ಭದ್ರಾವತಿ: ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ಹಳೇ ನಗರದ ಸಂಚಿಯ ಹೊನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ನಡೆದು ಗುರುವಾರ ಫಲಿತಾಂಶ ಪ್ರಕಟಗೊಂಡಿದೆ. ಸಂಘದ ಹಾಲಿ ಅಧ್ಯಕ್ಷರಾಗಿದ್ದ ಎನ್. ಕೃಷ್ಣಪ್ಪ ಅವರ ಬಣವೇ ಮತ್ತೊಮ್ಮೆ ಮೇಲುಗೈ ಸಾಧಿಸಿದೆ.
ಸರಕಾರದ ನಾನಾ ಇಲಾಖೆಗಳಿಂದ ಒಟ್ಟು 32 ಸ್ಥಾನಗಳಿಗೆ ಚುನಾವಣೆ ನಡೆದು 19 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. ಉಳಿದ 13 ಸ್ಥಾನಗಳಿಗೆ ಚುನಾವಣೆ ನಡೆಸಲಾಗಿ ಕಂದಾಯ ಇಲಾಖೆಯಿಂದ 2 ಸ್ಥಾನಗಳಿಗೆ ಸಿ. ಮಂಜಾನಾಯ್ಕ ಮತ್ತು ಪಿ. ಪ್ರೇಮ್’ಕುಮಾರ್, ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಂದ 3 ಸ್ಥಾನಕ್ಕೆ ಎಂ.ಎಸ್. ಬಸವರಾಜ್, ಎಸ್.ಕೆ. ಮೋಹನ್, ಎ. ರಂಗನಾಥ್ ಗೆಲುವು ಸಾಧಿಸಿದರೆ, ಪ್ರೌಢಶಾಲೆಗಳಿಂದ 1 ಸ್ಥಾನಕ್ಕೆ ಬಿ.ಸಿದ್ದಬಸಪ್ಪ, ಕಿರಿಯ ಮತ್ತು ಪದವಿ ಕಾಲೇಜುಗಳಿಂದ 1 ಸ್ಥಾನಕ್ಕೆ ಎ.ಕೆ. ಚಂದ್ರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಎಸ್ಐ ಆಸ್ಪತ್ರೆ ಹಾಗೂ ಆಯುಷ್ ಇಲಾಖೆಯಿಂದ 4 ಸ್ಥಾನಗಳಿಗೆ ನೀಲೇಶ್ರಾಜ್, ಕೆ. ಶ್ರೀಕಾಂತ್, ಎಚ್.ಎಂ. ನಾಗರಾಜಪ್ಪ, ಪಿ.ಕೃಷ್ಣ, ಕೈಗಾರಿಕಾ ತರಬೇತಿ ಸಂಸ್ಥೆಯಿಂದ 1 ಸ್ಥಾನಕ್ಕೆ ಎಂ. ಪುಟ್ಟಲಿಂಗಮೂರ್ತಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆಯಿಂದ 1 ಸ್ಥಾನಕ್ಕೆ ಆರ್.ಅಶೋಕ್ ರಾವ್ ಗೆಲುವು ಸಾಧಿಸಿದ್ದಾರೆ.
ಅವಿರೋಧ ಆಯ್ಕೆ
ಕೃಷಿ ಇಲಾಖೆಯ ಕೆ.ವಿ ಕೃಷ್ಣಮೂರ್ತಿ, ಪಶುಸಂಗೋಪನೆ ಇಲಾಖೆಯ ಡಿ.ಎಸ್ ರಾಜಪ್ಪ, ವಾಣಿಜ್ಯ, ತೆರಿಗೆ ಮತ್ತು ಮೀನುಗಾರಿಕೆ ಇಲಾಖೆಯ ಎಸ್.ವಿ.ಎಂ ಸ್ವಾಮಿ, ಸಾಂಖ್ಯಿಕ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಂಜಯ ಬಾಗೇವಾಡಿ, ಸಮಾಜ ಕಲ್ಯಾಣ ಇಲಾಖೆಯ ಎನ್. ಕೃಷ್ಣಪ್ಪ, ಅರಣ್ಯ ಇಲಾಖೆಯ ಬಿ.ಆರ್. ದಿನೇಶ್ ಕುಮಾರ್ ಅಬಕಾರಿ ಮತ್ತು ಕಾರ್ಮಿಕ ಇಲಾಖೆಗೆ ಎಂ.ಡಿ. ಮಲ್ಲಿಕಾರ್ಜುನ, ಕೈಗಾರಿಕೆ, ವಾಣಿಜ್ಯ ಇಲಾಖೆ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ರಾಜ್ಕುಮಾರ್, ಎಪಿಎಂಸಿ ಮಾರುಕಟ್ಟೆಯ ಆರ್. ಜನಾರ್ಧನ, ನ್ಯಾಯಾಂಗ ಇಲಾಖೆಯ ವಿಕ್ರಾಂತ ಬಿ ಕೋಲೂರ, ತಾಲೂಕು ಪಂಚಾಯಿತಿಯ ಎಸ್. ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಾಗರತ್ನ, ಸಹಕಾರ ಮತ್ತು ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಇಲಾಖೆಯ ಡಿ. ಉಮೇಶ್, ತಾಂತ್ರಿಕ ಶಿಕ್ಷಣ ಇಲಾಖೆಯ ಎ.ಜೆ. ರಂಗನಾಥ ಪ್ರಸಾದ್, ಕಂದಾಯ ವ್ಯವಸ್ಥೆ, ಭೂ ದಾಖಲೆಗಳು ಮತ್ತು ನೋಂದಣಿ ಮುದ್ರಾಂಕ ಇಲಾಖೆಗೆ ಎಸ್. ಸುಬ್ರಮಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸತತ ಹ್ಯಾಟ್ರಿಕ್ ಗೆಲುವು ಕಂಡವರು
ಸಮಾಜ ಕಲ್ಯಾಣ ಇಲಾಖೆಯ ಎನ್. ಕೃಷ್ಣಪ್ಪ ಅವರು ಸತತ ನಾಲ್ಕನೆ ಬಾರಿಗೆ ಗೆಲುವು ಸಾಧಿಸಿ, ಮೂರು ಭಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿರುವ ಎಂ.ಎಸ್. ಬಸವರಾಜ್ ಹಾಗು ಎಸ್.ಕೆ. ಮೋಹನ್, ತಾಂತ್ರಿಕ ಶಿಕ್ಷಣ ಇಲಾಖೆಯ ಎ.ಜೆ. ರಂಗನಾಥ ಪ್ರಸಾದ್ ಸತತ 3ನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಚುನಾವಣಾಧಿಕಾರಿಯಾಗಿ ನಿವೃತ್ತ ಉಪ ತಹಸೀಲ್ದಾರ್ ಮೈಲಾರಪ್ಪ ಹಾಗು ಶಂಕರ್ ಜೋಯಿಸ್ ಉಪ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಅಧ್ಯಕ್ಷ, ಖಜಾಂಚಿ ಹಾಗು ರಾಜ್ಯ ಸಮಿತಿಗಳಿಗೆ ಜೂ: 17 ರಿಂದ ಜೂ: 20 ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಜೂ: 27 ರಂದು ಚುನಾವಣೆ ನಡೆಯಲಿದೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post