ಚಿಕ್ಕಬಳ್ಳಾಪುರ: ಭಾನುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೂವರು ಮಹಿಳೆಯರ ಕುಟುಂಬಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್.ವಿ. ಮಂಜುನಾಥ್ ಅವರು ಸಹಾಯಧನ ವಿತರಿಸಿದರು.
ಭಾನುವಾರ ಆಟೋ ಹಾಗೂ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕದರಹಳ್ಳಿ ಗ್ರಾಮದ ಯಶೋಧಮ್ಮ, ದ್ರೋಣಕುಂಟೆ ಗ್ರಾಮದ ಸುನಿತಾ ಹಾಗೂ ಕೂರುಡಿ ಗ್ರಾಮದ ಧನಲಕ್ಷ್ಮಮ್ಮ ಮೃತಪಟ್ಟಿದ್ದರು.
ಇಂದು ಈ ಗ್ರಾಮಗಳಿಗೆ ಭೇಟಿ ನೀಡಿದ ಎಚ್.ವಿ. ಮಂಜುನಾಥ್, ಮೃತರಾದವರ ಕುಟುಂಬಸ್ಥರನ್ನು ಕಂಡು ಸಾಂತ್ವನ ಹೇಳಿದರು. ಇದೇ ವೇಳೆ ಆಪತ್ ಸಹಾಯಧನವಾಗಿ 10 ಸಾವಿರ ರೂ.ಗಳನ್ನು ನೀಡಿದರು.
ಮುಖಂಡರಾದ ನರಸಿಂಹಮೂರ್ತಿ, ಕಾಂತಣ್ಣ, ಶ್ರೀನಿವಾಸಗೌಡ, ಅಂಬರೀಶ್, ರಮೇಶ್, ಅಶ್ವತ್ಥಪ್ಪ, ರಾಮಕೃಷ್ಣಪ್ಪ ದೇವರಾಜ ಇದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post