ಭದ್ರಾವತಿ: ಶಿಕ್ಷಕರು ಶಾಲೆಗಳಲ್ಲಿ ಪೂರಕ ವಾತಾವರಣ ನಿರ್ಮಿಸಿಕೊಳ್ಳುವಂತೆ ಜಿಪಂ ಮಾಜಿ ಸದಸ್ಯ ಎಸ್. ಕುಮಾರ್ ಹೇಳಿದರು.
ಅವರು ಮಂಗಳವಾರ ತಾಲೂಕಿನ ಬಾರಂದೂರು ಗ್ರಾಮದ ಹಳ್ಳಿಕೆರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚ ಮೇವ ಜಯತೆ ಮತ್ತು ಜಲಾಮೃತ ಕಾರ್ಯಕ್ರಮ ಮತ್ತು ಪೋಷಕರು ಹಾಗು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಸಿಗೆ ನೀರೆರುವ ಮೂಲಕ ಚಾಲನೆ ನೀಡಿದರು.
ಗ್ರಾಮ ಪಂಚಾಯಿತಿ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಉತ್ತಮ ಗುಣಮಟ್ಟದ 150 ಸಸಿಗಳನ್ನು ನೆಡಲಾಯಿತು. ಸಸಿಗಳನ್ನು ಪೋಷಿಸಲು ಶಿಕ್ಷಕರಿಗೆ ಮುಂದಾಳತ್ವ ಜವಾಬ್ದಾರಿ ನೀಡಲಾಯಿತು.
ಮುಖ್ಯೋಪದ್ಯಾಯ ಕೂಬಾನಾಯ್ಕ ಮಾತನಾಡಿ ರಾಜ್ಯ ಸರಕಾರದ ಸ್ವಚ್ಚ ಮೇವ ಜಯತೆ ಅಂಗವಾಗಿ ವೈಯಕ್ತಿಕ ಹಂತದಿಂದ ಸಮುದಾಯ ಹಂತದವರೆವಿಗೆ ಸ್ವಚ್ಚತೆ ಕುರಿತು ಅರಿವು ಮೂಡಿಸಲು ಶಾಲಾ ಹಂತದಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ವಚ್ಚತೆ ಕುರಿತು ಪೋಷಕರಿಗೆ, ಮಕ್ಕಳಿಗೆ ಹಾಗು ಜನಪ್ರತಿನಿಧಿಗಳಿಗೆ ಸೋಪಿನಿಂದ ಸ್ವಚ್ಚತೆಯ ವಿಧಾನದ ಅರಿವು ಮೂಡಿಸಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಅಲಮೇಲಮ್ಮ, ಮಾಜಿ ಉಪಾಧ್ಯಕ್ಷ ಎಚ್.ಡಿ.ಶಿವಶಂಕರ್, ಹಾಲು ಉತ್ಪಾಧಕರ ಸಹಕಾರ ಸಂಘದ ಅಧ್ಯಕ್ಷ ಬಸವಶೆಟ್ಟಿ, ಪಿಡಿಒ ಜಿ.ವೆಂಕಟೇಶ್, ತಮ್ಮೇಗೌಡ, ಜೆ.ಭದ್ರೇಶ್ ಮುಂತಾದವರಿದ್ದರು. ಶಿಕ್ಷಕಕರು, ಸಿಬ್ಬಂದಿ ಹಾಗು ಗ್ರಾಮಸ್ಥರು ಪಾಲ್ಗೊಂಡಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post