ತುಳುನಾಡಿನ ಜನಪದ ಕಲೆ ಎಂದೆ ಪ್ರಸಿದ್ದಿ ಹೊಂದಿರುವ ಕೋಟಿ ಚೆನ್ನಯ್ಯ ಕಂಬಳ ನಡೆಯುವಂತಹ ಒಂಟಿಕಟ್ಟೆ ಕಡಲಕೆರೆ ನಿಸರ್ಗ ಧಾಮದಲಿ ನಾನು ನೋಡಿದ ಹುಡುಗನೆ ಯಕ್ಷಕುವರ ಮೂಡಬಿದ್ರೆಯ ಮಂದಾರ ಪೂಜಾರಿ ಸಾಧನೆಯಲ್ಲಿ ಯಕ್ಷಗಾನದ ಮುತ್ತು.


ಮೂಲತಃ ಮೂಡಬಿದ್ರೆಯ ಸುಧಾಕರ್ ಪೂಜಾರಿ ಮತ್ತು ಮಾಯ ಪೂಜಾರಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಮಂದಾರ ಮೊದಲನೆಯ ಸುಪುತ್ರ. ರೋಟರಿ ಆಂಗ್ಲ ಮಾಧ್ಯಮಶಾಲೆಯಲ್ಲಿ 9ನೆಯ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ 13 ವರ್ಷದ ಈ ಬಾಲಕ ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸಾಧನೆಯನ್ನೂ ಮಾಡಿ ಮಿಂಚುತ್ತಿದ್ದಾನೆ.

ಸುಮಾರು 500ಕ್ಕೂ ಹೆಚ್ಟಿನ ಯಕ್ಷಗಾನ ವೇದಿಕೆಗಳಲ್ಲಿ ಪ್ರದರ್ಶನ ನೀಡಿರುತ್ತಾನೆ. ಯಾವ ಪಾತ್ರವನ್ನು ಕೊಟ್ಟರು ಸಲಿಸಾಗಿ ಮಾಡುವ ಮಂದಾರ ಪೂಜಾರಿ, ದೇವಿಮಹಾತ್ಮೆ, ಕೋಟಿ ಚೆನ್ನಯ, ಭಕ್ತ ಮಾರ್ಕಂಡೆಯದ ಷಣ್ಮುಖ, ಗುರುದಕ್ಷಿಣೆಯ ಕೃಷ್ಣ, ವೀರ ಮಣಿ ಶುಭಾಂಗ, ನಾಗತಂಬಿಲದ ವಿಜಯ, ಚಾಮುಂಡಿ, ಗುಳಿಗ ಸುದರ್ಶನ ವಿಜಯ ಸುದರ್ಶನ ಹನುಮೋಧ್ಭವದ, ಹನುಮಂತ ಸೇರಿದಂತೆ ಹಲವು ಪಾತ್ರಗಳಿಗೆ ಜೀವ ತುಂಬಿರುತ್ತಾನೆ. ಪ್ರಸ್ತುತ ಧಿಗಿಣ ದಿವಿಜ ಯಕ್ಷ ನಾಟ್ಯ ಕಲಾ ಕೇಂದ್ರ ಮೂಡಬಿದ್ರೆ ತಂಡದ ಸರ್ವ ಸದಸ್ಯರಿಗೂ ಅಚ್ಚುಮೆಚ್ಚಿನ ಹುಡುಗನಾಗಿದ್ದಾನೆ.


ಯಕ್ಷನಂದನ ಎಂಬ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾನೆ.

ಇವರಲ್ಲಿರುವ ಕಲಾ ಪ್ರತಿಭೆಯನ್ನು ಕಂಡು ಸದಾ ಪ್ರೋತ್ಸಾಹ ನೀಡುತ್ತಿರುವವರು ತಂದೆ ತಾಯಿ, ಶಾಲಾ ಮುಖ್ಯೋಪಾಧ್ಯಾಯರಾದ ವಿನ್ಸೆಂಟ್ ಡಿಕೋಸ್ತ, ಗಜಾನನ ಮರಾಠೆ, ನಾಟ್ಯ ಗುರು ರಕ್ಷಿತ್ ಪಡ್ರೆ, ಕುಮುದಾಕ್ಷ ಕೊಟ್ಯಾನ್, ಸುಪ್ರಿತ್ ರೈ ಕೊಲ್ಯ ನಿತೀನ್ ತೆಂಕಕಾರಂದೂರ್, ಮಾಧವ ಕೊಯ್ತಮಜಲ್, ಜಗದೀಶ್, ಕರುಣಾಕರ್ ಶೆಟ್ಟಿಗಾರ್, ಪುಷ್ಪರಾಜ್ ಕೈಕಂಬ, ಚರಣ್ ರಾಜ್ ಇವರೆಲ್ಲರ ಸದಾ ಪ್ರೋತ್ಸಾಹ ಮತ್ತು ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯ್ಯ ದೈವಗಳ ಹಾಗೂ ನಾರಾಯಣ ಗುರುಗಳ ಆರ್ಶಿವಾದದಿಂದ ಮಿನುಗುತ್ತಿರುವ ಇವರು ಪ್ರತಿ ಕ್ಷೇತ್ರದಲ್ಲಿ ಇನ್ನಷ್ಟೂ ಎತ್ತರಕ್ಕೆ ಬೆಳೆದು ಸಾಧನೆಯ ಗುರಿ ಮುಟ್ಟಲಿ ಎಂಬುವುದೇ ನಮ್ಮ ಆಶಯ.
(ಲೇಖನ, ಚಿತ್ರಕೃಪೆ, ವೀಡಿಯೋ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ)








Discussion about this post