಶ್ರೀ ಪುರಂದರ ದಾಸರ, ’ದಾಸನ ಮಾಡಿಕೊ ಎನ್ನ…’ ಇದು ಇವರ ಪ್ರಸ್ತುತಿ. ಭಕ್ತ ಭಾವಾಜಿಯ ಭಕ್ತಿಯ ಪರಾಕಾಷ್ಠೆಯನ್ನು ವೇದಿಕೆಯ ಮೇಲೆ ನಾಲ್ಕು ಪ್ರತಿಭೆಗಳು ಸೇರಿ ಅದ್ಭುತವಾಗಿ ಪ್ರಸ್ತುತ ಪಡಿಸಿದರು ಸಂಚಾರಿ ಭಾಗದಲ್ಲಿ.

ಏಕವ್ಯಕ್ತಿ ಪ್ರದರ್ಶನದಲ್ಲಿ ಕೊನೆಯ ಭಾಗವಾಗಿ ಬಂದದ್ದು ಕುಮಾರಿ ಎಸ್. ವರ್ಷಿಣಿ, ಗುರು ಶ್ರೀಮತಿ ಪದ್ಮಾ ಹೇಮಂತ್ ಅವರು ರಚಿಸಿರುವ, ’ದುರ್ಗಾಪರಮೇಶ್ವರಿ ಶಂಕರಿ ಶುಭಕರಿ…’ ಎಂದು ಆರಂಭಗೊಳ್ಳುವ ಸಾಹಿತ್ಯಕ್ಕೆ ಬಹಳ ಭಾವಪೂರ್ಣವಾಗಿ ನರ್ತಿಸಿದರುಕುಮಾರಿ ವರ್ಷಿಣಿ., ಈ ನೃತ್ಯದ ಸಂಚಾರಿ ಭಾಗದಲ್ಲಿ ಮಹಿಷಾಸುರ ವರ್ಧನೆಯ ವಿಷಯವನ್ನು ಅಳವಡಿಸಿಕೊಳ್ಳಲಾಗಿತ್ತು. ನೃತ್ಯದ ಕೊನೆಯ ಭಾಗದಲ್ಲಿ ಕಲಾವಿದರ ಪೋಷಕರನ್ನೂ ಬಳಸಿಕೊಂಡಿದ್ದ ರೀತಿಗೆ ಗುರುಗಳನ್ನು ಶ್ಲಾಘಿಸಲೇಬೇಕು.

ತಮ್ಮ ನೃತ್ಯ ಕಾರ್ಯಕ್ರಮದ ಕೊನೆಯ ಭಾಗವಾಗಿ ಸುಂದರವಾದ ಸಂತ ಭಾನುದಾಸರ ಮರಾಠಿ ಅಭಂಗ ಅನ್ನು ಸಮೂಹ ಸಂಯೋಜನೆಯಲ್ಲಿ ಎಲ್ಲಾ ಪ್ರತಿಭೆಗಳು ಸೇರಿ ಪ್ರಸ್ತುತ ಪಡಿಸಿದರು. ಭಜನ್ ರೂಪದಲ್ಲಿರುವ ಜಾನಪದ ಶೈಲಿಯ ಕರ್ಣಾನಂದಕರ ರಾಗ ಸಂಯೋಜನೆಯ ನೃತ್ಯದಲ್ಲಿನ ಭಕ್ತಿಯ ಪರಾಕಾಷ್ಠತೆ ಅಮೋಘವಾಗಿತ್ತು.


ಮಹಾವೀರ್ ನೃತ್ಯ ಸಂಸ್ಥೆಯ ನಿರ್ದೇಶಕರಾದ ಗುರು ಶ್ರೀಮತಿ ತನುಜ ಜೈನ್ ಅವರು ಮಾತನಾಡಿ, ಮಕ್ಕಳ ಶಿಸ್ತು ಪರಿಶ್ರಮವನ್ನು ಅಪಾರವಾಗಿ ಶ್ಲಾಘಿಸಿದರು. ನೃತ್ಯ ಕ್ಷೇತ್ರದಲ್ಲಿನ ಅವರ ಮುಂದಿನ ಬೆಳವಣಿಗೆಗೆ ಬಹಳಷ್ಟು ಸಲಹೆ ಸೂಚನೆಗಳನ್ನು ನೀಡಿದರು.

