No Result
View All Result
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು
English Articles

A Second Chance at Life Through Deceased Organ Donation

by ಕಲ್ಪ ನ್ಯೂಸ್
February 3, 2026
0

Kalpa Media House  |  Bengaluru, Whitefield  | For 48-year-old Unnikrishnan, life for several years revolved around dialysis sessions, medications, and...

Read moreDetails
Bhaskara Parva: Generations of Journalism Students Reunite to Honour a Teacher Who Shaped Their Lives

Bhaskara Parva: Generations of Journalism Students Reunite to Honour a Teacher Who Shaped Their Lives

February 2, 2026
NITK Surathkal Inaugurates First Annual Sports Festival- ‘Endeavor 2026’

NITK Surathkal Inaugurates First Annual Sports Festival- ‘Endeavor 2026’

February 1, 2026
Samsung Sets Two Guinness World Records with its India

Samsung Sets Two Guinness World Records with its India

January 31, 2026
ಮೈಸೂರು | ಮಹಾರಾಣಿ ಮಹಿಳಾ ವಿದ್ಯಾರ್ಥಿನಿಯರಿಗೆ ಆಹಾರ ಹಾಗು ಆತಿಥ್ಯೋದ್ಯಮ ಕೌಶಲ್ಯ ತರಬೇತಿ

Maharani’s Science College Collaboration Empowers Students with Industry-Ready Skills

January 31, 2026
  • Advertise With Us
  • Grievances
  • About Us
  • Contact Us
Thursday, February 5, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಇದು ಜಾತಿವಾದವಲ್ಲ, ಜಾತಿ ಜಾಗೃತಿ: ಈ ಸಮರ್ಥ ನಾಯಕನಿಗೆ ತಕ್ಕ ಸ್ಥಾನ ನೀಡಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 22, 2019
in Army
0
ಇದು ಜಾತಿವಾದವಲ್ಲ, ಜಾತಿ ಜಾಗೃತಿ: ಈ ಸಮರ್ಥ ನಾಯಕನಿಗೆ ತಕ್ಕ ಸ್ಥಾನ ನೀಡಿ
Share on FacebookShare on TwitterShare on WhatsApp

ದೇಶದಲ್ಲಿ ಎಲ್ಲಾ ಜಾತಿಯವರೂ ಉತ್ತಮ ಸ್ಥಿತಿವಂತರಾದಾಗಲೇ ದೇಶಕ್ಕೆ ಬಲಿಷ್ಟತೆ ಬರುತ್ತದೆ. ದೇಶ ಎಂಬುದು ಒಂದು ದೊಡ್ಡ ಫಲ ಬರುವ ವೃಕ್ಷ. ಒಂದು ವೃಕ್ಷವೆನಿಸುವುದು ಅದಕ್ಕೆ ರೆಂಬೆ ಕೊಂಬೆ, ಬೇರು, ಹಸಿರೆಲೆ ಚಿಗುರೆಲೆ, ಹಣ್ಣೆಲೆ, ಫಲ-ಪುಷ್ಪಗಳು ಕೊಂಬೆಯದ್ದಾಗಿ ತರಗೆಲೆ ಇವುಗಳೆಲ್ಲ ಇದ್ದಾಗ ಆ ವೃಕ್ಷವನ್ನು ಆಧರಿಸಿ ನೆರಳಿಗಾಗಿಯೋ, ಹಸಿವು ನೀಗಿಸಿಕೊಳ್ಳುವುದಕ್ಕಾಗಿಯೋ, ಔಷಧಿಯನ್ನು ಪಡೆಯುವುದಕ್ಕಾಗಿಯೋ ಪಶು ಪಕ್ಷಿ, ಹುಳ-ಹುಪ್ಪಟೆ, ದುಂಬಿಗಳು ಎಲ್ಲವೂ ಸೇರಿದಂತೆ ಮನುಷ್ಯನೂ ಕೂಡಾ ಆಶ್ರಯ ಪಡೆಯುತ್ತಾನೆ. ಇಲ್ಲಿ ಜಾತಿ ತಾರತಮ್ಯ ಬೇಧವೇ ಇರುವುದಿಲ್ಲ. ಇದೊಂದು ಒಗ್ಗಟ್ಟಿಗಾಗಿ ಇರುವಂತಹ ವೇದಿಕೆ. ಅದೇ ರೀತಿ ಎಲ್ಲಾ ಜಾತಿಯವರು ಬೇಧ ಭಾವ ಇಲ್ಲದೆ ಸಮಾಜದಲ್ಲಿ ಬೆರೆತರೆ ಅದು ಸಮಾಜದ ಸ್ವಾಸ್ಥ್ಯವನ್ನು ಇನ್ನಷ್ಟು ಬಲಿಷ್ಠ ಮಾಡುತ್ತದೆ.

ಒಕ್ಕಲಿಗ ಸಮುದಾಯಕ್ಕೆ ಭಾರೀ ನಷ್ಟ
ಈ ವಿಚಾರದಲ್ಲಿ ಈಗ ನಾನಿಂದು ಒಕ್ಕಲಿಗರ ವಿಚಾರ ಬರೆಯಲು ಆಸಕ್ತನಾಗಿದ್ದೇನೆ. ಮೊದಲಾಗಿ ಕರ್ನಾಟಕವನ್ನೇ ತೆಗೆದುಕೊಳ್ಳೋಣ. ಇಲ್ಲಿ ಒಕ್ಕಲಿಗರು ಬಲಿಷ್ಠ ಸಮುದಾಯ. ಆದರೆ ಇದರ ನಾಯಕತ್ವದ ಲಾಭ ಪಡೆದು ಒಕ್ಕಲಿಗರಿಗೆ ತಲೆ ತಗ್ಗಿಸುವಂತೆ ಮಾಡಿದವರೂ ಕಾಣುತ್ತಾರೆ. ಅಂದರೆ ಆ ನಾಯಕರುಗಳಿಗೆ ಮಾರ್ಗದರ್ಶನದ ಕೊರತೆ ಎಂದೇ ಹೇಳಬಹುದು. ಯಾವ್ಯಾವುದೋ ಪಕ್ಷಗಳ ಬಲವರ್ಧನೆಗಾಗಿ ಮಾಡಬಾರದ್ದನ್ನು ಮಾಡಿ ಅಥವಾ ಸ್ವಾರ್ಥದಿಂದ ಒಕ್ಕಲಿಗರ ಮರ್ಯಾದೆಯನ್ನು ಮಣ್ಣುಪಾಲಾಗುವಂತೆ ಮಾಡಿದ್ದು ಕಾಣಬಹುದು. ಮೇಲ್ನೋಟಕ್ಕೆ ಒಕ್ಕಲಿಗರ ವಿರೋಧಿಗಳಿಗೆ ಇದು ಸಂತಸ ತಂದಿದ್ದರೂ ಇಡೀ ರಾಜ್ಯಕ್ಕೆ ಆ ಸಮುದಾಯದ ಪಥನವು ಭಾರೀದೊಡ್ಡ ನಷ್ಟವೇ. ಹೀಗೇ ಮುಂದುವರೆದರೆ ಅಳಿದೂರಿಗೆ ಉಳಿದವನೇ ಅರಸ ಎಂಬಂತಾದೀತು. ಹಿಂದೆ ಚಾಣಕ್ಯನಂತವರು ಜಾತಿಗಳನ್ನು ಗುರುತಿಸಿ, ಅವರವರಿಗೆ ತಕ್ಕುದಾದ ಜವಾಬ್ದಾರಿಯನ್ನು ನೀಡಿ ದೇಶ ಕಟ್ಟಿದ್ದರು. ಅದೇ ಪಾಠ ಮುಂದುವರೆಯುತ್ತಾ ಬಂದರೂ, ಹಣದ ದಾಹ, ಸ್ವಾರ್ಥಗಳು ಜಾತಿಗೇ ಮಾರಕವಾಯ್ತು.

ಇದು ಧ್ವನಿ ಕುಗ್ಗಿಸುವಂತಹದ್ದೇ

File Photo

ಡಿಕೆಶಿಯಂತಹ ಉತ್ತಮ ನಾಯಕತ್ವದ ಲಾಭವನ್ನು ಪಡೆದ ಕಾಂಗ್ರೆಸ್ ಪಕ್ಷವು ಡಿಕೆಶಿ ಸಹಿತ ಇಡೀ ಸಮುದಾಯಕ್ಕೇ ಹಿಂಸೆ ನೀಡಿದ್ದು ಕಣ್ಣಾರೆ ನೋಡಬಹುದು. ಅಂದರೆ ಡಿಕೆಶಿಯವರಿಗೆ ಮಾರ್ಗದರ್ಶನ ಸರಿಯಾಗಿ ಇರುತ್ತಿದ್ದರೆ ಅವರು ಕರ್ನಾಟಕದ ಮುಖ್ಯಮಂತ್ರಿಯಾಗುವ ಯೋಗ ಪಡೆಯಬಹುದಾಗಿತ್ತು. ಇನ್ನೊಂದೆಡೆ ಅಂಬರೀಷ್ ಅವರಿಗೂ ಇದೇ ರೀತಿಯ ಮಾನಸಿಕ ಹಿಂಸೆಯಾಯ್ತು. ಉನ್ನತ ಸ್ಥಾನದಿಂದ ಕಿತ್ತು ಹಾಕಲಾಯ್ತು. ಸ್ಥಾನ ಮಾನ ಕೊಡದೆ ಅವಮಾನಿಸಲಾಯ್ತು. ಒಂದು ವೇಳೆ ಇನ್ನೊಬ್ಬ ಒಕ್ಕಲಿಗನಿಗೆ ಉತ್ತಮ ಮಾರ್ಗದರ್ಶನ ನೀಡಿ ಒಳ್ಳೆಯ ನಾಯಕತ್ವ ನೀಡುತ್ತಿದ್ದರೆ ಒಂದು ಕ್ಷಮೆ ಇತ್ತು. ಹಾಗೆ ಮಾಡಲಿಲ್ಲ. ಕಾಟಾಚಾರಕ್ಕೆ ಮೆರವಣಿಗೆ ಪ್ರತಿಭಟನೆ ನಡೆಸಿ ಕೈ ತೊಳೆದುಕೊಂಡರು. ಇನ್ನೊಂದಡೆ ಜೆಡಿಎಸ್ ಒಕ್ಕಲಿಗ ನಾಯಕತ್ವದಲ್ಲಿ ಮುಂದುವರೆದಿದ್ದರೂ, ಕಾಂಗ್ರೆಸ್ಸಿನೊಡನೆ ಸೇರಿ ತಮ್ಮ ನಾಯಕತ್ವದ ಸರ್ವಾಧಿಕಾರ ತೋರಿಸಿ ಪಥನವಾದರು. ಇದೆಲ್ಲವೂ ಒಂದು ರೀತಿಯಲ್ಲಿ ಒಕ್ಕಲಿಗ ನಾಯಕರಿದ್ದರೂ ಒಕ್ಕಲಿಗರ ಧ್ವನಿ ಕುಗ್ಗಿಸುವಂತದ್ದೇ ಎಂದು ಹೇಳಬೇಕು.

ಬಿಜೆಪಿಯಲ್ಲೂ ಕಮಾಂಡಿಂಗ್ ಇರುವ ನಾಯಕರು ಎಲ್ಲ ಸಮುದಾಯಕ್ಕೆ ಬೇಕು
ಇನ್ನು ಬಿಜೆಪಿಯನ್ನು ನೋಡಿದರೂ ಇಲ್ಲೂ ಅದೇ ರೀತಿ ನೀತಿ. ಬಿಜೆಪಿಯಲ್ಲಿ ಒಕ್ಕಲಿಗರ ಬಲ ಇಲ್ಲವೇ? ಇದೆ. ಆದರೆ ಸರಿಯಾದ ನಾಯಕತ್ವ ಇಲ್ಲ. ನಾಯಕತ್ವ ಎಂದರೆ commanding ಇರುವ ವ್ಯಕ್ತಿತ್ವ ಇರಬೇಕು. ಇದು ಎಲ್ಲಾ ಸಮುದಾಯದಲ್ಲೂ ಇರಲೇಬೇಕು. ಕುರುಬ, ಲಿಂಗಾಯತ, ಬ್ರಾಹ್ಮಣ ಇತ್ಯಾದಿ ಎಲ್ಲಾ ಸಮುದಾಯದಲ್ಲೂ ಇಂತಹ ನಾಯಕರಿರಬೇಕು. commanding ಎಂದರೆ ಒತ್ತಡ ಹಾಕಿ ಮತ ಹಾಕಿಸುವುದೊ, ಬೆದರಿಸುವುದೋ ಅಲ್ಲ. ಆ ಸಮುದಾಯದಲ್ಲಿ ತಪ್ಪುಗಳಾಗದಂತೆ ಸರಿಪಡಿಸುತ್ತಾ, ಅವರನ್ನು ಪ್ರಬುದ್ಧರನ್ನಾಹಿಸಿ, ಒಳ ಒಳಗೆ ಇನ್ನೊಬ್ಬ ಬಲಿಷ್ಟನನ್ನು ತಯಾರು ಮಾಡಬೇಕು. ಬಲಿಷ್ಠರಾಗಬೇಕಾದರೆ ದೇಶಪ್ರೇಮ, ವ್ಯವಹಾರ ಜ್ಞಾನ, ಸಂಘಟನಾ ಸಾಮರ್ಥ್ಯ ಇರುವಂತದ್ದು. ಈಗ ಇದರೊಳಗೆ ಲಾಬಿ ನಡೆಸಿ ಬಲಿಷ್ಟರಿಗೆ ಸರಿಯಾದ ಸ್ಥಾನಮಾನ ನೀಡದೆ sidelineಗೆ ಹಾಕುವಂತಹ ಕೆಲಸ ನಡೆಯುತ್ತಿರುವುದು ದುಃಖದ ವಿಚಾರ. ಬಿಜೆಪಿಯಲ್ಲಿ ಆರ್. ಅಶೋಕ್, ಸಿ.ಟಿ. ರವಿ ಇದ್ದರೂ ಅವರ ಏಳಿಗೆ, ಕೆಲಸಗಳು ತೃಪ್ತಿಕರ ಆಗಿಲ್ಲ. ಯಾಕೆಂದರೆ ಅವರಿಗೆ ಸಂಘಟನಾ ಜವಾಬ್ದಾರಿ ಅಂತಹ ಪ್ರಮಾಣದಲ್ಲಿ ನೀಡಿಲ್ಲ. ಆದರೆ ಅವರಿಗೂ ಎದ್ದು ನಿಂತು ಕೇಳುವ ಸಾಮರ್ಥ್ಯ ಇಲ್ಲ. ಯಾಕೆಂದರೆ ಪರ್ಯಾಯ ನಾಯಕರನ್ನು ಅವರು ಬೆಳೆಸಲಿಲ್ಲ.


ನಾನು ನೋಡುತ್ತಿರುವಂತೆ ಪ್ರಕರ ವಾಗ್ಮಿ, ಉತ್ಸಾಹಿ, ಕರ್ನಾಟಕ ರಾಜ್ಯದ ಭೌಗೋಳಿಕ ಪರಿಜ್ಞಾನ ಇದ್ದಂತಹ ವ್ಯಕ್ತಿ ನಟ ಜಗ್ಗೇಶ್ ಅವರು. ಆದರೆ ಬಿಜೆಪಿಯು ಅವರ ವ್ಯಕ್ತಿತ್ವವನ್ನರಿತು ಕೊಟ್ಟಂತಹ ಜವಾಬ್ದಾರಿ ಏನೂ ಸಾಲದು. ಅವರಿಗೆ ಬಿಜೆಪಿಯಲ್ಲಿ ಉತ್ತಮ ಜವಾಬ್ದಾರಿ ನೀಡಿ, ಒಕ್ಕಲಿಗರ ಒಂದು ಮೇರು ಸ್ವರವನ್ನಾಗಿಸಬಹುದಿತ್ತು ಮತ್ತು ಅದನ್ನು ನಿಭಾಯಿಸುವ ಸಾಮರ್ಥ್ಯ ಅವರಿಗೆ ಇತ್ತು. ಹೌದು ಒಕ್ಕಲಿಗರಿಗೆ ಪ್ರಾಧಾನ್ಯತೆ ನೀಡಿದ್ದೇವೆ ಎಂದು ದುರ್ಬಲ ಒಕ್ಕಲಿಗರನ್ನು ಕುಳ್ಳಿರಿಸಿದರೆ ಹೇಗೆ? ಆ ದುರ್ಬಲರು ಪ್ರಾಮಾಣಿಕರೂ ಆಗಿರಬಹುದು ಅಥವಾ ಒಳ್ಳೆಯ ಆಡಳಿತಗಾರರೂ ಆಗಿರಬಹುದು. ಆದರೆ ಅವರಲ್ಲಿ ಅಂತಹ ಒಂದು ಸೇನಾನಿತ್ವ ಇಲ್ಲದಿದ್ದರೆ ಇದು ಆ ಸಮುದಾಯದ ಶಕ್ತಿಗೆ ಕೊರತೆಯೇ.

ಜಗ್ಗೇಶ್ ಅವರ ಸಾಮರ್ಥ್ಯಕ್ಕೆ ತಕ್ಕ ಸ್ಥಾನ ಬೇಕು
ನನ್ನ ಲೆಕ್ಕಾಚಾರ ಪ್ರಕಾರ ಈಗ ಬಿಜೆಪಿ ಮಾಡಬೇಕಾದ ಮುಖ್ಯ ಕೆಲಸ ಎಂದರೆ ಒಕ್ಕಲಿಗರ ಶಕ್ತಿಯನ್ನು ಹೆಚ್ಚಿಸಬೇಕಾದುದು ಮತ್ತು ಆ ಸಮುದಾಯವನ್ನು ಪ್ರಬುದ್ದ ಮತ್ತು ಅಡ್ಡದಾರಿ ಹಿಡಿಯದಂತೆ ಮಾಡಬೇಕಾಗಿದೆ. ಈಗ ಜಗ್ಗೇಶ್ ಅವರಿಗೆ ಆ ಸಾಮರ್ಥ್ಯ ಇದೆ. ಇನ್ನೊಂದು ಹದಿನೈದು ವರ್ಷದ ಬಳಿಕ ಅವರಿಗೆ ಜವಾಬ್ದಾರಿ ಕೊಟ್ಟರೇನು ಬಿಟ್ಟರೇನು? ಕಾಲಕ್ಕೆ ತಕ್ಕಂತ ನಾಯಕತ್ವ ಇರಬೇಕು. ಕೇವಲ ಓಟಿನ ಸಮಯದಲ್ಲಿ ವೇದಿಕೆಯಲ್ಲಿ ಜಗ್ಗೇಶ್ ಉತ್ತಮ ಭಾಷಣಗಾರ, ಅವರು ಬಿಜೆಪಿಗೆ ಬೇಕು ಎಂದರೆ ಅದು ಕೇವಲ ಪಕ್ಷಕ್ಕಾಗಿ ಮಾತ್ರವೇ ಆಯಿತೇ ವಿನಃ ಸಮುದಾಯಕ್ಕೆ ಆಗಲಾರದು. ಪಕ್ಷವೂ ಬೆಳೆಯಬೇಕು, ಪಕ್ಷದ ಬೆಳವಣಿಗೆಗೆ ಸಮುದಾಯಗಳ ಬಲಿಷ್ಠತೆ ಕೊಡುಗೆಗಳೂ ಬೇಕು. ಹೀಗಿದ್ದಾಗ ರಾಜ್ಯ, ದೇಶವು ಉದ್ದಾರ ಆಗುತ್ತದೆ.

ಮಹಾಭಾರತದಲ್ಲಿ ಧೃತರಾಷ್ಟ್ರನಿಗೆ ಕೃಷ್ಣನು ಹೇಳಿದ ಮಾತು ನೆನಪಾಗುತ್ತದೆ. ಕೌರವ ಪಾಂಡವರು ಅನ್ಯೋನ್ಯವಾಗಿ ಬಲಿಷ್ಠರಿದ್ದರೆ ಈ ದೇಶಕ್ಕೆ ಹೊರಗಿನ ವಿದೇಶಿ ದುಷ್ಟರಿಂದ ಅಪಾಯ ಇದೆಯೇ ಎಂದಿದ್ದ.

ಅದೇ ರೀತಿ ಜಾತಿಬೇಧ ಇಲ್ಲದ ಜಾತಿ ಸಮುದಾಯದ ಬಲಿಷ್ಠತೆ ಬೇಕೇ ಬೇಕು. ಜಗ್ಗೇಶ್ ಅವರಿಗೆ ಪಕ್ಷದೊಳಗೆ ಸಂಘಟನಾ ಸಾಮರ್ಥ್ಯ ಹೆಚ್ಚಿಸುವಂತಹ ಸ್ಥಾನಮಾನ ಕೊಡಿ, ಚುನಾವಣೆಯಲ್ಲಿ ಅವರೊಬ್ಬ ಜನಪ್ರತಿನಿಧಿಯಾಗುವ ಅವಕಾಶ ಕೊಡಿ, ಉನ್ನತ ಸ್ಥಾನ-ಮಾನ ಕೊಡಿ. ಅದನ್ನು ಅವರು ನಿಭಾಯಿಸುತ್ತಾರೆ ಎಂಬ ನಂಬಿಕೆ ನನಗಿದೆ. ಇದರಿಂದ ಒಕ್ಕಲಿಗರ ಜವಾಬ್ದಾರಿಯು ಹೆಚ್ಚಾಗಿ ಸುಭದ್ರ ಸರಕಾರಕ್ಕೆ ಒಕ್ಕಲಿಗರ ಕೊಡುಗೆ ಸಿಗಲಿದೆ. ಆದರೆ ಇದರ ದುರುಪಯೋಗವಾದರೆ ನಾವೀಗ ನೋಡುವ ದುರಂತವೂ ಆದೀತು. ಜಗ್ಗೇಶ್ ಅವರು ಧರ್ಮಕ್ಕೆ ತಲೆಬಾಗುವ, ತಲೆ ಕೊಡುವವರಾಗಿರುವುದರಿಂದ ಅವರಿಗೆ ಸ್ಥಾನಮಾನ ಕೊಟ್ಟರೆ ಅದನ್ನು ಸುಸೂತ್ರವಾಗಿ ನಿಭಾಯಿಸುತ್ತಾರೆ. ಒಂದೆಡೆ ಕಣ್ಣಿಗೆ ಕಾಣುವ ಮತ್ತೊಂದಡೆ ಕಣ್ಣಿಗೆ ಕಾಣದ ಗ್ರಹ ಲೆಕ್ಕಾಚಾರದ(ಜಾತಕ) ಮಾತಾಗಿದೆ.

Tags: BJPCaste AwarenesscongressJaggeshKannada ArticleKarnataka politicsMahabharataPrakash AmmannayaTwitterVokkaliga Communityಒಕ್ಕಲಿಗ ಸಮುದಾಯಕರ್ನಾಟಕ ರಾಜಕೀಯಜಗ್ಗೇಶ್ಜಾತಿ ಜಾಗೃತಿಜಾತಿವಾದಪ್ರಕಾಶ್ ಅಮ್ಮಣ್ಣಾಯಬಿಜೆಪಿಮಹಾಭಾರತ
Share208Tweet123Send
Previous Post

ಕೇಂದ್ರ, ರಾಜ್ಯದ ಸೌಲಭ್ಯಗಳನ್ನು ಜನರಿಗೆ ತಲುಪಿಸಿ: ಸಚಿವ ಕೆ.ಎಸ್. ಈಶ್ವರಪ್ಪ ಕರೆ

Next Post

ನಮ್ಮ ಪ್ರಧಾನಿ-ನಮ್ಮ ಹೆಮ್ಮೆ: ವಿಶ್ವವನ್ನೇ ಆಶ್ಚರ್ಯಚಕಿತಗೊಳಿಸಿದೆ ಮೋದಿಯವರ ಆ ಒಂದು ಸರಳತೆ ಕೆಲಸ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ನಮ್ಮ ಪ್ರಧಾನಿ-ನಮ್ಮ ಹೆಮ್ಮೆ: ವಿಶ್ವವನ್ನೇ ಆಶ್ಚರ್ಯಚಕಿತಗೊಳಿಸಿದೆ ಮೋದಿಯವರ ಆ ಒಂದು ಸರಳತೆ ಕೆಲಸ

ನಮ್ಮ ಪ್ರಧಾನಿ-ನಮ್ಮ ಹೆಮ್ಮೆ: ವಿಶ್ವವನ್ನೇ ಆಶ್ಚರ್ಯಚಕಿತಗೊಳಿಸಿದೆ ಮೋದಿಯವರ ಆ ಒಂದು ಸರಳತೆ ಕೆಲಸ

Leave a Reply Cancel reply

Your email address will not be published. Required fields are marked *

  • Trending
  • Latest
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಸಾಗರ ಮಾರಿಕಾಂಬಾ ಜಾತ್ರೆಗೆ ಯಶವಂತಪುರ-ತಾಳಗುಪ್ಪ 2 ಸ್ಪೆಷಲ್ ರೈಲುಗಳು | ಹೀಗಿದೆ ಡೀಟೇಲ್ಸ್

January 31, 2026
ಫೆ.7, 8ರಂದು ಮಾರಿಕಾಂಬಾ ಕ್ರಿಕೆಟ್ ಪಂದ್ಯಾವಳಿ

ಫೆ.7, 8ರಂದು ಮಾರಿಕಾಂಬಾ ಕ್ರಿಕೆಟ್ ಪಂದ್ಯಾವಳಿ

February 5, 2026
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ | ಅಬಕಾರಿ ಸಚಿವರ ರಾಜೀನಾಮೆಗೆ ಬಿಜೆಪಿ ಅಗ್ರಹ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ | ಅಬಕಾರಿ ಸಚಿವರ ರಾಜೀನಾಮೆಗೆ ಬಿಜೆಪಿ ಅಗ್ರಹ

February 5, 2026
ಶಿವಮೊಗ್ಗ | ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್’ನಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಶಿವಮೊಗ್ಗ | ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್’ನಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

February 5, 2026
ಕೃಷಿ ತ್ಯಾಜ್ಯದಿಂದ ನವೀನ ಪ್ಯಾಕೇಜಿಂಗ್ ಪರಿಹಾರ ಅಭಿವೃದ್ಧಿಪಡಿಸಲು ಅಮೆಜಾನ್ – ಐಐಟಿ ರೂರ್ಕಿ ಸಹಭಾಗಿತ್ವ

ಕೃಷಿ ತ್ಯಾಜ್ಯದಿಂದ ನವೀನ ಪ್ಯಾಕೇಜಿಂಗ್ ಪರಿಹಾರ ಅಭಿವೃದ್ಧಿಪಡಿಸಲು ಅಮೆಜಾನ್ – ಐಐಟಿ ರೂರ್ಕಿ ಸಹಭಾಗಿತ್ವ

February 5, 2026
ಅಮಚವಾಡಿ 2 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಳ್ಳಿ ಮಹೋತ್ಸವ ಸಂಭ್ರಮ

ಅಮಚವಾಡಿ 2 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಳ್ಳಿ ಮಹೋತ್ಸವ ಸಂಭ್ರಮ

February 5, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL