ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ದೇಶದ ಚಿಲ್ಲರೆ ಹಣದುಬ್ಬರದ ದರವು ಅಕ್ಟೋಬರ್ ತಿಂಗಳಿನಲ್ಲಿ 4.62ರಷ್ಟು ಏರಿಕೆಯಾಗಿದ್ದು, ಇದರ ಪರಿಣಾಮವಾಗಿ ಕೆಲವೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ಸರ್ಕಾರಿ ಮೂಲಗಳ ಮಾಹಿತಿಯಂತೆ, ಹಿಂದಿನ ತಿಂಗಳಲ್ಲಿ ಶೇ.3.99ಕ್ಕೆ ಹೋಲಿಸಿದರೆ ಅಕ್ಟೋಬರ್ನಲ್ಲಿ ವಾರ್ಷಿಕ ಚಿಲ್ಲರೆ ಹಣದುಬ್ಬರ ಹೆಚ್ಚಾಗಿದೆ.
ಅತಿಯಾದ ಮತ್ತು ಅನಿರೀಕ್ಷಿತ ಮಳೆಯಿಂದಾಗಿ ಸಾರಿಗೆಯಲ್ಲಿ ಅಡ್ಡಿ ಉಂಟಾದ ಕಾರಣ ತರಕಾರಿಗಳು, ಮಾಂಸ ಮತ್ತು ಮೀನು ಮತ್ತು ಮೊಟ್ಟೆಯ ಬೆಲೆಯಲ್ಲಿ ಏರಿಕೆ ಕಂಡುಬರುತ್ತದೆ. ಬೇಡಿಕೆ-ಪೂರೈಕೆ ಹೊಂದಿಕೆಯಾಗದ ಕಾರಣ ದ್ವಿದಳ ಧಾನ್ಯಗಳಲ್ಲಿನ ಹಣದುಬ್ಬರವು ಹೆಚ್ಚಿನ ಮಟ್ಟದಲ್ಲಿದೆ.
ಆದಾಗ್ಯೂ, ಬೇಡಿಕೆಯ ವಿಶಾಲ ಆಧಾರಿತ ದೌರ್ಬಲ್ಯದಿಂದಾಗಿ ಕೋರ್ ಹಣದುಬ್ಬರವು ಅಕ್ಟೋಬರ್ನಲ್ಲಿ 3.44ರಷ್ಟು ಮತ್ತು ಸೆಪ್ಟೆಂಬರ್ನಲ್ಲಿ 4.01ರಷ್ಟು ಕ್ಕೆ ಕುಸಿದಿದೆ.
Get In Touch With Us info@kalpa.news Whatsapp: 9481252093

