ರಮಣಶ್ರೀ ನೃತ್ಯ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾರದಾ ನಟರಾಜನ್ ಅವರು ಸಹ ಯುವ ಪ್ರತಿಭೆಗಳ ನೃತ್ಯ ಪ್ರಬುದ್ಧತೆಯನ್ನು ಮುಕ್ತಕಂಠದಿಂದ ಹೊಗಳಿದ್ದಲ್ಲದೆ ಗುರು ಶ್ರೀಮತಿ ಪದ್ಮ ಹೇಮಂತ್ ಅವರ ಕ್ರಮಬದ್ದ ಶಿಕ್ಷಣವನ್ನು ಮೆಚ್ಚಿ ಆ ಪ್ರತಿಭಾವಂತ ಪ್ರತಿಭೆಗಳಿಗೆ ಹಾರೈಸಿ ಶುಭ ಕೋರಿದರು.
ಡಾ. ಬಿ.ಎಸ್. ಪಾರಿಜಾತ ಅವರು ಮಾತನಾಡಿ, ಈ ಕಿರು ವಯಸ್ಸಿನಲ್ಲಿಯೇ ಯಾವುದೇ ಕಲೆಯನ್ನು ಈ ಮಟ್ಟಿಗೆ ಕಲಿಯಬೇಕಾದರೆ ಅದರ ಹಿಂದಿನ ಶ್ರಮ, ಶಿಸ್ತು, ಕಲೆಯ ಮತ್ತು ಗುರುಗಳ ಬಗೆಗಿನ ಭಕ್ತಿ ಎಷ್ಟು ಮುಖ್ಯವೆಂಬುದನ್ನು ತಿಳಿಸಿ ಹೇಳಿದರು.

ವಾದ್ಯ ಸಹಕಾರದಲ್ಲಿ ಈ ಯುವ ಪ್ರತಿಭೆಗಳಿಗೆ ಮತ್ತೊಬ್ಬ ಯುವ ಪ್ರತಿಭೆ, ಶೀತಲ್ ಹೇಮಂತ್ ಗಾಯನದಲ್ಲಿ ಸಹಕರಿಸಿದರೆ, ವಿದ್ವಾನ ಪಿ ಜನಾರ್ಧನ ರಾವ್ ಮೃದಂಗದಲ್ಲಿ, ವಿದ್ವಾನ್ ಶ್ರೀ ಗಣೇಶ್ ಕುಮಾರ್ ಕೊಳಲಿನಲ್ಲಿ, ವಿದ್ವಾನ್ ಬಿ.ಆರ್. ಹೇಮಂತ್ ಕುಮಾರ್ ವೈಲಿನ್’ನಲ್ಲಿ ನೃತ್ಯ ಗುರು ಶ್ರೀಮತಿ ಪದ್ಮ ಹೇಮಂತ್ ರವರ ನಟುವಾಂಗದೊಂದಿಗೆ ಸಹಕರಿಸಿದರು.

ಶ್ರೀಮತಿ ಮಾನಸ ಮಾನಸ್ ಕಾರ್ಯಕ್ರಮ ನಿರೂಪಿಸಿ, ಶ್ರೀ ರವಿಯವರು ರಂಗಸಜ್ಜಿಕೆ ಮತ್ತು ಬೆಳಕಿನ ನಿರ್ವಹಣೆಯ ಭಾರವನ್ನು ಹೊತ್ತಿದ್ದರು.

ಒಟ್ಟಾರೆ ಒಂದು ಸುಂದರ ನೃತ್ಯ ಸಂಜೆಗೆ ಅಂದು ಸೇವಾ ಸದನವು ಸಾಕ್ಷಿ ಆಯಿತು ಎಂದು ಹೇಳಬಹುದು.

Tags: BENGALURUDance ProgramGejje PoojeKannada NewsSolo performanceಏಕವ್ಯಕ್ತಿ ಪ್ರದರ್ಶನಗೆಜ್ಜೆ ಪೂಜೆನೃತ್ಯ ಕಾರ್ಯಕ್ರಮಬೆಂಗಳೂರುಮಹಾವೀರ್ ನೃತ್ಯ ಸಂಸ್ಥೆ
Share196Tweet123Send
Previous Post

ದೈಹಿಕ ನ್ಯೂನ್ಯತೆಯ ನಡುವೆಯೂ ಬಳ್ಳಾರಿಯ ಈ ‘ಉತ್ತೇಜ್’ ಮಾಡಿದ ಸಾಧನೆ ಎಂತಹುದ್ದು ಗೊತ್ತಾ?

Next Post

ಪತ್ರಿಕಾ ಸ್ವಾತಂತ್ರ ಹತ್ತಿಕ್ಕುವ ಯತ್ನ ತುರ್ತು ಪರಿಸ್ಥಿತಿ ನೆನಪಿಸುತ್ತಿದೆ: ಚಳ್ಳಕೆರೆ ಪತ್ರಕರ್ತರ ಖಂಡನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪತ್ರಿಕಾ ಸ್ವಾತಂತ್ರ ಹತ್ತಿಕ್ಕುವ ಯತ್ನ ತುರ್ತು ಪರಿಸ್ಥಿತಿ ನೆನಪಿಸುತ್ತಿದೆ: ಚಳ್ಳಕೆರೆ ಪತ್ರಕರ್ತರ ಖಂಡನೆ

ಪತ್ರಿಕಾ ಸ್ವಾತಂತ್ರ ಹತ್ತಿಕ್ಕುವ ಯತ್ನ ತುರ್ತು ಪರಿಸ್ಥಿತಿ ನೆನಪಿಸುತ್ತಿದೆ: ಚಳ್ಳಕೆರೆ ಪತ್ರಕರ್ತರ ಖಂಡನೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಭದ್ರಾವತಿ ನಗರಸಭೆ | 1.46 ಕೋಟಿಯ ಉಳಿತಾಯ ಬಜೆಟ್ ಮಂಡನೆ

ಭದ್ರಾವತಿ ನಗರಸಭೆ | 1.46 ಕೋಟಿಯ ಉಳಿತಾಯ ಬಜೆಟ್ ಮಂಡನೆ

March 14, 2026
ಪರಿಣಾಮಕಾರಿ ವಿಜ್ಞಾನ ಕಲಿಕೆಗೆ ಪ್ರಯೋಗಗಳು ಅತ್ಯಗತ್ಯ: ಪಾರ್ಥಸಾರಥಿ ಅಭಿಮತ

ಪರಿಣಾಮಕಾರಿ ವಿಜ್ಞಾನ ಕಲಿಕೆಗೆ ಪ್ರಯೋಗಗಳು ಅತ್ಯಗತ್ಯ: ಪಾರ್ಥಸಾರಥಿ ಅಭಿಮತ

March 14, 2026
ತೀರ್ಥಹಳ್ಳಿ | ತೋಟದಲ್ಲಿ ಬೆಂಕಿ: ಅಡಿಕೆ ಸಸಿ, ಕೃಷಿ ಪರಿಕರಗಳು ಅಗ್ನಿಗಾಹುತಿ

ತೀರ್ಥಹಳ್ಳಿ | ತೋಟದಲ್ಲಿ ಬೆಂಕಿ: ಅಡಿಕೆ ಸಸಿ, ಕೃಷಿ ಪರಿಕರಗಳು ಅಗ್ನಿಗಾಹುತಿ

March 14, 2026
ಆಸ್ಪತ್ರೆ – ವಿದ್ಯಾರ್ಥಿನಿಲಯಗಳಿಗೆ ಸಮರ್ಪಕ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಆಸ್ಪತ್ರೆ – ವಿದ್ಯಾರ್ಥಿನಿಲಯಗಳಿಗೆ ಸಮರ್ಪಕ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

March 13, 2026
ಮಾ.24, 25 ಶರಣ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷರಾಗಿ ಬೆಕ್ಕಿನ ಕಲ್ಮಠ ಶ್ರೀಗಳಿಗೆ ಆಹ್ವಾನ

ಮಾ.24, 25 ಶರಣ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷರಾಗಿ ಬೆಕ್ಕಿನ ಕಲ್ಮಠ ಶ್ರೀಗಳಿಗೆ ಆಹ್ವಾನ

March 13, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL